ನಮ್ಮಪ್ಪ ನಮ್ಮನೆಗೆ ಚಂದಮಾಮ ತರಿಸ್ತಿದ್ರು. ನಾವ್ ಮಕ್ಕಳು ಓದಲಿ ಅಂತ. ನಮ್ಮ ಚಿಕ್ಕಪ್ಪ ಬಾಲಮಿತ್ರ ತರಿಸೋರು. ಚಂದಮಾಮನೇ ಚೆಂದ ಅಂತ ನಾವ್ಗೋಳು, ಬಾಲಮಿತ್ರ ಚಂದ ಅಂತ ನಮ್ಮ ಚಿಕ್ಕಪ್ಪನ ಮಕ್ಕಳು ಮಾತಾಡ್ಕೋತಿದ್ದು ಈಗ್ಲೂ ನೆಪ್ಪೈತೆ. ಎಂಟಿವಿ ಆಚಾರ್ಯರ ಭೀಮನಿಗೂ ರಮಾನಂದ ಸಾಗರರ ಭೀಮನಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುವುದು ಈ “ಅಜಗಜಾಂತರ”ಕ್ಕೆ ಕೊಡಬಹುದಾದ ಒಂದು ಒಳ್ಳೆಯ ಉದಾಹರಣೆ. ಇನ್ನು ಬೇತಾಳನ ಕಥೆಗಳಂತೂ ಯಾವ ಕ್ವಿಜ್ ಪ್ರೋಗ್ರಾಮನ್ನೂ ಮೀರಿಸುವಂಥದು. ಅದರ ಮುಂದೆ ಡೆರಿಕ್ ಒಬ್ರೇನು ಏನೇನೂ ಅಲ್ಲ.
ಮಲ್ಲೇಶ್ವರದಲ್ಲಿ ನಾನು ಓದುತ್ತಿದ್ದ ನಿರ್ಮಲರಾಣಿ ಶಾಲೆಯಲ್ಲಿ ಅಮರ ಚಿತ್ರಕಥೆಗಳ ದೊಡ್ಡ ಸಂಗ್ರಹವಿತ್ತು. ಆಗ ಅದು ಕೊಎಡ್ ಇಸ್ಕೂಲು. ಆರನೇ ತರಗತಿಯಲ್ಲಿದ್ದಾಗ ಪಕ್ಕದ ಕಪಾಟಿನಲ್ಲಿದ್ದ ಆ ಪುಸ್ತಕಗಳನ್ನು ಸದ್ದಿಲ್ಲದೇ ತೆಗೆದುಕೊಂಡು ಪಠ್ಯಪುಸ್ತಕದ ಕೆಳಗಿಟ್ಟುಕೊಂಡು ಕದ್ದುಮುಚ್ಚಿ ಓದುತ್ತಿದ್ದ ದಿನಗಳವು. ನಳದಮಯಂತಿ, ಶಕುಂತಲಾ ಹೀಗೆ ಒಂದೆರಡಲ್ಲ ನೂರಾಎರಡು. ನಮ್ಮ ಆ ಕಳ್ಳ ಓದು ಟೀಚರಾಗಿದ್ದ ಮದರ್ ಫ್ರಾನ್ಸಿಸ್ಕ ಅವರಿಗೆ ಗೊತ್ತಾಗುತ್ತಲೇ ಇರಲಿಲ್ಲ. ಪಕ್ಕದ್ಮನೆ ಹುಡುಗಿ ರಮಾಳನ್ನು ಕೀಟಲೆ ಮಾಡಿದಾಗಲೆಲ್ಲ ಅವಳು ಈ ಕಳ್ಳ ಓದಿನ ಬಗ್ಗೆ ಮದರ್ಗೆ ಹೇಳುವುದಾಗಿ ಹೆದರಿಸುತ್ತಿದ್ದಳು. ಸುಜಾತ ಅಂತ ಇನ್ನೊಂದು ಹುಡುಗಿ ಇದ್ದಳು. ಸಂಪಿಗೆ ರಸ್ತೆಯಲ್ಲಿ ಅವರ ಜ್ಯೂಸ್ ಅಂಗಡಿ ಇದೆ. ನನ್ನನ್ನು ಹೆದರಿಸೋದರಲ್ಲಿ ಆಕೆ ರುಸ್ತುಂ. ಹುಡುಗರಲ್ಲಿ ರಮೇಶ, ನಾಗರಾಜ, ಭಾಸ್ಕರ, ದಯಾನಂದ ಮುಂತಾದ ಗೆಳೆಯರ ನೆನಪಾಗುವುದೂ ಈ ಅಮರ ಚಿತ್ರಕತೆಗಳ ನೆರಳಿನಲ್ಲೇ. ಅಮರ ಚಿತ್ರಕಥೆ (ಐಬಿಎಚ್ ಪ್ರಕಾಶನ) ಯ ರೂಪದಲ್ಲಿ ಮನೋವಿಕಾಸದ ಹಾದಿಯಲ್ಲಿ ಬೈಬಲ್ಲಿನ ಜೊತೆಗೆ ಪುರಾಣವನ್ನೂ ರಕ್ತಗತ ಮಾಡಿಸಿದ್ದಕ್ಕಾಗಿ ಕಾರಂತರನ್ನು ನಾನು ಮರೆಯಲಾಗದು.
ನಾನು ಹೈಸ್ಕೂಲು (ಕಾಡುಮಲ್ಲೇಶ್ವರನ ಗುಡಿಯ ಬಳಿಯಿದ್ದ ಶಾರದಾ ವಿದ್ಯಾನಿಕೇತನ) ಸೇರುವ ವೇಳೆಗಾಗಲೇ ಕಾರಂತರ ಕಿರಿಯರ ವಿಶ್ವಕೋಶ (ನವಕರ್ನಾಟಕ ಪಬ್ಲಿಕೇಷನ್ಸ್) ಬಂದಿತ್ತು. ಆದರೆ ಅದು ಶಾಲೆಯ ಕಪಾಟಿನಲ್ಲಿ ಬಂಧಿಯಾಗಿತ್ತು. ನಾವು ಕೆಲ ಹುಡುಗರು ಈಸ್ಟ್ ಪಾರ್ಕ್ ಮೈದಾನದಲ್ಲಿ ಆಡ್ಕಂತಾ ಇದ್ದೋರು ಒಂದು ದಿನ ಕಲ್ ಬಿಲ್ಡಿಂಗ್ ಅಂತಾರಲ್ಲ, ಅದೇ ಹದಿನೆಂಟನೇ ಕ್ರಾಸ್ ಬಸ್ಟ್ಯಾಂಡ್ ಹತ್ರ ಇರೋ ಗೋರ್ಮೆಂಟಿಸ್ಕೂಲು, ಅದರಾಗೆ ಒಂದು ಲೇಬ್ರರಿ ಇರೋದ್ನ ಕಂಡಿಡಿದೋ. ಬಾಕ್ಲು ತೆಗೆದೇ ಇತ್ತು. ಅದ ನೋಡ್ಕಳೋರು ಒಬ್ರು ಬುಟ್ರೆ ಬ್ಯಾರೆ ಯಾರೂ ಇತ್ತಿಲ್ಲ. ಒಳೀಕ್ ಬರ್ಬೋದಾ ಅಂತ ಕೇಳಿದ್ದೇಟ್ಗೆ ಅಯ್ ಬನ್ನಿ ಓದ್ಕಳಿ ಅನ್ನೋದಾ. ಆಗ ಶುರುವಾಯ್ತು ನನ್ನ ಅಧ್ಯಯನದ ಪ್ರಸ್ಥಾನ. ಬಂಗಾಳ ದೇಶದ ಜಾನಪದ ಕತೆಗಳು, ಗೋನೂಝಾನ ಕತೆಗಳು, ಭಾರತಭಾರತಿ ಪುಸ್ತಕ ಸಂಪದ, ಅರೇಬಿಯನ್ ನೈಟ್ಸ್, ಮಕ್ಕಳ ಮಂಛೌಸನ್ ಹೀಗೆ ಅವೆಲ್ಲ ಆ ಕಾಲಕ್ಕೇ ಸರಿ.
ನನ್ನ ಯೌವನಕಾಲಕ್ಕೆ ಬಹುವಾಗಿ ಕಾಡಿದ್ದು ಖಂಡೇಕರರ ’ಯಯಾತಿ’ (ಇನಾಂದಾರ್ ಅನುವಾದ). ಆಮ್ಯಾಕೆ ಕೊಂಚ ಬಲಿತ ಮ್ಯಾಗೆ ಓದಿದ್ದು ಭೈರಪ್ನೋರು ಬರೆದಿರೋ ಪರ್ವ ಅಂತ ಮಾಬಾರ್ತದ ಕತೆ, ಓ ಯಾಪಾಟಿ ಐನಾತಿನನ್ಮಗಂದೂ ಅಂತೀರಾ? ತೇಜಸ್ವಿ ಅಂಬೋರು ಬರ್ದಿರೋ ಕಿರಗೂರಿನ ಗಯ್ಯಾಳಿಗಳು ಓದಿವ್ರಾ? ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲು? ಊ.. ದೇಸ ನೋಡ್ಬೇಕು ಕೋಸ ಓದ್ಬೇಕು ಅಂತಾರಲ್ಲ ದಿಟವೇನೇಯ. ಪುಸ್ತಕ ಓದ್ಬೇಕೂ ಅನ್ನೋ ತೆವಲು ನಿಮ್ಗೂ ಇದ್ರೆ ನೀವೂನೂ ಇಂಜಿನ್ ಡಿವಿಜನ್ನಾಗಿರೋ ನಮ್ ಕನ್ನಡ ಲೇಬ್ರೇರಿಗೆ ಬರಬೇಕ್ರ.
ಶನಿವಾರ, ಮೇ 3, 2008
ಸೋಮವಾರ, ಮಾರ್ಚ್ 17, 2008
ಬಿ ಎಲ್ ರೈಸ್
ಬಿ ಎಲ್ ರೈಸ್ ಅವರ ಅತಿ ದೊಡ್ಡ ವಿದ್ವತ್ಪೂರ್ಣ ಕೆಲಸವೆಂದರೆ ಪುರಾತತ್ವ ಇಲಾಖೆಯ ಪೂರ್ಣಕಾಲದ ಅಧಿಕಾರಿಯಾಗಿ ಹದಿನಾರು ವರ್ಷಗಳ ಕಾಲ ಹಳ್ಳಿಹಳ್ಳಿಗಳನ್ನೂ ಕಾಡುಮೇಡುಗಳನ್ನೂ ಅಲೆದು ೮೮೬೯ ಕನ್ನಡ ಶಾಸನಗಳನ್ನು ಹನ್ನೆರಡು ಸಂಪುಟಗಳಲ್ಲಿ “ಎಪಿಗ್ರಾಫಿಯಾ ಕರ್ನಾಟಿಕಾ” ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ್ದು. ಕ್ರಿಸ್ತಶಕ ೧೮೬೦ರಿಂದ ೧೯೦೬ರವರೆಗೆ ಅವಿಶ್ರಾಂತವಾಗಿ ದುಡಿದ ಇವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿನ ಹ್ಯಾರೋ ಪಟ್ಟಣದಲ್ಲಿ ನೆಲೆನಿಂತರು. ಅವರು ಇಳಿವಯಸ್ಸಿನಲ್ಲಿರುವಾಗ ಲಂಡನ್ನಿನಲ್ಲಿ ನಡೆದ ವಿಶ್ವ ವಾಣಿಜ್ಯ ಮೇಳದಲ್ಲಿ ಮೈಸೂರು ಸಂಸ್ಥಾನದ ಮಳಿಗೆಯಲ್ಲಿ ನಮ್ಮ ಉತ್ಪನ್ನಗಳಾದ ಗಂಧದೆಣ್ಣೆ, ಕಬ್ಬಿಣ ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ರೈಸ್ ಅವರು ಕನ್ನಡದಲ್ಲಿಯೇ ತಮ್ಮ ಸಂಭಾಷಣೆ ಆರಂಭಿಸಿದರು. ಮಳಿಗೆಯ ಪ್ರತಿನಿಧಿಗಳು ಇಂಗ್ಲಿಷಿನಲ್ಲಿಯೇ ಉತ್ತರಿಸುತ್ತಿದ್ದುದನ್ನು ಗಮನಿಸಿ ತಡೆದ ಅವರು “ದಯವಿಟ್ಟು ಕನ್ನಡದಲ್ಲಿ ಮಾತನಾಡಿ, ಎಷ್ಟು ಇಂಪಾದ ಭಾಷೆ ಅದು” ಎಂದರಂತೆ. ಇದು ಅವರ ಅನುಪಮ ಕನ್ನಡಪ್ರೀತಿಗೆ ಸಾಕ್ಷಿ.
ನಾನಂತೂ ಅವರನ್ನು ಬೆಂಗಳೂರಿಗ ಮೇಲಾಗಿ ಕನ್ನಡಿಗ ಎಂದೇ ಗುರುತಿಸುತ್ತೇನೆ. ನನ್ನ ಪ್ರಶ್ನೆಯಲ್ಲಿ ಅವರನ್ನು ವಿದೇಶೀ ಎಂದು ಸಂಬೋಧಿಸಿದ್ದೇನೆ, ಏಕೆಂದರೆ ನಾಡಪ್ರೇಮದಿಂದ ಅವರು ಏನೇ ಮಾಡಿದರೂ ನಮ್ಮ ದೇಶಸ್ಥರಿಗೆ ಅದು ಮತಾಂತರದ ಕ್ರಿಯೆಯಾಗಿ ತೋರುತ್ತದೆ ಅಥವಾ ಇಂಡಿಯಾವನ್ನು ಎಂದಾದರೊಂದು ದಿನ ತಮ್ಮ ಕಿಸೆಯಲ್ಲಿ ಹಾಕಿಕೊಂಡು ಓಡಿಹೋಗುವರೆಂಬಂತೆ ತೋರುತ್ತದೆ.
(ಕೆಂಪುಕಪ್ಪುಅದ್ವಾನಿ ಎಂಬ ರಾಜಕಾರಣಿ ಸ್ವತಃ ತಾವು ವಿದೇಶೀಯಾಗಿದ್ದರೂ ಇಂಡಿಯಾವು ತಮ್ಮದೆಂಬಂತೆ ವರ್ತಿಸುತ್ತಾರೆ. ಇಂಡಿಯಾದಲ್ಲಾಗುವ ಯಾವುದೇ ವಿಕೋಪವು ಅವರಿಗೆ ಪಾಕಿಸ್ತಾನದ ಕೈವಾಡ ಎಂಬಂತೆ ತೋರುತ್ತದೆ. ಇಂಡಿಯಾದ ಸೊಸೆಯಾಗಿ ಇಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಒಬ್ಬ ಹೆಣ್ಣುಮಗಳು ಅವರಿಗೆ ಕನಸಿನಲ್ಲೂ ಕಾಡುತ್ತಾಳೆ. ಅದಕ್ಕಾಗಿಯೇ ಅವರು ವೋ ವಿಲಾಯ್ತೀ ಔರತ್ ಎಂದು ಆಗಾಗ್ಗೆ ಬಡಬಡಿಸುತ್ತಿರುತ್ತಾರೆ. ಈ ಮನೋಭಾವ ಇಂದು ನಮ್ಮ ದೇಶಸ್ಥರಲ್ಲಿ ಈಗೀಗ ಬಹಳವಾಗುತ್ತಿದೆ).
ನಾನಂತೂ ಅವರನ್ನು ಬೆಂಗಳೂರಿಗ ಮೇಲಾಗಿ ಕನ್ನಡಿಗ ಎಂದೇ ಗುರುತಿಸುತ್ತೇನೆ. ನನ್ನ ಪ್ರಶ್ನೆಯಲ್ಲಿ ಅವರನ್ನು ವಿದೇಶೀ ಎಂದು ಸಂಬೋಧಿಸಿದ್ದೇನೆ, ಏಕೆಂದರೆ ನಾಡಪ್ರೇಮದಿಂದ ಅವರು ಏನೇ ಮಾಡಿದರೂ ನಮ್ಮ ದೇಶಸ್ಥರಿಗೆ ಅದು ಮತಾಂತರದ ಕ್ರಿಯೆಯಾಗಿ ತೋರುತ್ತದೆ ಅಥವಾ ಇಂಡಿಯಾವನ್ನು ಎಂದಾದರೊಂದು ದಿನ ತಮ್ಮ ಕಿಸೆಯಲ್ಲಿ ಹಾಕಿಕೊಂಡು ಓಡಿಹೋಗುವರೆಂಬಂತೆ ತೋರುತ್ತದೆ.
(ಕೆಂಪುಕಪ್ಪುಅದ್ವಾನಿ ಎಂಬ ರಾಜಕಾರಣಿ ಸ್ವತಃ ತಾವು ವಿದೇಶೀಯಾಗಿದ್ದರೂ ಇಂಡಿಯಾವು ತಮ್ಮದೆಂಬಂತೆ ವರ್ತಿಸುತ್ತಾರೆ. ಇಂಡಿಯಾದಲ್ಲಾಗುವ ಯಾವುದೇ ವಿಕೋಪವು ಅವರಿಗೆ ಪಾಕಿಸ್ತಾನದ ಕೈವಾಡ ಎಂಬಂತೆ ತೋರುತ್ತದೆ. ಇಂಡಿಯಾದ ಸೊಸೆಯಾಗಿ ಇಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಒಬ್ಬ ಹೆಣ್ಣುಮಗಳು ಅವರಿಗೆ ಕನಸಿನಲ್ಲೂ ಕಾಡುತ್ತಾಳೆ. ಅದಕ್ಕಾಗಿಯೇ ಅವರು ವೋ ವಿಲಾಯ್ತೀ ಔರತ್ ಎಂದು ಆಗಾಗ್ಗೆ ಬಡಬಡಿಸುತ್ತಿರುತ್ತಾರೆ. ಈ ಮನೋಭಾವ ಇಂದು ನಮ್ಮ ದೇಶಸ್ಥರಲ್ಲಿ ಈಗೀಗ ಬಹಳವಾಗುತ್ತಿದೆ).
ಶುಕ್ರವಾರ, ಫೆಬ್ರವರಿ 22, 2008
ಮತಾಂತರ
ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ. ಕ್ರೈಸ್ತಧರ್ಮದ ವ್ಯಾಖ್ಯೆಯಲ್ಲಿ ಕ್ರಿಸ್ತತತ್ವಗಳನ್ನು ಜಗತ್ತಿನೆಲ್ಲೆಡೆ ಸಾರಬೇಕೆನ್ನುವ ಕಾಳಜಿ ಇದೆಯೇ ಹೊರತು ಮತಾಂತರ ಮಾಡಬೇಕು ಎಂದಿಲ್ಲ. ಹಣದ ಎದುರಲ್ಲಿ, ಕತ್ತಿಯ ತುದಿಯಲ್ಲಿ ನಡೆಯುವ ಮತಾಂತರ ಮತಾಂತರವೇ ಅಲ್ಲವೆಂದು ಕ್ರೈಸ್ತಧರ್ಮ ಹೇಳುತ್ತದೆ. ಧಾರ್ಮಿಕತೆ ಗೊತ್ತಿಲ್ಲದ ರಾಜಕೀಯ ನಾಯಕರು ತಮ್ಮ ಸ್ವಲಾಭಕ್ಕಾಗಿ ಆ ರೀತಿ ಮಾಡಿದ್ದು ಇತಿಹಾಸದ ದುರಂತ. ಆದರೆ ಕ್ರೈಸ್ತಧರ್ಮ ಅದನ್ನು ಮಾನ್ಯಗೊಳಿಸಲಿಲ್ಲವೆಂಬುದೂ ಅಷ್ಟೇ ಸತ್ಯ. ವ್ಯಕ್ತಿಯೊಬ್ಬ ಪೂರ್ಣ ಪರಿವರ್ತನೆಗೊಂಡು ತಾನೇ ತಾನಾಗಿ ಕ್ರೈಸ್ತನಾಗುತ್ತೇನೆಂದು ಮುಂದೆ ಬಂದರೂ ಚರ್ಚು ಒಮ್ಮಿಂದೊಮ್ಮೆಲೇ ಕ್ರೈಸ್ತದೀಕ್ಷೆ ಕೊಟ್ಟುಬಿಡುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿನೀತಿಗಳಿವೆ. ಇದನ್ನರಿಯದ ಮೂಢಜನರು ಚರ್ಚಿಗೆ ತೆರಳಿ ತೀರ್ಥ ಪ್ರೋಕ್ಷಣೆಯಾದ ಕೂಡಲೇ ತಾವು ಕ್ರೈಸ್ತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಇತರರೂ ಇದು ಹೌದೆಂದು ತಿಳಿದುಕೊಳ್ಳುತ್ತಾರೆ. ಕ್ರೈಸ್ತಧರ್ಮವೆಂಬುದು ಕೆಲವರಿಗೆ ವಂಶಪಾರಂಪರ್ಯದ ಬಳುವಳಿ ಮತ್ತೆ ಕೆಲವರಿಗೆ ಅದು ಒಂದು ದಿವ್ಯ ಅನುಭವ.
ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು, ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ ಎಂಬುದು ಕ್ರೈಸ್ತಧರ್ಮದ ತಿರುಳು. ಈ ತತ್ವವನ್ನಾಚರಿಸಿದವನೇ ನಿಜಕ್ರೈಸ್ತ. ಕ್ರೈಸ್ತ ಎನಿಸಿಕೊಳ್ಳವುದು ಉದಾತ್ತ ಮನೋವಿಕಾಸದ ಪರಮಾವಧಿ. ಹಾಗೆ ನೋಡಿದರೆ ಮಹಾತ್ಮಗಾಂಧಿಯವರು ಒಬ್ಬ ಅಪ್ಪಟ ಕ್ರೈಸ್ತ. ಇದರರ್ಥ ಕ್ರಿಸ್ತನನ್ನು ಅರಿಯಲು ಚರ್ಚಿಗೇ ಹೋಗಬೇಕೆಂದಿಲ್ಲ. ವಿಪರ್ಯಾಸವೆಂದರೆ ನಮ್ಮ ಚರ್ಚಿನ ಎಷ್ಟೋ ಪಾದ್ರಿಗಳು ಬಿಪಪರು ಕ್ರೈಸ್ತರೇ ಅಲ್ಲ. ಶಾಲೆ ಆಸ್ಪತ್ರೆಗಳಲ್ಲಿ ಹಣ ಸುಲಿಯುವ ಮನುಷ್ಯತ್ವವಿಲ್ಲದ ಕ್ರೈಸ್ತ ಸಂನ್ಯಾಸಿನಿಯರೂ ಕ್ರೈಸ್ತರಲ್ಲ.
ಶತಮಾನಗಳ ಹಿಂದೆಯೂ ಚರ್ಚು ಹೀಗೆ ತನ್ನ ಮೇರೆ ಮಿರಿದಾಗ ಮಾರ್ಟಿನ್ ಲೂಥರನು ಬಂಡಾಯವೆದ್ದು ಚರ್ಚಿನ ಹುಳುಕುಗಳನ್ನು ಎತ್ತಿ ತೋರಿದ. ತರುವಾಯ ಚರ್ಚು ತನ್ನ ಆತ್ಮಶೋಧನೆ ನಡೆಸಿ ಸ್ವಜನಪಕ್ಷಪಾತವನ್ನೂ ರಾಜಕೀಯವನ್ನೂ ದೂರವಿಟ್ಟು ವಿಚಾರವಂತಿಕೆಗೆ ಹಾಗೂ ಪ್ರಗತಿಪರ ಧೋರಣೆಗೆ ಪಕ್ಕಾಗಿದೆ. ಇಂದು ಚರ್ಚು ಪವಿತ್ರಬೈಬಲ್ ಹಾಗೂ ತನ್ನದೇ ಆದ ನೀತಿಸಂಹಿತೆಗಳನ್ನು ಮುಂದಿಟ್ಟರೂ ನೆಲದ ನಿಯಮಗಳನ್ನೂ ವಿಜ್ಞಾನದ ಆವಿಷ್ಕಾರಗಳನ್ನೂ ಗೌರವಿಸುತ್ತಾ ಬರುತ್ತಿದೆ.
ಇನ್ನೂ ಕೆಲವರು ಯೂರೋಪ್ ಅಮೆರಿಕೆಗಳಲ್ಲಿರುವ ಎಲ್ಲರೂ ಕ್ರೈಸ್ತರೆಂದು ಭಾವಿಸಿದಂತಿದೆ. ಅಲ್ಲಿನ ಚರ್ಚುಗಳು ಹಾಳು ಸುರಿಯುತ್ತಿವೆ ಎಂಬ ಅಂಶ ಅವರಿಗೆ ತಿಳಿದಂತಿಲ್ಲ. ಅಲ್ಲಿನ ಜನ ಕ್ರೈಸ್ತಧರ್ಮಕ್ಕಾಗಿ ಬೇರೊಂದು ದೇಶದ ಮೇಲೆ ದ್ವೇಷ ಸಾಧಿಸುತ್ತಾರೆಂಬ ಅಥವಾ ಯುದ್ಧ ಸಾರುತ್ತಾರೆಂಬ ಮಾತು ಬಾಲಿಶವಾಗುತ್ತದೆ. ಏಕೆಂದರೆ ಎರಡು ಮಹಾಯುದ್ಧಗಳು ನಡೆದದ್ದು ರಾಜಕೀಯ ಹಿತಾಸಕ್ತಿಗಾಗಿ ಎಂಬುದು ಸರ್ವವೇದ್ಯ ಸಂಗತಿ. ಅಂತೆಯೇ ಅಮೆರಿಕದ ವಿಯೆಟ್ನಾಂ ಮೇಲಿನ ಯುದ್ಧವು ಜಗತ್ತಿನ ಪೂರ್ವಭಾಗದಲ್ಲಿ ಅದರ ಆಧಿಪತ್ಯ ಸ್ಥಾಪಿಸುವ ಹುನ್ನಾರವಾಗಿತ್ತು, ಇರಾಕಿನ ಮೇಲಿನ ದಾಳಿ ವ್ಯಾಪಾರೀ ಕಾರಣವಾಗಿತ್ತು ಹಾಗೂ ಆಫ್ಘನ್ ಮೇಲಿನ ದಾಳಿ ಸೇಡಿನ ಕ್ರಿಯೆಯಾಗಿತ್ತು. ಇವಾವುದಕ್ಕೂ ಚರ್ಚು ತನ್ನ ಆಶೀರ್ವಾದ ಹಸ್ತ ತೋರಿಲ್ಲ. ಇವಾವುದೂ ಧರ್ಮಯುದ್ಧಗಳ ಪರಿಧಿಗೆ ಬರುವುದಿಲ್ಲ.
ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು, ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ ಎಂಬುದು ಕ್ರೈಸ್ತಧರ್ಮದ ತಿರುಳು. ಈ ತತ್ವವನ್ನಾಚರಿಸಿದವನೇ ನಿಜಕ್ರೈಸ್ತ. ಕ್ರೈಸ್ತ ಎನಿಸಿಕೊಳ್ಳವುದು ಉದಾತ್ತ ಮನೋವಿಕಾಸದ ಪರಮಾವಧಿ. ಹಾಗೆ ನೋಡಿದರೆ ಮಹಾತ್ಮಗಾಂಧಿಯವರು ಒಬ್ಬ ಅಪ್ಪಟ ಕ್ರೈಸ್ತ. ಇದರರ್ಥ ಕ್ರಿಸ್ತನನ್ನು ಅರಿಯಲು ಚರ್ಚಿಗೇ ಹೋಗಬೇಕೆಂದಿಲ್ಲ. ವಿಪರ್ಯಾಸವೆಂದರೆ ನಮ್ಮ ಚರ್ಚಿನ ಎಷ್ಟೋ ಪಾದ್ರಿಗಳು ಬಿಪಪರು ಕ್ರೈಸ್ತರೇ ಅಲ್ಲ. ಶಾಲೆ ಆಸ್ಪತ್ರೆಗಳಲ್ಲಿ ಹಣ ಸುಲಿಯುವ ಮನುಷ್ಯತ್ವವಿಲ್ಲದ ಕ್ರೈಸ್ತ ಸಂನ್ಯಾಸಿನಿಯರೂ ಕ್ರೈಸ್ತರಲ್ಲ.
ಶತಮಾನಗಳ ಹಿಂದೆಯೂ ಚರ್ಚು ಹೀಗೆ ತನ್ನ ಮೇರೆ ಮಿರಿದಾಗ ಮಾರ್ಟಿನ್ ಲೂಥರನು ಬಂಡಾಯವೆದ್ದು ಚರ್ಚಿನ ಹುಳುಕುಗಳನ್ನು ಎತ್ತಿ ತೋರಿದ. ತರುವಾಯ ಚರ್ಚು ತನ್ನ ಆತ್ಮಶೋಧನೆ ನಡೆಸಿ ಸ್ವಜನಪಕ್ಷಪಾತವನ್ನೂ ರಾಜಕೀಯವನ್ನೂ ದೂರವಿಟ್ಟು ವಿಚಾರವಂತಿಕೆಗೆ ಹಾಗೂ ಪ್ರಗತಿಪರ ಧೋರಣೆಗೆ ಪಕ್ಕಾಗಿದೆ. ಇಂದು ಚರ್ಚು ಪವಿತ್ರಬೈಬಲ್ ಹಾಗೂ ತನ್ನದೇ ಆದ ನೀತಿಸಂಹಿತೆಗಳನ್ನು ಮುಂದಿಟ್ಟರೂ ನೆಲದ ನಿಯಮಗಳನ್ನೂ ವಿಜ್ಞಾನದ ಆವಿಷ್ಕಾರಗಳನ್ನೂ ಗೌರವಿಸುತ್ತಾ ಬರುತ್ತಿದೆ.
ಇನ್ನೂ ಕೆಲವರು ಯೂರೋಪ್ ಅಮೆರಿಕೆಗಳಲ್ಲಿರುವ ಎಲ್ಲರೂ ಕ್ರೈಸ್ತರೆಂದು ಭಾವಿಸಿದಂತಿದೆ. ಅಲ್ಲಿನ ಚರ್ಚುಗಳು ಹಾಳು ಸುರಿಯುತ್ತಿವೆ ಎಂಬ ಅಂಶ ಅವರಿಗೆ ತಿಳಿದಂತಿಲ್ಲ. ಅಲ್ಲಿನ ಜನ ಕ್ರೈಸ್ತಧರ್ಮಕ್ಕಾಗಿ ಬೇರೊಂದು ದೇಶದ ಮೇಲೆ ದ್ವೇಷ ಸಾಧಿಸುತ್ತಾರೆಂಬ ಅಥವಾ ಯುದ್ಧ ಸಾರುತ್ತಾರೆಂಬ ಮಾತು ಬಾಲಿಶವಾಗುತ್ತದೆ. ಏಕೆಂದರೆ ಎರಡು ಮಹಾಯುದ್ಧಗಳು ನಡೆದದ್ದು ರಾಜಕೀಯ ಹಿತಾಸಕ್ತಿಗಾಗಿ ಎಂಬುದು ಸರ್ವವೇದ್ಯ ಸಂಗತಿ. ಅಂತೆಯೇ ಅಮೆರಿಕದ ವಿಯೆಟ್ನಾಂ ಮೇಲಿನ ಯುದ್ಧವು ಜಗತ್ತಿನ ಪೂರ್ವಭಾಗದಲ್ಲಿ ಅದರ ಆಧಿಪತ್ಯ ಸ್ಥಾಪಿಸುವ ಹುನ್ನಾರವಾಗಿತ್ತು, ಇರಾಕಿನ ಮೇಲಿನ ದಾಳಿ ವ್ಯಾಪಾರೀ ಕಾರಣವಾಗಿತ್ತು ಹಾಗೂ ಆಫ್ಘನ್ ಮೇಲಿನ ದಾಳಿ ಸೇಡಿನ ಕ್ರಿಯೆಯಾಗಿತ್ತು. ಇವಾವುದಕ್ಕೂ ಚರ್ಚು ತನ್ನ ಆಶೀರ್ವಾದ ಹಸ್ತ ತೋರಿಲ್ಲ. ಇವಾವುದೂ ಧರ್ಮಯುದ್ಧಗಳ ಪರಿಧಿಗೆ ಬರುವುದಿಲ್ಲ.
ಗುರುವಾರ, ಫೆಬ್ರವರಿ 21, 2008
ಯೇಸುಕ್ರಿಸ್ತ ಎಂಬ ಉಚ್ಚಾರಣೆ
ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು). ಗ್ರೀಕರ ಪ್ರಕಾರ ಅವರ ದೇವರ ಹೆಸರು AJAX ಎಂಬುದನ್ನು 'ಅಯಾಸ್' ಎಂದು ಉಚ್ಚರಿಸುವಂತೆ 'Jesus' ಎಂಬುದು 'ಯೇಸು' ಎಂದಾಯಿತು.
ಅದೇರೀತಿ ಜೆಹೋವ>ಯೆಹೋವ, ಜೂದ>ಯೂದ, ಜೋಸೆಫ್>ಯೋಸೆಫ್, ಜೋರ್ಡಾನ್>ಯೋರ್ದಾನ್, ಜೋನಾ>ಯೋನಾ, ಜೊವಾನ್ನ>ಯೊವಾನ್ನ, ಜೆರಿಕೋ>ಯೆರಿಕೋ, ಜೆರೆಮಿಯ>ಯೆರೆಮಿಯ, ಜೆಹೊಶುವ>ಯೆಹೊಶುವ ಇತ್ಯಾದಿಗಳನ್ನು ಹೆಸರಿಸಬಹುದು.
ಕನ್ನಡದ ಸಂದರ್ಭದಲ್ಲಿ ಕೆಲವರು ಯೇಸು ಎಂಬುದನ್ನು ಏಸು ಎಂದು ಬರೆಯುವುದನ್ನು ಕಂಡಿದ್ದೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ಜ ಮತ್ತು ಯ ಎರಡೂ ವ್ಯಂಜನಗಳೇ ಆಗಿವೆ. ಆದರೆ ಇಲ್ಲಿ ನಾವು ತಿಳಿದಂತೆ ಎ ಏ ಗಳು ನಮ್ಮ ಅಕ್ಷರಮಾಲೆಯಲ್ಲಿ ಸ್ವರಗಳಾಗಿ ಸ್ಥಾನ ಪಡೆದಿವೆ. ಮೇಲಿನ ಹೆಸರುಗಳಿಗೆ ಸ್ವರಗಳನ್ನು ಬಳಸುವುದಾದರೆ ಯೇಸುವನ್ನು ಏಸುವಾಗಿ, ಯೆಹೋವನನ್ನು ಎಹೋವನನ್ನಾಗಿ, ಜೆರಿಕೋವನ್ನು ಎರಿಕೋವನ್ನಾಗಿ ಮಾಡಬಹುದೇನೋ ಸರಿ. ಆದರೆ ಜೋಸೆಫ್, ಜೊವಾನ್ನ ಇತ್ಯಾದಿಗಳನ್ನು ಹೇಗೆ ಬರೆಯುವುದು?
ಅದೇರೀತಿ ಜೆಹೋವ>ಯೆಹೋವ, ಜೂದ>ಯೂದ, ಜೋಸೆಫ್>ಯೋಸೆಫ್, ಜೋರ್ಡಾನ್>ಯೋರ್ದಾನ್, ಜೋನಾ>ಯೋನಾ, ಜೊವಾನ್ನ>ಯೊವಾನ್ನ, ಜೆರಿಕೋ>ಯೆರಿಕೋ, ಜೆರೆಮಿಯ>ಯೆರೆಮಿಯ, ಜೆಹೊಶುವ>ಯೆಹೊಶುವ ಇತ್ಯಾದಿಗಳನ್ನು ಹೆಸರಿಸಬಹುದು.
ಕನ್ನಡದ ಸಂದರ್ಭದಲ್ಲಿ ಕೆಲವರು ಯೇಸು ಎಂಬುದನ್ನು ಏಸು ಎಂದು ಬರೆಯುವುದನ್ನು ಕಂಡಿದ್ದೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ಜ ಮತ್ತು ಯ ಎರಡೂ ವ್ಯಂಜನಗಳೇ ಆಗಿವೆ. ಆದರೆ ಇಲ್ಲಿ ನಾವು ತಿಳಿದಂತೆ ಎ ಏ ಗಳು ನಮ್ಮ ಅಕ್ಷರಮಾಲೆಯಲ್ಲಿ ಸ್ವರಗಳಾಗಿ ಸ್ಥಾನ ಪಡೆದಿವೆ. ಮೇಲಿನ ಹೆಸರುಗಳಿಗೆ ಸ್ವರಗಳನ್ನು ಬಳಸುವುದಾದರೆ ಯೇಸುವನ್ನು ಏಸುವಾಗಿ, ಯೆಹೋವನನ್ನು ಎಹೋವನನ್ನಾಗಿ, ಜೆರಿಕೋವನ್ನು ಎರಿಕೋವನ್ನಾಗಿ ಮಾಡಬಹುದೇನೋ ಸರಿ. ಆದರೆ ಜೋಸೆಫ್, ಜೊವಾನ್ನ ಇತ್ಯಾದಿಗಳನ್ನು ಹೇಗೆ ಬರೆಯುವುದು?
ಸಂಸ್ಕಾರದ ವಿವಾದ
ಅನಂತಮೂರ್ತಿಯವರು ಅತ್ಯಂತ ಪ್ರಗತಿಪರರಾಗಿದ್ದೂ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೇರವಾಗಿ ಸಂದೇಶ ಕೊಡಲು ಹೋಗದೇ ಕನ್ನಡಿ ತೋರಿದವರು. ಕ್ರಿಶ್ಚಿಯನ್ ಹೆಣ್ಣನ್ನು ಮದುವೆಯಾಗಿರುವುದರಿಂದ ತಮ್ಮ ಸಂಸ್ಕಾರ ಹೇಗಿದ್ದೀತು ಎಂಬುದರ ಸುಳಿವನ್ನು ಇಲ್ಲಿ ನೀಡಿದ್ದಾರೆಂದು ಕುಹಕಿಗಳು ಆಡಿಕೊಂಡರಂತೆ. ಪರ್ವ ಬರೆದ ಭೈರಪ್ಪ ಪರ್ವರ್ಟೆಡ್ ಭೈರಪ್ಪ ಎನ್ನಲಿಲ್ಲವೇ ಹಾಗೆ. ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಇಡೀ ವ್ಯವಸ್ಧೆಗೇ ಸಂಸ್ಕಾರ ಆಗಬೇಕಿದೆ ಎಂಬುದನ್ನು ಧ್ವನಿಸುತ್ತಾರೆ.
ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪ ಈ ಕೃತಿಯಲ್ಲಿ ಎರಡು ಧೃವಗಳಾಗಿ ನಿಲ್ಲುತ್ತಾರೆ. ಪ್ರಾಣೇಶಾಚಾರ್ಯ ಧರ್ಮಭೀರು ಹಾಗೂ ಜನತೆಗೆ ಬುದ್ಧಿ ಹೇಳಬಲ್ಲ ಸಾತ್ವಿಕ. ಆದರೆ ನಾರಾಯಣಪ್ಪ ಎಲ್ಲ ಧರ್ಮಕಟ್ಟಲೆಗಳನ್ನು ಧಿಕ್ಕರಿಸಿ ಚಂದ್ರಿಯನ್ನು ಮಡಗಿಕೊಂಡ ಲಂಪಟ. ಪ್ರಾಣೇಶಾಚಾರ್ಯನ ಪುರಾಣಕ್ಕಿಂತಲೂ ಜನಗಳಿಗೆ ನಾರಾಯಣಪ್ಪನ ಕ್ಯಾಸೆಟ್ ಮೋಡಿಯೇ ಹುಚ್ಚು ಹಿಡಿಸುತ್ತದೆ. ಹೀಗೆ ನಾರಾಯಣಪ್ಪ ವಾಸ್ತವದ ಸಂಕೇತವಾಗುತ್ತಾನೆ.
ನಾರಾಯಣಪ್ಪ ಸತ್ತ ಮೇಲೆ ಚಂದ್ರಿ ಬಂದು ಆತನಿಗೆ ಸಂಸ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರಾಣೇಶಾಚಾರ್ಯ ಹಿಂಜರಿದರೂ ಕೊನೆಗೆ ಹಾಸಿಗೆ ಹಿಡಿದಿರುವ ತನ್ನ ಪತ್ನಿಗಾಗಿ ಚಂದ್ರಿಯ ನೆರವನ್ನು ಪಡೆಯಬೇಕಾಗುತ್ತದೆ. ಚಂದ್ರಿಯ ಸಂಗದಲ್ಲಿ ಆತ ನೆಲದ ವಾಸನೆ ಏನೆಂದು ಅರಿಯುತ್ತಾನೆ ಹಾಗೆಯೇ ಪ್ರಾಣೇಶಾಚಾರ್ಯನ ಸನಿಹದಲ್ಲಿ ಆಕೆ ಆಗಸದ ಸಪ್ತರ್ಷಿ ಮಂಡಲವನ್ನು ದರ್ಶಿಸುತ್ತಾಳೆ. (ಇದು ಅಶ್ಲೀಲವೆನಿಸಿದರೆ ಓದಬೇಡಿ, ಅಷ್ಟೇ) ಈ ಕ್ರಿಯೆ ನಡೆದ ಮೇಲೆ ಪ್ರಾಣೇಶಾಚಾರ್ಯನಿಗೆ ತಾನು ತಪ್ಪು ಮಾಡಿದ ಅರಿವುಂಟಾಗಿ ಅಲ್ಲಿ ನಿಲ್ಲದೆ ಓಡಿಹೋಗುತ್ತಾನೆ. ಓಡಿ ಹೋದವನು ಹೋಟೆಲಿಗೆ ನುಗ್ಗಿ ಕಾಫಿ ಹೀರುತ್ತಾನೆ. ಮಡಿವಂತ ಬ್ರಾಹ್ಮಣರು ಹೋಟೆಲಿನಲ್ಲಿ ಕಾಫಿ ಕುಡಿಯುವುದೆಂದರೆ ನಿಷಿದ್ಧವೆನಿಸಿದ್ದ ಆ ಕಾಲದಲ್ಲಿ ಪ್ರಾಣೇಶಾಚಾರ್ಯನ ಕ್ರಿಯೆ ಬದಲಾವಣೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ನಾರಣಪ್ಪನ ಹೆಣದ ರೂಪದಲ್ಲಿ ನಮ್ಮ ದೇಶದ ಒಟ್ಟು ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಅದಕ್ಕೆ ಸಂಸ್ಕಾರ ಕೂಡಲೇ ಆಗಬೇಕು. ವ್ಯವಸ್ಥೆಯ ಅಂಗವಾದ ಚಂದ್ರಿಯಂಥ ಸೂಳೆಯರೂ ಸಂಸ್ಕಾರಕ್ಕಾಗಿ ಹಪಹಪಿಸುವಾಗ ಹೊಲಸಿನಲ್ಲೇ ಮುಳುಗಿರುವ ಕರ್ಮಠರು ಶಾಸ್ತ್ರಗಳ ತೌಲನಿಕ ಮೀಮಾಂಸೆಯಲ್ಲಿ ತೊಡಗಿದ್ದಾರೆ. ಆಗ ಅನ್ಯಧರ್ಮದ ಅನ್ಯಸಂಸ್ಕೃತಿಯ ಸಜ್ಜನನೊಬ್ಬ ಅವತರಿಸಿ ಸಂಸ್ಕಾರಗೈಯುವ ಪ್ರಕ್ರಿಯೆಯನ್ನು ಗಮನಿಸಿ ಸಮಾಜ ಪರಿವರ್ತನೆಗೆ ಇಂಬುಗೊಡಬೇಕಾದ ಶಿಕ್ಷಕರು ನೆಲದವಾಸನೆ ಮತ್ತು ನಕ್ಷತ್ರದರ್ಶನಗಳ ಜುಗಲಬಂದಿಯಲ್ಲಿ ತೊಡಗಿರುವುದೇ ನಮ್ಮ ಶಿಕ್ಷಣವ್ಯವಸ್ಥೆಯ ದುರಂತ.
ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪ ಈ ಕೃತಿಯಲ್ಲಿ ಎರಡು ಧೃವಗಳಾಗಿ ನಿಲ್ಲುತ್ತಾರೆ. ಪ್ರಾಣೇಶಾಚಾರ್ಯ ಧರ್ಮಭೀರು ಹಾಗೂ ಜನತೆಗೆ ಬುದ್ಧಿ ಹೇಳಬಲ್ಲ ಸಾತ್ವಿಕ. ಆದರೆ ನಾರಾಯಣಪ್ಪ ಎಲ್ಲ ಧರ್ಮಕಟ್ಟಲೆಗಳನ್ನು ಧಿಕ್ಕರಿಸಿ ಚಂದ್ರಿಯನ್ನು ಮಡಗಿಕೊಂಡ ಲಂಪಟ. ಪ್ರಾಣೇಶಾಚಾರ್ಯನ ಪುರಾಣಕ್ಕಿಂತಲೂ ಜನಗಳಿಗೆ ನಾರಾಯಣಪ್ಪನ ಕ್ಯಾಸೆಟ್ ಮೋಡಿಯೇ ಹುಚ್ಚು ಹಿಡಿಸುತ್ತದೆ. ಹೀಗೆ ನಾರಾಯಣಪ್ಪ ವಾಸ್ತವದ ಸಂಕೇತವಾಗುತ್ತಾನೆ.
ನಾರಾಯಣಪ್ಪ ಸತ್ತ ಮೇಲೆ ಚಂದ್ರಿ ಬಂದು ಆತನಿಗೆ ಸಂಸ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರಾಣೇಶಾಚಾರ್ಯ ಹಿಂಜರಿದರೂ ಕೊನೆಗೆ ಹಾಸಿಗೆ ಹಿಡಿದಿರುವ ತನ್ನ ಪತ್ನಿಗಾಗಿ ಚಂದ್ರಿಯ ನೆರವನ್ನು ಪಡೆಯಬೇಕಾಗುತ್ತದೆ. ಚಂದ್ರಿಯ ಸಂಗದಲ್ಲಿ ಆತ ನೆಲದ ವಾಸನೆ ಏನೆಂದು ಅರಿಯುತ್ತಾನೆ ಹಾಗೆಯೇ ಪ್ರಾಣೇಶಾಚಾರ್ಯನ ಸನಿಹದಲ್ಲಿ ಆಕೆ ಆಗಸದ ಸಪ್ತರ್ಷಿ ಮಂಡಲವನ್ನು ದರ್ಶಿಸುತ್ತಾಳೆ. (ಇದು ಅಶ್ಲೀಲವೆನಿಸಿದರೆ ಓದಬೇಡಿ, ಅಷ್ಟೇ) ಈ ಕ್ರಿಯೆ ನಡೆದ ಮೇಲೆ ಪ್ರಾಣೇಶಾಚಾರ್ಯನಿಗೆ ತಾನು ತಪ್ಪು ಮಾಡಿದ ಅರಿವುಂಟಾಗಿ ಅಲ್ಲಿ ನಿಲ್ಲದೆ ಓಡಿಹೋಗುತ್ತಾನೆ. ಓಡಿ ಹೋದವನು ಹೋಟೆಲಿಗೆ ನುಗ್ಗಿ ಕಾಫಿ ಹೀರುತ್ತಾನೆ. ಮಡಿವಂತ ಬ್ರಾಹ್ಮಣರು ಹೋಟೆಲಿನಲ್ಲಿ ಕಾಫಿ ಕುಡಿಯುವುದೆಂದರೆ ನಿಷಿದ್ಧವೆನಿಸಿದ್ದ ಆ ಕಾಲದಲ್ಲಿ ಪ್ರಾಣೇಶಾಚಾರ್ಯನ ಕ್ರಿಯೆ ಬದಲಾವಣೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ನಾರಣಪ್ಪನ ಹೆಣದ ರೂಪದಲ್ಲಿ ನಮ್ಮ ದೇಶದ ಒಟ್ಟು ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಅದಕ್ಕೆ ಸಂಸ್ಕಾರ ಕೂಡಲೇ ಆಗಬೇಕು. ವ್ಯವಸ್ಥೆಯ ಅಂಗವಾದ ಚಂದ್ರಿಯಂಥ ಸೂಳೆಯರೂ ಸಂಸ್ಕಾರಕ್ಕಾಗಿ ಹಪಹಪಿಸುವಾಗ ಹೊಲಸಿನಲ್ಲೇ ಮುಳುಗಿರುವ ಕರ್ಮಠರು ಶಾಸ್ತ್ರಗಳ ತೌಲನಿಕ ಮೀಮಾಂಸೆಯಲ್ಲಿ ತೊಡಗಿದ್ದಾರೆ. ಆಗ ಅನ್ಯಧರ್ಮದ ಅನ್ಯಸಂಸ್ಕೃತಿಯ ಸಜ್ಜನನೊಬ್ಬ ಅವತರಿಸಿ ಸಂಸ್ಕಾರಗೈಯುವ ಪ್ರಕ್ರಿಯೆಯನ್ನು ಗಮನಿಸಿ ಸಮಾಜ ಪರಿವರ್ತನೆಗೆ ಇಂಬುಗೊಡಬೇಕಾದ ಶಿಕ್ಷಕರು ನೆಲದವಾಸನೆ ಮತ್ತು ನಕ್ಷತ್ರದರ್ಶನಗಳ ಜುಗಲಬಂದಿಯಲ್ಲಿ ತೊಡಗಿರುವುದೇ ನಮ್ಮ ಶಿಕ್ಷಣವ್ಯವಸ್ಥೆಯ ದುರಂತ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)