ಅಂದು ಶುಭಶುಕ್ರವಾರದ ಮರುದಿನ ಪವಿತ್ರಶನಿವಾರದ ರಾತ್ರಿ ಸುಮಾರು ಹನ್ನೊಂದೂವರೆಯ ವೇಳೆ. ಕ್ರೈಸ್ತಭಕ್ತಾದಿಗಳು ಒಬ್ಬೊಬ್ಬರಾಗಿ ಚರ್ಚಿನ ಬಳಿಬಂದು ಸೇರುತ್ತಿದ್ದರು. ಚರ್ಚಿನ ದೀಪಗಳನ್ನು ಉದ್ದೇಶಪೂರ್ವಕವಾಗಿ ಆರಿಸಿದ್ದರಿಂದ ವಾತಾವರಣ ಕತ್ತಲುಮಯವಾಗಿತ್ತು ಮಾತ್ರವಲ್ಲ ಅಲ್ಲೊಂದು ತೆರನ ನಿಗೂಢಮೌನ ಆವರಿಸಿತ್ತು. ಬಂದಿದ್ದ ಜನಗಳಾರೂ ಒಬ್ಬರೊಬ್ಬರನ್ನು ಗುರುತುಹಿಡಿದು ಕೈಕುಲುಕಿ ಕಿಲಕಿಲ ನಕ್ಕು ಉಭಯ ಕುಶಲೋಪರಿಗಳ ಮಾತಾಡುತ್ತಿರಲಿಲ್ಲ. ಅಲ್ಲ ಏನಾಗಿದೆ ಇವರಿಗೆಲ್ಲ? ವಿಚಿತ್ರವೇನೆಂದರೆ ಅಲ್ಲಿ ಸ್ಮಶಾನ ಮೌನವಿತ್ತಾದರೂ ಎಲ್ಲ ಜನ ಸುಂದರವಾದ ಹೊಸಬಟ್ಟೆಗಳನ್ನು ಧರಿಸಿ ಬಂದಿದ್ದರು.
ಆಗಸದಲ್ಲಿದ್ದ ಪೂರ್ಣಚಂದಿರ ಮಾತ್ರ ಇನ್ನು ಸ್ವಲ್ಪ ಹೊತ್ತಿನಲ್ಲಿ ಏನೋ ಒಂದು ಘಟನೆ ನಡೆಯಲಿಕ್ಕಿದೆ, ಅದಕ್ಕೆ ತಾನು ಸಾಕ್ಷಿಯಾಗಲಿದ್ದೇನೆ ಎಂಬಂತೆಯೋ ಅಥವಾ ತನಗೆ ಎಲ್ಲವೂ ತಿಳಿದಿದೆ ಎಂಬಂತೆಯೋ ಸಂತೃಪ್ತ ಭಾವದಿಂದ ಮುಖವನ್ನು ಅರಳಿಸಿಕೊಂಡಿದ್ದ. ಚಂದ್ರನ ಹಾಲುಕಿರಣಗಳು ಬಿದ್ದು ಚರ್ಚಿನ ಗೋಪುರ ಮಿನುಗುತ್ತಿತ್ತು. ಚರ್ಚನ್ನು ಮತ್ತು ಅಲ್ಲಿನ ಪರಿಸರವನ್ನು ಹಾಲಿನಿಂದ ತೊಳೆದಂತೆ ತೋರುತ್ತಿತ್ತು.
ಅಲ್ಲೇ ಮೂಲೆಯಲ್ಲಿ ದೊಡ್ಡ ಕಬ್ಬಿಣದ ಕಡಾಯಿಯಲ್ಲಿ ಕೆಂಡ ತುಂಬಿತ್ತು. ಮಂದಮಾರುತದ ಸಂಚಲನಕ್ಕೆ ಆ ಕೆಂಡ ನಿಗಿನಿಗಿ ಹೊಳೆಯುತ್ತಿತ್ತು. ಅಷ್ಟರಲ್ಲೇ ಕೆಂಪುಬಿಳಿ ನಿಲುವಂಗಿ ಧರಿಸಿದ ಪೂಜಾಕಿಂಕರ ಬಾಲಕನೊಬ್ಬ ಚರ್ಚಿನ ಬದಿಯಿಂದ ಮರದ ಜಾಗಟೆ ಬಾರಿಸುತ್ತಾ ಬಂದ. ಇದು ಭಕ್ತಾದಿಗಳನ್ನು ಪ್ರಾರ್ಥನೆಗೆ ಆಹ್ವಾನಿಸುವ ಪರಿ. ಭಕ್ತಾದಿಗಳನ್ನು ಆಹ್ವಾನಿಸಲು ಚರ್ಚಿನ ಗಂಟೆಯನ್ನು ಮೊಳಗಿಸಬೇಕಲ್ಲವೇ ಎಂದು ಕೇಳದಿರಿ. ಏಕೆಂದರೆ ಹಿಂದಿನ ದಿನ ಶುಭಶುಕ್ರವಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಲ್ಲವೇ? ಅಂದೇ ಚರ್ಚಿನ ಗೋಪುರದ ದೊಡ್ಡಗಂಟೆ ಇರಲಿ ಉಳಿದ ಕೈಹಿಡಿಯ ಹಿತ್ತಾಳೆ ಗೊಂಚಲು ಗಂಟೆಗಳ ಕಿಂಕಿಣಿ ನಾದವನ್ನೂ,ಗಾನವೃಂದದ ವಾದ್ಯಮೇಳಗಳನ್ನೂ ನಿಶ್ಯಬ್ದಗೊಳಿಸಲಾಗಿತ್ತು. ಅಕಸ್ಮಾತ್ ಕೈತಾಗಿ ಶಬ್ದ ಮಾಡದಿರಲೆಂದು ಆ ಕಿರುಗಂಟೆಗಳ ನಾಲಿಗೆಗೆ ಬಟ್ಟೆ ಸುತ್ತಲಾಗಿತ್ತು. ಹಾಗಾಗಿ ಇಂದು ಮರದ ಕೈಜಾಗಟೆಯದೇ ರಾಜ್ಯಭಾರ.
ಜಾಗಟೆಯ ಶಬ್ದವನ್ನು ಅನುಸರಿಸಿ ಚರ್ಚಿನ ಪಾದ್ರಿಗಳು ಬಂದರು. ಅವರು ಶುಭ್ರ ಬಿಳಿವಸ್ತ್ರದ ಮೇಲೆ ಅಚ್ಚ ಬಿಳಿಯ ಜರತಾರಿ ಮೇಲಂಗಿ ಧರಿಸಿ ಕೈಯಲ್ಲಿ ಆಳೆತ್ತರದ ಮೇಣದ ಬತ್ತಿ ಹಿಡಿದಿದ್ದರು. ಮುಂದಿನ ಪ್ರಕ್ರಿಯೆಗಾಗಿ ಜನರೆಲ್ಲ ಕೆಂಡದ ಕಡಾಯಿಯ ಬಳಿ ಸುತ್ತುವರಿದರು. ಸ್ವಾಮಿಗಳು ಪವಿತ್ರಬೈಬಲ್ ಶ್ಲೋಕವೊಂದನ್ನು ಪಠಿಸಿ ಆ ಕೆಂಡದ ಮೇಲೆ ಕೈಚಾಚಿದರು. “ಅಕಾರನೂ ನೀನೇ ಸಕಾರನೂ ನೀನೇ, ಆದಿಯೂ ನೀನೇ ಅಂತ್ಯವೂ ನೀನೇ, ಕೆಂಡದಲ್ಲಿ ಅಡಗಿದ ಜ್ಯೋತಿಯಂತೆ, ಮೊಟ್ಟೆಯಲ್ಲಿ ಅಡಗಿದ ಜೀವದ ಪಕ್ಷಿಯಂತೆ, ಮೃತ್ಯುಂಜಯನಾಗಿ ಎದ್ದು ಬಾರಾ ಯೇಸುಕ್ರಿಸ್ತ” ಎಂದೆನ್ನುತ್ತಾ ಕೆಂಡವನ್ನು ಊದಿ ಜ್ವಾಲೆಯನ್ನು ಪುಟಿದೆಬ್ಬಿಸಿದರು. ಆ ಜ್ವಾಲೆಯಿಂದ ಮೇಣದ ಬತ್ತಿಯನ್ನು ಹೊತ್ತಿಸಿ ಅದನ್ನು ಮೇಲೆತ್ತಿ ಹಿಡಿದು “ಇಗೋ! ಕ್ರಿಸ್ತನ ಬೆಳಕು” ಎಂದು ಸಾರಿದರು. ಭಕ್ತಾದಿಗಳೆಲ್ಲ ಭಾವಪರವಶರಾಗಿ “ದೇವರಿಗೆ ಕೃತಜ್ಞತೆ ಸಲ್ಲಲಿ” ಎಂದು ಉದ್ಘೋಷಿಸಿದರು.
ಹೀಗೆ ಆ ದೊಡ್ಡ ಮೇಣದ ಬತ್ತಿ ಪ್ರದೀಪವಾಗಿ ಭಕ್ತಾದಿಗಳೆಲ್ಲರ ಮೇಣದ ಬತ್ತಿಗಳಿಗೆ ಜ್ಯೋತಿಯನ್ನು ದಾಟಿಸಿತು. ಎಲ್ಲರೂ ತಂತಮ್ಮ ಕೈಗಳಲ್ಲಿ ಉರಿಯುವ ಮೋಂಬತ್ತಿಗಳನ್ನು ಹಿಡಿದು ದೇವಾಲಯದೊಳಕ್ಕೆ ಮೆರವಣಿಗೆಯಾಗಿ ಹೊರಟರು. ವಿದ್ಯುದ್ದೀಪಗಳನ್ನು ಹೊತ್ತಿಸಿರಲಿಲ್ಲವಾಗಿ ಆ ಒಳಾವರಣದಲ್ಲಿ ಮೋಂಬತ್ತಿಗಳ ಬೆಳಕು ದಿವ್ಯ ಪ್ರಕಾಶ ಚಿಮ್ಮಿ ಭವ್ಯ ಲೋಕವನ್ನು ತೆರೆದಿತ್ತು. ಗಂಟೆ ಹನ್ನೆರಡಾಗುತ್ತಿದ್ದಂತೆ ಯೇಸುಕ್ರಿಸ್ತನ ಪ್ರತಿಮೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಪರದೆಯನ್ನು ಸರಿಸಲಾಯಿತು. ಫಕ್ಕನೇ ವಿದ್ಯುದ್ದೀಪಗಳು ಹೊತ್ತಿಕೊಂಡವು. ದೇವಾಲಯ ಗಂಟೆಗಳೆಲ್ಲ ಮೊಳಗಿ ದೂರದೂರಕ್ಕೆ ತಮ್ಮ ನಾದವನ್ನು ಹೊತ್ತೊಯ್ದವು. ಜನರೆಲ್ಲ ಭಕ್ತಿಯಿಂದ “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ” ಎಂದು ಎದೆ ತುಂಬಿ ಹಾಡಿದರು. ಪರಸ್ಪರ ಕೈಕುಲುಕಿ ಪುನರುತ್ಥಾನ ಹಬ್ಬದ ಶುಭಾಶಯಗಳನ್ನು ವಿನಿಮಯಿಸಿಕೊಂಡರು.
ಪ್ರತಿಯೊಬ್ಬರೂ ಮೇಣದ ಬತ್ತಿಯ ಬೆಳಕನ್ನು ಆರದಂತೆ ತೆಗೆದುಕೊಂಡು ಹೋಗಿ ತಮ್ಮ ಮನೆಯ ಹಣತೆಗಳನ್ನು ಹಚ್ಚಿಕೊಂಡರು. ಇನ್ನೂ ಕೆಲವರು ಕೆಂಡದ ಕಡಾಯಿಯಿಂದ ಕೆಂಡವನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯ ಒಲೆಗಳನ್ನು ಹೊತ್ತಿಸಿಕೊಂಡರು. ಇಂದು ರಾತ್ರಿಯ ಅಪಹೊತ್ತಿನಲ್ಲಿ ಶಾಮಣ್ಣನ ಸೊಸೆ ಜೆಸಿಂತ, ಚೌರಪ್ಪನ ಮೊಮ್ಮಗಳು ನಿರ್ಮಲ, ದೊರೆ ಮಗಳು ಕತ್ರಿನಾ ಮುಂತಾದವರೆಲ್ಲ ತಂತಮ್ಮ ಮನೆಗಳ ಹೊಸ್ತಿಲಲ್ಲಿ, ಕಾಂಪೌಂಡು ಗೋಡೆಯ ಮೇಲೆ ಹಣತೆಗಳನ್ನೂ ಮೇಣದ ಬತ್ತಿಗಳನ್ನೂ ಹಚ್ಚುತ್ತಿದ್ದರೆ ಅಚ್ಚರಿಗೊಳ್ಳದಿರಿ, ಏಕೆಂದರೆ ಇದು ಕ್ರೈಸ್ತರ ಬೆಳಕಿನ ಹಬ್ಬ ಈಸ್ಟರ್.
ಅಂದು ಸಾವಿರಾರು ವರ್ಷಗಳ ಹಿಂದೆ ಇಂಥದೇ ಒಂದು ರಾತ್ರಿಯಲ್ಲಿ ಈಜಿಪ್ಟರ ದಾಸ್ಯದಲ್ಲಿ ನೊಂದಿದ್ದ ಯೆಹೂದ್ಯರ ವಿಮೋಚನೆ ಆಗಿ ಅವರು ಪಾಸ್ಕ ಹಬ್ಬವನ್ನು ಆಚರಿಸಿದರು. ಅದೇ ರೀತಿಯಲ್ಲಿ ಯೇಸುಕ್ರಿಸ್ತನು ಸಂಪ್ರದಾಯದ ಬಂಧನದಲ್ಲಿ ಮೌಢ್ಯದ ಸಂಕೋಲೆಯಲ್ಲಿ ಪರಸ್ಪರ ಅಪನಂಬಿಕೆಯ ದಾಸ್ಯದಲ್ಲಿ ತೊಳಲುವ ಮಾನವರಿಗೆ ಪ್ರೀತಿಯ ಸಿಂಚನಗೈದು ಹೊಸಬದುಕಿನ ಹೊಸಬೆಳಕಿನ ಮಾರ್ಗ ಕಲ್ಪಿಸಿದ ಈ ಹಬ್ಬ ನಿಜವಾಗಿಯೂ ಬೆಳಕಿನ ಹಬ್ಬ.
ಗುರುವಾರ, ಏಪ್ರಿಲ್ 16, 2009
ಗುರುವಾರ, ಏಪ್ರಿಲ್ 2, 2009
ಅನ್ನಮ್ಮ ಬೆಟ್ಟ
ಬೆಂಗಳೂರು ನಗರದ ದಕ್ಷಿಣದ ಅಂಚಿನಲ್ಲಿ ಬನಶಂಕರಮ್ಮನ ಗುಡಿ, ವಸಂತರಾಯನ ಗುಡಿಗಳಿರುವ ಸುಬ್ರಮಣ್ಯಪುರ ರಸ್ತೆಯಲ್ಲಿ ಸಾಗಿದರೆ ಉತ್ತರಹಳ್ಳಿ ಅರೆಹಳ್ಳಿ ಬೆಟ್ಟಗಳ ಸಾಲಿನಲ್ಲಿ ಒಂದು ಬೃಹತ್ ಬೆಟ್ಟವು ತನ್ನ ತುದಿಯಲ್ಲಿ ಯೇಸುಕ್ರಿಸ್ತನ ಶಿಲುಬೆಯನ್ನು ಧರಿಸಿ ಬಹು ದೂರದಿಂದಲೇ ಕಣ್ಮನ ಸೆಳೆಯುತ್ತದೆ. ಅದೇ ಪ್ರಸಿದ್ಧವಾದ ಅನ್ನಮ್ಮ ಬೆಟ್ಟ. ಭಾರೀ ಕಲ್ಲುಬಂಡೆಗಳೊಂದಿಗೆ ಹಸಿರಿನ ತೇಪೆ ಹೊದ್ದ ಈ ಅನ್ನಮ್ಮ ಬೆಟ್ಟವು ಎರಡು ಶತಮಾನಗಳಿಂದಲೂ ಕ್ರೈಸ್ತರ ಪುಣ್ಯಕ್ಷೇತ್ರವೆನಿಸಿದೆ.
ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಅನ್ನಮ್ಮ ಎಂಬ ಸಾತ್ವಿಕ ಕನ್ಯೆಯೊಬ್ಬಳು ಈ ಬೆಟ್ಟದ ತಪ್ಪಲಿನಲ್ಲಿ ಇರುವಾಗ (ಬಹುಶಃ ಟಿಪ್ಪುಸುಲ್ತಾನನ) ಸೈನಿಕರಿಬ್ಬರ ಕಾಮುಕ ದೃಷ್ಟಿಗೆ ಬಿದ್ದು ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೆಟ್ಟದ ಮೇಲಕ್ಕೆ ಏರಿದಳೆಂದೂ, ಅಲ್ಲಿಗೂ ಕುದುರೆ ಏರಿ ಬಂದ ಸೈನಿಕರಿಂದ ಮಾನ ರಕ್ಷಿಸಿಕೊಳ್ಳಲು ಬೆಟ್ಟದಿಂದ ಉರುಳಿಬಿದ್ದು ಸತ್ತಳೆಂದೂ ತಿಳಿದುಬರುತ್ತದೆ.
ಬೆಟ್ಟದ ಬುಡದಲ್ಲಿ ಅನ್ನಮ್ಮನನ್ನು ಸಮಾಧಿ ಮಾಡಿದ ಸ್ಥಳವು ಈಗಲೂ ಜನರಿಂದ ಪೂಜನೀಯವಾಗಿದೆ. ಕ್ರೈಸ್ತ ಕ್ರೈಸ್ತೇತರರೆನ್ನದೆ ಅಸಂಖ್ಯ ಹೆಣ್ಣುಮಕ್ಕಳು ಸಾಂಬ್ರಾಣಿ ಮೇಣದಬತ್ತಿಗಳನ್ನು ಅನ್ನಮ್ಮನ ಸಮಾಧಿಯ ಬಳಿ ಅರ್ಪಿಸಿ ಪ್ರಾರ್ಥನೆ ಮಾಡುತ್ತಾರೆ.
ಇಷ್ಟೆಲ್ಲ ಓದಿದಾಗ ನಿಮಗೆ ಅನ್ನಮ್ಮಬೆಟ್ಟವು ಕ್ರೈಸ್ತರಿಗೆ ಮಾತ್ರವೇ ಏಕೆ ಪುಣ್ಯಕ್ಷೇತ್ರವಾಗಿದೆ? ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ ಎಂಬುದೇ ಇಲ್ಲಿ ಅಪಭ್ರಂಶವಾಗಿದೆಯೇ? ಎಂಬ ಅನುಮಾನಗಳು ಮೂಡುವುದು ಸಹಜ.
ಇದಕ್ಕೆ ಸಮರ್ಥನೆಯಾಗಿ ಎರಡು ಕಾರಣಗಳನ್ನು ಕೊಡಬಹುದು.
೧. ಈ ಅನ್ನಮ್ಮ ಎಂಬುದು ಅಪ್ಪಟ ಕ್ರೈಸ್ತ ಹೆಸರು. ಪವಿತ್ರ ಬೈಬಲ್ಲಿನ ಪ್ರಕಾರ ಯೇಸುವಿನ ತಾಯಿ ಮರಿಯಳಿಗೆ ಅಮ್ಮ ಈ ಅನ್ನಮ್ಮ. ಮೇರಿಗೆ ತಾಯಿ ಅಂದರೆ ಯೇಸುಕ್ರಿಸ್ತನ ಅಜ್ಜಿಯಾದ “ಅನ್ನಾ” ಎಂಬ ಹೆಸರು ಕನ್ನಡದ ಜಾಯಮಾನದಲ್ಲಿ ಅನ್ನಮ್ಮ ಎಂದಾಗುವುದು ಅತ್ಯಂತ ಸಹಜ.
೨. ಟಿಪ್ಪುವಿನ ಕಾಲದಲ್ಲಿ ಕ್ರೈಸ್ತರನ್ನು ಬ್ರಿಟಿಷರಿಗೆ ಸುದ್ದಿ ನೀಡುವವರೆಂದು ಅಪನಂಬಿಕೆಯಿಂದ ಕಾಣಲಾಗುತ್ತಿತ್ತು. ಕ್ರೈಸ್ತರ ಮೇಲೆ ಒಂದು ರೀತಿಯ ಗೂಢಚಾರ ಕಣ್ಣು ಇದ್ದೇ ಇರುತ್ತಿತ್ತು. ಹೀಗೆ ಕ್ರೈಸ್ತ ಗ್ರಾಮಗಳ ಬಳಿ ಸುಳಿದಾಡುತ್ತಿದ್ದ ಅವನ ಸೈನಿಕರು ಅನ್ನಮ್ಮ ಎಂಬ ಒಂಟಿ ಹೆಣ್ಣನ್ನು ಆಸೆಗಣ್ಣಿನಿಂದ ನೋಡಿರಲೂ ಬಹುದು.
ಜಾನಪದೀಯ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಗ್ರಾಮದೇವತೆಗಳು ಸಾಮಾನ್ಯವಾಗಿ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಾಮಾನ್ಯ ವ್ಯಕ್ತಿಗಳೇ ಆಗಿದ್ದು ತಮ್ಮ ಮರಣಾನಂತರವಷ್ಟೇ ದೈವೀ ಸ್ಥಾನವನ್ನು ಪಡೆದಿರುತ್ತಾರೆ. ಹೆಚ್ಚಿನ ಗ್ರಾಮದೇವತೆಗಳು ಗಂಡನನ್ನು ಸಾವಿನಲ್ಲೂ ಹಿಂಬಾಲಿಸಿದ ಮಹಾಸತಿಯರಾಗಿದ್ದ ನಿದರ್ಶನಗಳನ್ನು ನಾವು ನೋಡುತ್ತೇವೆ. ಅವರ ಸ್ಮರಣೆಗಾಗಿ ನಿಲ್ಲಿಸಲಾದ ಸ್ಮಾರಕಕಲ್ಲು ಅಥವಾ ಮಾಸ್ತಿಕಲ್ಲುಗಳೇ ಮುಂದೆ ಗುಡಿಗಳಾಗಿ ಬೆಳೆದ ನಿದರ್ಶನಗಳನ್ನೂ ನೋಡಿದ್ದೇವೆ. ಮಾರಮ್ಮ, ಅಣ್ಣಮ್ಮ ಮುಂತಾದ ದೇವತೆಗಳ ಹಿನ್ನೆಲೆಯಲ್ಲೂ ಇಂಥ ಅಸಾಮಾನ್ಯ ಘಟನೆಗಳು ತಳುಕು ಹಾಕಿಕೊಂಡಿರುವುದು ಐತಿಹ್ಯಗಳ ಮೂಲಕ ತಿಳಿದುಬರುತ್ತದೆ.
ಅನ್ನಮ್ಮಬೆಟ್ಟದ ಅನ್ನಮ್ಮನಿಗೂ ಇದೇ ರೀತಿ ಐತಿಹ್ಯ ಬೆಳೆದುಬಂದಿದೆ ಹಾಗೂ ಅನ್ನಮ್ಮಬೆಟ್ಟವು ಕ್ರೈಸ್ತ ಹೆಣ್ಣೊಬ್ಬಳ ಸ್ಮಾರಕಶಿಲೆಯಾಗಿದೆ. ಗಮನಿಸತಕ್ಕ ಸಂಗತಿಯೇನೆಂದರೆ ಇಲ್ಲಿ ಅನ್ನಮ್ಮ ಅವಿವಾಹಿತೆ ಎನ್ನುವ ಅಂಶ.
ಇನ್ನೂರು ವರ್ಷಗಳ ಇತಿಹಾಸವಿರುವ ಈ ಯಾತ್ರಾಸ್ಥಳವು ದಕ್ಷಿಣ ಕರ್ನಾಟಕದ ಕ್ರೈಸ್ತ ಜನಪದದಲ್ಲಿ ಸ್ಥಾನ ಪಡೆದಿರುವುದೂ ಅಚ್ಚರಿಯ ಸಂಗತಿಯೇನಲ್ಲ. ಕನ್ನಡ ಕ್ರೈಸ್ತ ಹಿರಿಯರ ಬಾಯಲ್ಲಿ, ಅವರ ಕೋಲಾಟಗಳಲ್ಲಿ, ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ, ಮೂಡಲದಾಸಾಪುರ, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ನಾಗನಹಳ್ಳಿ ಮುಂತಾದ ಊರುಗಳಲ್ಲಿ ಇನ್ನೂ ಉಳಿದುಕೊಂಡಿರುವ ಬೀಸೋಪದಗಳಲ್ಲಿ ಆಗೊಮ್ಮೆ ಈಗೊಮ್ಮೆ ಅನ್ನಮ್ಮನ ಪ್ರಸ್ತಾವ ಇಣುಕುತ್ತದೆ. ಹಸೆ ಬರೆಯುವ ಸಂದರ್ಭದ ಈ ಹಾಡಂತೂ ಅನ್ನಮ್ಮನನ್ನು ಕುರಿತ ಒಂದು ಸೊಗಸಾದ ಉಲ್ಲೇಖ :
ಸಣ್ಣಕ್ಕಿ ಹಸೆಯ ಸಣ್ಣಾಗಿ ಬರೆಯಮ್ಮ
ಸಣ್ಣಾಕಿ ಉತ್ರಳ್ಳಿ ಅನ್ನಮ್ಮ | ಬರೆದಾರೋ
ಸಣ್ಣ ಸುಣ್ಣಾದ ಹಸೆಗಳ | ಕಂಡಾರೋ
ಮರಿಯವ್ವ ತಾಯಿ ಜರಿದಾರೋ | ಅನ್ನಮ್ಮನ
ಸಣ್ಣಾಗಿ ಹಸೆಯ ಬರೆಯೆಂದು ||
ಹೀಗೆ ಇನ್ನೂರು ವರ್ಷಗಳಿಂದಲೂ ಕ್ರೈಸ್ತ ಜನಪದದಲ್ಲಿ ಬೇರೂರಿರುವ ಈ ಯಾತ್ರಾಸ್ಥಳದ ಪ್ರಸಿದ್ಧಿಯನ್ನು ಮನಗಂಡ ಕ್ರೈಸ್ತ ಪಾದ್ರಿ ಬ್ರಿಯಾಂಡ್ ಸ್ವಾಮಿಯವರು ಈಗ್ಗೆ ಸುಮಾರು ೬೦ ವರ್ಷಗಳ ಹಿಂದೆ ಈ ಅನ್ನಮ್ಮಬೆಟ್ಟದ ತುದಿಯಲ್ಲಿ ಶಿಲುಬೆ ನೆಡಿಸಿ ಅನ್ನಮ್ಮನ ಸಮಾಧಿಯ ಬಳಿ ವರ್ಷಕ್ಕೊಮ್ಮೆ ಕ್ರೈಸ್ತರೆಲ್ಲೂ ಸೇರಿ ಪೂಜೆ ಅರ್ಪಿಸುವ ಪದ್ಧತಿಗೆ ಚಾಲನೆ ನೀಡಿದರು. ಅಂದಿನಿಂದ ಪ್ರತಿವರ್ಷ ತಪಸ್ಸುಕಾಲದ ಐದನೇ ಭಾನುವಾರ ಅನ್ನಮ್ಮಬೆಟ್ಟಕ್ಕೆ ಕ್ರೈಸ್ತರು ತಂಡೋಪತಂಡವಾಗಿ ಆಗಮಿಸಿ ಪೂಜೆ ಮತ್ತು ಶಿಲುಬೆಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ದೈತ್ಯಜೋಕಾಲಿಗಳಿಲ್ಲದ, ತಮಟೆ ನಗಾರಿ ಇಲ್ಲದ, ಅಷ್ಟೇಕೆ ರಥಯಾತ್ರೆಯೂ ಇಲ್ಲದ ಶೋಕಗೀತೆಗಳ ಮೌನ ತಪಸ್ಸಿನ ಜನಜಾತ್ರೆ. ಹಿಂದೆ ಜನ ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬರುತ್ತಿದ್ದರು. ೧೯೬೦ರ ದಶಕದಲ್ಲಿ ಬೆಂಗಳೂರು ನಗರಸಾರಿಗೆ ಪ್ರಾರಂಭವಾದ ಮೇಲೆ ’ಜಾತ್ರೆ ವಿಶೇಷ’ ಬಸ್ಸುಗಳು ಬ್ರಿಯಾಂಡ್ ಚೌಕದಿಂದ ಅನ್ನಮ್ಮಬೆಟ್ಟಕ್ಕೆ ಹೋಗಿಬರುವ ಪರಿಪಾಠ ಶುರುವಾಗಿ ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಅಂದು ಅನ್ನಮ್ಮಬೆಟ್ಟವು ತನ್ನ ಬುಡದಲ್ಲಿ ಅಗಾಧ ಕಲ್ಲುಬಂಡೆಗಳನ್ನೂ ಅವುಗಳನ್ನು ಮರೆಮಾಚುವಂತೆ ಬೆಳೆದ ಮರಗಳನ್ನೂ ಪೊದೆಗಳನ್ನೂ ಹೊಂದಿತ್ತು. ಅನ್ನಮ್ಮನ ಸಮಾಧಿ ಸುಣ್ಣದಿಂದ ಪರಿಶುಭ್ರಗೊಂಡ ಸಣ್ಣ ಗವಿಯಂತೆ ಇತ್ತು. ಜನರು ಒಳತೆರಳಿ ಮೇಣದ ಬತ್ತಿ ಬೆಳಗಿ ನಮಸ್ಕರಿಸಿ ಅಲ್ಲಿನ ಮಣ್ಣನ್ನು ಚಿಟಿಕೆಯಷ್ಟು ತೆಗೆದುಕೊಂಡು ತಲೆಯ ಮೇಲೆ ಉದುರಿಸಿಕೊಳ್ಳುತ್ತಿದ್ದರು. ಕೆಲವರು ಒಂದಷ್ಟು ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಭಕ್ತಿಪೂರ್ವಕವಾಗಿ ಕಣ್ಣಿಗೊತ್ತಿಕೊಂಡು ತಮ್ಮ ಮನೆಗೆ ಒಯ್ಯುತ್ತಿದ್ದರು. ಅಲ್ಲೇ ಸನಿಯದಲ್ಲಿ ತೆರೆದ ಬಾವಿಯೊಂದಿತ್ತು, ಬಾವಿಯ ಸುತ್ತ ಇದ್ದ ಗೇಣುದ್ದದ ಕಟ್ಟೆಯ ಬದಿಯಲ್ಲಿ ಮೊಣಕಾಲೂರಿ ಕುಳಿತು ಕೈಗೇ ಎಟಕುತ್ತಿದ್ದ ಆ ಪರಿಶುದ್ಧ ನೀರನ್ನು ಜನ ಬೊಗಸೆ ತುಂಬಿ ಕುಡಿಯುತ್ತಿದ್ದರು. ಅನತಿ ದೂರದಲ್ಲಿದ್ದ ಕಾಲುವೆಯಲ್ಲಿ ನವಿರಾದ ಮಣ್ಣಿನ ಹೊಯಿಗೆಯಿದ್ದು ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಹರಿದ ಲಕ್ಷಣಗಳಿಗೆ ಸಾಕ್ಷಿಯಾಗಿತ್ತು. ಉತ್ತರಹಳ್ಳಿ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿರುವ ಈ ಬೆಟ್ಟ ಊರಿನಿಂದ ನೋಡಿದಾಗ ಅಸಂಖ್ಯ ಜನರು ಬೆಟ್ಟವನ್ನು ಏರುತ್ತಲೂ ಇಳಿಯುತ್ತಲೂ ಇದ್ದ ದೃಶ್ಯ ಬೆಟ್ಟಕ್ಕೆ ಬಣ್ಣಬಣ್ಣದ ಬಟ್ಟೆ ತೊಡಿಸಿದಂತೆ ನಯನ ಮನೋಹರವಾಗಿ ತೋರುತ್ತಿತ್ತು.
ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬೆಟ್ಟಕ್ಕೆ ಬರುತ್ತಿದ್ದ ಜನ ಅದರ ತಪ್ಪಲಿನಲ್ಲಿಬೀಡುಬಿಟ್ಟು ಮೌನದ ಧ್ಯಾನ ಪ್ರಾರ್ಧನೆಗಳಲ್ಲಿ ತೊಡಗುತ್ತಿದ್ದರು. ಸನಿಹದ ತೋಟ, ಹೊಂಗೆಮರದ ತೋಪು ಅವರಿಗೆ ನೆರಳಾಗುತ್ತಿತ್ತು. ಅವರು ಸರತಿಯಂತೆ ಬೆಟ್ಟ ಹತ್ತಿ ಮೇಲಿನ ಶಿಲುಬೆಗೆ ಮುತ್ತಿಟ್ಟು ಹರಕೆ ತೀರಿಸಿ ಬರುತ್ತಿದ್ದರು. ಬಿಸಿಲೇರಿದಂತೆ ಎಲ್ಲರೂ ತೋಪಿನಲ್ಲಿ ಒಟ್ಟುಗೂಡಿ ಚಾಪೆ ಹಾಸಿಕೊಂಡು ಮನೆಯಿಂದ ಹೊತ್ತು ತಂದಿದ್ದ ಊಟವನ್ನು ಉಂಡು ತಮ್ಮಂತೆಯೇ ಅಲ್ಲಿಗೆ ಬಂದಿದ್ದ ಬಂಧುಬಾಂಧವರೊಂದಿಗೆ ಮತ್ತು ನೆರೆಹೊರೆಯೊಂದಿಗೆ ಕಷ್ಟಸುಖದ ಮಾತುಕತೆ ಆಡುತ್ತಿದ್ದರು. ತಮ್ಮ ಬೆಳೆದ ಮಕ್ಕಳಿಗೆ ಸಂಬಂಧಗಳನ್ನು ಕುದುರಿಸುತ್ತಿದ್ದರು. ಹೊತ್ತಿಳಿಯುತ್ತಿದ್ದಂತೆ ಎಲ್ಲರೂ ತಂತಮ್ಮ ಊರುಗಳಿಗೆ ತೆರಳುತ್ತಿದ್ದಂತೆ ಸಂತೆಯೆದ್ದು ಹೋದಹಾಗೆ ಅನ್ನಮ್ಮ ಬೆಟ್ಟದ ತಪ್ಪಲು ಮುಳುಗುವ ಸೂರ್ಯನಿಗೆ ಅಂತಿಮ ನಮನ ಸಲ್ಲಿಸುವಂತೆ ಕೆಂಪಗೆ ಹೊಳೆಯ ತೊಡಗುತ್ತಿತ್ತು.
ಇಂದು ಬೆಂಗಳೂರು ನಗರವು ವಿಪರೀತ ಬೆಳೆದು ಅನ್ನಮ್ಮ ಬೆಟ್ಟವನ್ನೂ ತನ್ನ ಒಡಲಲ್ಲಿ ಹುದುಗಿಸಿಕೊಂಡು ತಪ್ಪಲನ್ನು ಬೆತ್ತಲಾಗಿಸಿದೆ, ಬೆಟ್ಟವಂತೂ ನೆಲಗಳ್ಳರ ಗಣಿಗಳ್ಳರ ಕಲುಷಿತ ಮನದ ಧಾರ್ಮಿಕ ವಿಪ್ಲವಕಾರರ ಕಬಂಧ ಬಾಹುವಿನಲ್ಲಿ ಸಿಲುಕಿ ನಲುಗುತ್ತಿದೆ. ಬೆಟ್ಟದ ಬುಡದವರೆಗೂ ಮನೆಗಳನ್ನು ಕಟ್ಟಲಾಗಿದೆ. ಹೊಸಕೆರೆಹಳ್ಳಿ ಇತ್ತಮಡು ಗ್ರಾಮದ ಕಡೆಗಿನ ಬೆಟ್ಟದ ಒಂದು ಭಾಗವಂತೂ ಕಟ್ಟಡದ ಕಲ್ಲು ಪೂರೈಕೆಗಾಗಿ ಸಿಡಿದು ಕರಗಿದೆ. ಇನ್ನೊಂದು ಭಾಗ ಉದ್ಯಮಿಯೊಬ್ಬರ ಪಾಲಾಗಿದೆ. ಬೆಟ್ಟದ ಮೇಲೆ ಹನುಮಂತನ ಹಾಗೂ ಶಿವನ ಗುಡಿಗಳು ತಲೆಯೆತ್ತಿವೆ, ಅಲ್ಲಿನ ಬೃಹತ್ ಬಂಡೆಯ ಮೇಲೆ “ಹನುಮಗಿರಿ” ಎಂದು ಬರೆಯಲಾಗಿದೆ. ಆದರೂ ಈ ಬೆಟ್ಟವು ಸ್ಥಳೀಯರ ಬಾಯಲ್ಲಿ ಅನ್ನಮ್ಮಬೆಟ್ಟ / ಯೇಸುಬೆಟ್ಟ ಎಂದೇ ಕರೆಸಿಕೊಳ್ಳುತ್ತಿದೆ. ಜಾನಪದ ತಜ್ಞ ಡಿ ಲಿಂಗಯ್ಯನವರು ಇದನ್ನು ಶಿಲುಬೆಬೆಟ್ಟ ಎಂದು ಕರೆದಿದ್ದಾರೆ.
ಪ್ರತಿವರ್ಷದ ತಪಸ್ಸುಕಾಲದಲ್ಲಿ ಮಾತ್ರವೇ ಗರಿಗೆದರುತ್ತಿದ್ದ ಅನ್ನಮ್ಮಬೆಟ್ಟ ಇಂದು ಪ್ರತಿನಿತ್ಯವೂ ಯೇಸುಭಜನೆಯನ್ನು ಧ್ವನಿಸುತ್ತಿದೆ. ಅನ್ನಮ್ಮನ ಸಮಾಧಿಯ ಸ್ಥಳದಲ್ಲಿರುವ ಪುಟ್ಟದಾದ ಕ್ರೈಸ್ತ ದೇಗುಲವು ಸ್ಥಳೀಯ ಕ್ರೈಸ್ತರಿಗೆ ದಿನನಿತ್ಯದ ಅಧ್ಯಾತ್ಮ ಪೋಷಣೆಯನ್ನು ನೀಡುತ್ತಿದೆ.
ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಅನ್ನಮ್ಮ ಎಂಬ ಸಾತ್ವಿಕ ಕನ್ಯೆಯೊಬ್ಬಳು ಈ ಬೆಟ್ಟದ ತಪ್ಪಲಿನಲ್ಲಿ ಇರುವಾಗ (ಬಹುಶಃ ಟಿಪ್ಪುಸುಲ್ತಾನನ) ಸೈನಿಕರಿಬ್ಬರ ಕಾಮುಕ ದೃಷ್ಟಿಗೆ ಬಿದ್ದು ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೆಟ್ಟದ ಮೇಲಕ್ಕೆ ಏರಿದಳೆಂದೂ, ಅಲ್ಲಿಗೂ ಕುದುರೆ ಏರಿ ಬಂದ ಸೈನಿಕರಿಂದ ಮಾನ ರಕ್ಷಿಸಿಕೊಳ್ಳಲು ಬೆಟ್ಟದಿಂದ ಉರುಳಿಬಿದ್ದು ಸತ್ತಳೆಂದೂ ತಿಳಿದುಬರುತ್ತದೆ.
ಬೆಟ್ಟದ ಬುಡದಲ್ಲಿ ಅನ್ನಮ್ಮನನ್ನು ಸಮಾಧಿ ಮಾಡಿದ ಸ್ಥಳವು ಈಗಲೂ ಜನರಿಂದ ಪೂಜನೀಯವಾಗಿದೆ. ಕ್ರೈಸ್ತ ಕ್ರೈಸ್ತೇತರರೆನ್ನದೆ ಅಸಂಖ್ಯ ಹೆಣ್ಣುಮಕ್ಕಳು ಸಾಂಬ್ರಾಣಿ ಮೇಣದಬತ್ತಿಗಳನ್ನು ಅನ್ನಮ್ಮನ ಸಮಾಧಿಯ ಬಳಿ ಅರ್ಪಿಸಿ ಪ್ರಾರ್ಥನೆ ಮಾಡುತ್ತಾರೆ.
ಇಷ್ಟೆಲ್ಲ ಓದಿದಾಗ ನಿಮಗೆ ಅನ್ನಮ್ಮಬೆಟ್ಟವು ಕ್ರೈಸ್ತರಿಗೆ ಮಾತ್ರವೇ ಏಕೆ ಪುಣ್ಯಕ್ಷೇತ್ರವಾಗಿದೆ? ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ ಎಂಬುದೇ ಇಲ್ಲಿ ಅಪಭ್ರಂಶವಾಗಿದೆಯೇ? ಎಂಬ ಅನುಮಾನಗಳು ಮೂಡುವುದು ಸಹಜ.
ಇದಕ್ಕೆ ಸಮರ್ಥನೆಯಾಗಿ ಎರಡು ಕಾರಣಗಳನ್ನು ಕೊಡಬಹುದು.
೧. ಈ ಅನ್ನಮ್ಮ ಎಂಬುದು ಅಪ್ಪಟ ಕ್ರೈಸ್ತ ಹೆಸರು. ಪವಿತ್ರ ಬೈಬಲ್ಲಿನ ಪ್ರಕಾರ ಯೇಸುವಿನ ತಾಯಿ ಮರಿಯಳಿಗೆ ಅಮ್ಮ ಈ ಅನ್ನಮ್ಮ. ಮೇರಿಗೆ ತಾಯಿ ಅಂದರೆ ಯೇಸುಕ್ರಿಸ್ತನ ಅಜ್ಜಿಯಾದ “ಅನ್ನಾ” ಎಂಬ ಹೆಸರು ಕನ್ನಡದ ಜಾಯಮಾನದಲ್ಲಿ ಅನ್ನಮ್ಮ ಎಂದಾಗುವುದು ಅತ್ಯಂತ ಸಹಜ.
೨. ಟಿಪ್ಪುವಿನ ಕಾಲದಲ್ಲಿ ಕ್ರೈಸ್ತರನ್ನು ಬ್ರಿಟಿಷರಿಗೆ ಸುದ್ದಿ ನೀಡುವವರೆಂದು ಅಪನಂಬಿಕೆಯಿಂದ ಕಾಣಲಾಗುತ್ತಿತ್ತು. ಕ್ರೈಸ್ತರ ಮೇಲೆ ಒಂದು ರೀತಿಯ ಗೂಢಚಾರ ಕಣ್ಣು ಇದ್ದೇ ಇರುತ್ತಿತ್ತು. ಹೀಗೆ ಕ್ರೈಸ್ತ ಗ್ರಾಮಗಳ ಬಳಿ ಸುಳಿದಾಡುತ್ತಿದ್ದ ಅವನ ಸೈನಿಕರು ಅನ್ನಮ್ಮ ಎಂಬ ಒಂಟಿ ಹೆಣ್ಣನ್ನು ಆಸೆಗಣ್ಣಿನಿಂದ ನೋಡಿರಲೂ ಬಹುದು.
ಜಾನಪದೀಯ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಗ್ರಾಮದೇವತೆಗಳು ಸಾಮಾನ್ಯವಾಗಿ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಾಮಾನ್ಯ ವ್ಯಕ್ತಿಗಳೇ ಆಗಿದ್ದು ತಮ್ಮ ಮರಣಾನಂತರವಷ್ಟೇ ದೈವೀ ಸ್ಥಾನವನ್ನು ಪಡೆದಿರುತ್ತಾರೆ. ಹೆಚ್ಚಿನ ಗ್ರಾಮದೇವತೆಗಳು ಗಂಡನನ್ನು ಸಾವಿನಲ್ಲೂ ಹಿಂಬಾಲಿಸಿದ ಮಹಾಸತಿಯರಾಗಿದ್ದ ನಿದರ್ಶನಗಳನ್ನು ನಾವು ನೋಡುತ್ತೇವೆ. ಅವರ ಸ್ಮರಣೆಗಾಗಿ ನಿಲ್ಲಿಸಲಾದ ಸ್ಮಾರಕಕಲ್ಲು ಅಥವಾ ಮಾಸ್ತಿಕಲ್ಲುಗಳೇ ಮುಂದೆ ಗುಡಿಗಳಾಗಿ ಬೆಳೆದ ನಿದರ್ಶನಗಳನ್ನೂ ನೋಡಿದ್ದೇವೆ. ಮಾರಮ್ಮ, ಅಣ್ಣಮ್ಮ ಮುಂತಾದ ದೇವತೆಗಳ ಹಿನ್ನೆಲೆಯಲ್ಲೂ ಇಂಥ ಅಸಾಮಾನ್ಯ ಘಟನೆಗಳು ತಳುಕು ಹಾಕಿಕೊಂಡಿರುವುದು ಐತಿಹ್ಯಗಳ ಮೂಲಕ ತಿಳಿದುಬರುತ್ತದೆ.
ಅನ್ನಮ್ಮಬೆಟ್ಟದ ಅನ್ನಮ್ಮನಿಗೂ ಇದೇ ರೀತಿ ಐತಿಹ್ಯ ಬೆಳೆದುಬಂದಿದೆ ಹಾಗೂ ಅನ್ನಮ್ಮಬೆಟ್ಟವು ಕ್ರೈಸ್ತ ಹೆಣ್ಣೊಬ್ಬಳ ಸ್ಮಾರಕಶಿಲೆಯಾಗಿದೆ. ಗಮನಿಸತಕ್ಕ ಸಂಗತಿಯೇನೆಂದರೆ ಇಲ್ಲಿ ಅನ್ನಮ್ಮ ಅವಿವಾಹಿತೆ ಎನ್ನುವ ಅಂಶ.
ಇನ್ನೂರು ವರ್ಷಗಳ ಇತಿಹಾಸವಿರುವ ಈ ಯಾತ್ರಾಸ್ಥಳವು ದಕ್ಷಿಣ ಕರ್ನಾಟಕದ ಕ್ರೈಸ್ತ ಜನಪದದಲ್ಲಿ ಸ್ಥಾನ ಪಡೆದಿರುವುದೂ ಅಚ್ಚರಿಯ ಸಂಗತಿಯೇನಲ್ಲ. ಕನ್ನಡ ಕ್ರೈಸ್ತ ಹಿರಿಯರ ಬಾಯಲ್ಲಿ, ಅವರ ಕೋಲಾಟಗಳಲ್ಲಿ, ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ, ಮೂಡಲದಾಸಾಪುರ, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ನಾಗನಹಳ್ಳಿ ಮುಂತಾದ ಊರುಗಳಲ್ಲಿ ಇನ್ನೂ ಉಳಿದುಕೊಂಡಿರುವ ಬೀಸೋಪದಗಳಲ್ಲಿ ಆಗೊಮ್ಮೆ ಈಗೊಮ್ಮೆ ಅನ್ನಮ್ಮನ ಪ್ರಸ್ತಾವ ಇಣುಕುತ್ತದೆ. ಹಸೆ ಬರೆಯುವ ಸಂದರ್ಭದ ಈ ಹಾಡಂತೂ ಅನ್ನಮ್ಮನನ್ನು ಕುರಿತ ಒಂದು ಸೊಗಸಾದ ಉಲ್ಲೇಖ :
ಸಣ್ಣಕ್ಕಿ ಹಸೆಯ ಸಣ್ಣಾಗಿ ಬರೆಯಮ್ಮ
ಸಣ್ಣಾಕಿ ಉತ್ರಳ್ಳಿ ಅನ್ನಮ್ಮ | ಬರೆದಾರೋ
ಸಣ್ಣ ಸುಣ್ಣಾದ ಹಸೆಗಳ | ಕಂಡಾರೋ
ಮರಿಯವ್ವ ತಾಯಿ ಜರಿದಾರೋ | ಅನ್ನಮ್ಮನ
ಸಣ್ಣಾಗಿ ಹಸೆಯ ಬರೆಯೆಂದು ||
ಹೀಗೆ ಇನ್ನೂರು ವರ್ಷಗಳಿಂದಲೂ ಕ್ರೈಸ್ತ ಜನಪದದಲ್ಲಿ ಬೇರೂರಿರುವ ಈ ಯಾತ್ರಾಸ್ಥಳದ ಪ್ರಸಿದ್ಧಿಯನ್ನು ಮನಗಂಡ ಕ್ರೈಸ್ತ ಪಾದ್ರಿ ಬ್ರಿಯಾಂಡ್ ಸ್ವಾಮಿಯವರು ಈಗ್ಗೆ ಸುಮಾರು ೬೦ ವರ್ಷಗಳ ಹಿಂದೆ ಈ ಅನ್ನಮ್ಮಬೆಟ್ಟದ ತುದಿಯಲ್ಲಿ ಶಿಲುಬೆ ನೆಡಿಸಿ ಅನ್ನಮ್ಮನ ಸಮಾಧಿಯ ಬಳಿ ವರ್ಷಕ್ಕೊಮ್ಮೆ ಕ್ರೈಸ್ತರೆಲ್ಲೂ ಸೇರಿ ಪೂಜೆ ಅರ್ಪಿಸುವ ಪದ್ಧತಿಗೆ ಚಾಲನೆ ನೀಡಿದರು. ಅಂದಿನಿಂದ ಪ್ರತಿವರ್ಷ ತಪಸ್ಸುಕಾಲದ ಐದನೇ ಭಾನುವಾರ ಅನ್ನಮ್ಮಬೆಟ್ಟಕ್ಕೆ ಕ್ರೈಸ್ತರು ತಂಡೋಪತಂಡವಾಗಿ ಆಗಮಿಸಿ ಪೂಜೆ ಮತ್ತು ಶಿಲುಬೆಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ದೈತ್ಯಜೋಕಾಲಿಗಳಿಲ್ಲದ, ತಮಟೆ ನಗಾರಿ ಇಲ್ಲದ, ಅಷ್ಟೇಕೆ ರಥಯಾತ್ರೆಯೂ ಇಲ್ಲದ ಶೋಕಗೀತೆಗಳ ಮೌನ ತಪಸ್ಸಿನ ಜನಜಾತ್ರೆ. ಹಿಂದೆ ಜನ ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬರುತ್ತಿದ್ದರು. ೧೯೬೦ರ ದಶಕದಲ್ಲಿ ಬೆಂಗಳೂರು ನಗರಸಾರಿಗೆ ಪ್ರಾರಂಭವಾದ ಮೇಲೆ ’ಜಾತ್ರೆ ವಿಶೇಷ’ ಬಸ್ಸುಗಳು ಬ್ರಿಯಾಂಡ್ ಚೌಕದಿಂದ ಅನ್ನಮ್ಮಬೆಟ್ಟಕ್ಕೆ ಹೋಗಿಬರುವ ಪರಿಪಾಠ ಶುರುವಾಗಿ ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಅಂದು ಅನ್ನಮ್ಮಬೆಟ್ಟವು ತನ್ನ ಬುಡದಲ್ಲಿ ಅಗಾಧ ಕಲ್ಲುಬಂಡೆಗಳನ್ನೂ ಅವುಗಳನ್ನು ಮರೆಮಾಚುವಂತೆ ಬೆಳೆದ ಮರಗಳನ್ನೂ ಪೊದೆಗಳನ್ನೂ ಹೊಂದಿತ್ತು. ಅನ್ನಮ್ಮನ ಸಮಾಧಿ ಸುಣ್ಣದಿಂದ ಪರಿಶುಭ್ರಗೊಂಡ ಸಣ್ಣ ಗವಿಯಂತೆ ಇತ್ತು. ಜನರು ಒಳತೆರಳಿ ಮೇಣದ ಬತ್ತಿ ಬೆಳಗಿ ನಮಸ್ಕರಿಸಿ ಅಲ್ಲಿನ ಮಣ್ಣನ್ನು ಚಿಟಿಕೆಯಷ್ಟು ತೆಗೆದುಕೊಂಡು ತಲೆಯ ಮೇಲೆ ಉದುರಿಸಿಕೊಳ್ಳುತ್ತಿದ್ದರು. ಕೆಲವರು ಒಂದಷ್ಟು ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಭಕ್ತಿಪೂರ್ವಕವಾಗಿ ಕಣ್ಣಿಗೊತ್ತಿಕೊಂಡು ತಮ್ಮ ಮನೆಗೆ ಒಯ್ಯುತ್ತಿದ್ದರು. ಅಲ್ಲೇ ಸನಿಯದಲ್ಲಿ ತೆರೆದ ಬಾವಿಯೊಂದಿತ್ತು, ಬಾವಿಯ ಸುತ್ತ ಇದ್ದ ಗೇಣುದ್ದದ ಕಟ್ಟೆಯ ಬದಿಯಲ್ಲಿ ಮೊಣಕಾಲೂರಿ ಕುಳಿತು ಕೈಗೇ ಎಟಕುತ್ತಿದ್ದ ಆ ಪರಿಶುದ್ಧ ನೀರನ್ನು ಜನ ಬೊಗಸೆ ತುಂಬಿ ಕುಡಿಯುತ್ತಿದ್ದರು. ಅನತಿ ದೂರದಲ್ಲಿದ್ದ ಕಾಲುವೆಯಲ್ಲಿ ನವಿರಾದ ಮಣ್ಣಿನ ಹೊಯಿಗೆಯಿದ್ದು ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಹರಿದ ಲಕ್ಷಣಗಳಿಗೆ ಸಾಕ್ಷಿಯಾಗಿತ್ತು. ಉತ್ತರಹಳ್ಳಿ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿರುವ ಈ ಬೆಟ್ಟ ಊರಿನಿಂದ ನೋಡಿದಾಗ ಅಸಂಖ್ಯ ಜನರು ಬೆಟ್ಟವನ್ನು ಏರುತ್ತಲೂ ಇಳಿಯುತ್ತಲೂ ಇದ್ದ ದೃಶ್ಯ ಬೆಟ್ಟಕ್ಕೆ ಬಣ್ಣಬಣ್ಣದ ಬಟ್ಟೆ ತೊಡಿಸಿದಂತೆ ನಯನ ಮನೋಹರವಾಗಿ ತೋರುತ್ತಿತ್ತು.
ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬೆಟ್ಟಕ್ಕೆ ಬರುತ್ತಿದ್ದ ಜನ ಅದರ ತಪ್ಪಲಿನಲ್ಲಿಬೀಡುಬಿಟ್ಟು ಮೌನದ ಧ್ಯಾನ ಪ್ರಾರ್ಧನೆಗಳಲ್ಲಿ ತೊಡಗುತ್ತಿದ್ದರು. ಸನಿಹದ ತೋಟ, ಹೊಂಗೆಮರದ ತೋಪು ಅವರಿಗೆ ನೆರಳಾಗುತ್ತಿತ್ತು. ಅವರು ಸರತಿಯಂತೆ ಬೆಟ್ಟ ಹತ್ತಿ ಮೇಲಿನ ಶಿಲುಬೆಗೆ ಮುತ್ತಿಟ್ಟು ಹರಕೆ ತೀರಿಸಿ ಬರುತ್ತಿದ್ದರು. ಬಿಸಿಲೇರಿದಂತೆ ಎಲ್ಲರೂ ತೋಪಿನಲ್ಲಿ ಒಟ್ಟುಗೂಡಿ ಚಾಪೆ ಹಾಸಿಕೊಂಡು ಮನೆಯಿಂದ ಹೊತ್ತು ತಂದಿದ್ದ ಊಟವನ್ನು ಉಂಡು ತಮ್ಮಂತೆಯೇ ಅಲ್ಲಿಗೆ ಬಂದಿದ್ದ ಬಂಧುಬಾಂಧವರೊಂದಿಗೆ ಮತ್ತು ನೆರೆಹೊರೆಯೊಂದಿಗೆ ಕಷ್ಟಸುಖದ ಮಾತುಕತೆ ಆಡುತ್ತಿದ್ದರು. ತಮ್ಮ ಬೆಳೆದ ಮಕ್ಕಳಿಗೆ ಸಂಬಂಧಗಳನ್ನು ಕುದುರಿಸುತ್ತಿದ್ದರು. ಹೊತ್ತಿಳಿಯುತ್ತಿದ್ದಂತೆ ಎಲ್ಲರೂ ತಂತಮ್ಮ ಊರುಗಳಿಗೆ ತೆರಳುತ್ತಿದ್ದಂತೆ ಸಂತೆಯೆದ್ದು ಹೋದಹಾಗೆ ಅನ್ನಮ್ಮ ಬೆಟ್ಟದ ತಪ್ಪಲು ಮುಳುಗುವ ಸೂರ್ಯನಿಗೆ ಅಂತಿಮ ನಮನ ಸಲ್ಲಿಸುವಂತೆ ಕೆಂಪಗೆ ಹೊಳೆಯ ತೊಡಗುತ್ತಿತ್ತು.
ಇಂದು ಬೆಂಗಳೂರು ನಗರವು ವಿಪರೀತ ಬೆಳೆದು ಅನ್ನಮ್ಮ ಬೆಟ್ಟವನ್ನೂ ತನ್ನ ಒಡಲಲ್ಲಿ ಹುದುಗಿಸಿಕೊಂಡು ತಪ್ಪಲನ್ನು ಬೆತ್ತಲಾಗಿಸಿದೆ, ಬೆಟ್ಟವಂತೂ ನೆಲಗಳ್ಳರ ಗಣಿಗಳ್ಳರ ಕಲುಷಿತ ಮನದ ಧಾರ್ಮಿಕ ವಿಪ್ಲವಕಾರರ ಕಬಂಧ ಬಾಹುವಿನಲ್ಲಿ ಸಿಲುಕಿ ನಲುಗುತ್ತಿದೆ. ಬೆಟ್ಟದ ಬುಡದವರೆಗೂ ಮನೆಗಳನ್ನು ಕಟ್ಟಲಾಗಿದೆ. ಹೊಸಕೆರೆಹಳ್ಳಿ ಇತ್ತಮಡು ಗ್ರಾಮದ ಕಡೆಗಿನ ಬೆಟ್ಟದ ಒಂದು ಭಾಗವಂತೂ ಕಟ್ಟಡದ ಕಲ್ಲು ಪೂರೈಕೆಗಾಗಿ ಸಿಡಿದು ಕರಗಿದೆ. ಇನ್ನೊಂದು ಭಾಗ ಉದ್ಯಮಿಯೊಬ್ಬರ ಪಾಲಾಗಿದೆ. ಬೆಟ್ಟದ ಮೇಲೆ ಹನುಮಂತನ ಹಾಗೂ ಶಿವನ ಗುಡಿಗಳು ತಲೆಯೆತ್ತಿವೆ, ಅಲ್ಲಿನ ಬೃಹತ್ ಬಂಡೆಯ ಮೇಲೆ “ಹನುಮಗಿರಿ” ಎಂದು ಬರೆಯಲಾಗಿದೆ. ಆದರೂ ಈ ಬೆಟ್ಟವು ಸ್ಥಳೀಯರ ಬಾಯಲ್ಲಿ ಅನ್ನಮ್ಮಬೆಟ್ಟ / ಯೇಸುಬೆಟ್ಟ ಎಂದೇ ಕರೆಸಿಕೊಳ್ಳುತ್ತಿದೆ. ಜಾನಪದ ತಜ್ಞ ಡಿ ಲಿಂಗಯ್ಯನವರು ಇದನ್ನು ಶಿಲುಬೆಬೆಟ್ಟ ಎಂದು ಕರೆದಿದ್ದಾರೆ.
ಪ್ರತಿವರ್ಷದ ತಪಸ್ಸುಕಾಲದಲ್ಲಿ ಮಾತ್ರವೇ ಗರಿಗೆದರುತ್ತಿದ್ದ ಅನ್ನಮ್ಮಬೆಟ್ಟ ಇಂದು ಪ್ರತಿನಿತ್ಯವೂ ಯೇಸುಭಜನೆಯನ್ನು ಧ್ವನಿಸುತ್ತಿದೆ. ಅನ್ನಮ್ಮನ ಸಮಾಧಿಯ ಸ್ಥಳದಲ್ಲಿರುವ ಪುಟ್ಟದಾದ ಕ್ರೈಸ್ತ ದೇಗುಲವು ಸ್ಥಳೀಯ ಕ್ರೈಸ್ತರಿಗೆ ದಿನನಿತ್ಯದ ಅಧ್ಯಾತ್ಮ ಪೋಷಣೆಯನ್ನು ನೀಡುತ್ತಿದೆ.
ಭಾನುವಾರ, ಜನವರಿ 25, 2009
ಒಮ್ಮುಖ ಪತ್ರಿಕೆ
ಕನ್ನಡ ದಿನಪತ್ರಿಕೆ “ವಿಜಯಕರ್ನಾಟಕ”ವು ಸಂಘಪರಿವಾರದ ಮುಖವಾಣಿಯಂತಿದ್ದು ಪ್ರತಿನಿತ್ಯ ಅದರ ತುಂಬೆಲ್ಲ ಕ್ರೈಸ್ತರನ್ನು ದೇಶದ್ರೋಹಿಗಳೆಂಬಂತೆ ಪ್ರತಿಬಿಂಬಿಸಲಾಗುತ್ತಿದೆ. ಅದರಲ್ಲಿ ಕ್ರೈಸ್ತ ಸಮುದಾಯದ ಪರವಾದ ಸುದ್ದಿಗಳು ಪ್ರಕಟವಾಗುವುದಿಲ್ಲ ಮಾತ್ರವಲ್ಲ ಸಂಪಾದಕೀಯದಿಂದ ಹಿಡಿದು ಅಂಕಣಗಳು ಹಾಗೂ ವಾಚಕರ ಪತ್ರಗಳವರೆಗೆ ಎಲ್ಲವೂ ಕ್ರೈಸ್ತರ ವಿರುದ್ಧ ಹಲ್ಲು ಮಸೆಯುತ್ತಿರುವುದನ್ನು ಕಾಣಬಹುದಾಗಿದೆ. ಭಾರತೀಯ ಪತ್ರಿಕಾ ನೀತಿಯ ಪ್ರಕಾರ ಸುದ್ದಿಯೊಂದರ ಎರಡೂ ಬದಿಗಳನ್ನು ಓದುಗರ ಮುಂದಿಡಬೇಕು. ಆದರೆ ಇಲ್ಲಿ ಈ ಪತ್ರಿಕೆಯಲ್ಲಿ ಸಂಘಪರಿವಾರದ ವಿಧ್ವಂಸಕ ಕೃತ್ಯಗಳನ್ನು ರಣಶೌರ್ಯದಂತೆ ತೋರಿಸಲಾಗುತ್ತದೆ, ಅದೇ ವೇಳೆಯಲ್ಲಿ ಕ್ರೈಸ್ತರ ಅಥವಾ ಕ್ರೈಸ್ತ ಸಂಸ್ಥೆಗಳ ಕಾರ್ಯಗಳನ್ನು ದೇಶದ್ರೋಹದಂತೆ ಬಿಂಬಿಸಲಾಗುತ್ತದೆ. ಕ್ರೈಸ್ತ ಸಂಸ್ಥೆಗಳು ಮಾಡುವ ಒಳ್ಳೇ ಕಾರ್ಯಗಳನ್ನು ಈ ಪತ್ರಿಕೆ ವರದಿ ಮಾಡುವುದೇ ಇಲ್ಲ, ಆದರೆ ಎಲ್ಲೋ ಒಂದು ಸಣ್ಣ ತಪ್ಪನ್ನು ಒಬ್ಬ ಕೆಲಸಕ್ಕೆ ಬಾರದ ವರದಿಗಾರನೊಬ್ಬ ವರದಿ ಮಾಡಿದರೂ ಅದಕ್ಕೆ ವಿಶೇಷಣಗಳ ಮೇಲ್ಬರಹ ಕೊಟ್ಟು ಬಣ್ಣಬಣ್ಣವಾಗಿ ಪ್ರಕಟಿಸಲಾಗುತ್ತದೆ.
ಪ್ರತಾಪಸಿಂಹ ಎಂಬ ಒಬ್ಬ ಅಂಕಣಕಾರನಂತೂ ತಾನೊಬ್ಬ ಮಹಾನ್ ಪಂಡಿತ ಎಂದಂದುಕೊಂಡು ಮಹಾನ್ ವ್ಯಕ್ತಿಗಳ ಹೇಳಿಕೆಗಳನ್ನುತನಗೆ ಬೇಕಾದಂತೆ ತಿರುಚಿ ಸುಳ್ಳುಗಳ ಕಂತೆಯನ್ನೇ ಹೊಸೆಯುತ್ತಾನೆ. ಆತ ಬೌದ್ಧ ಧರ್ಮದ ಪ್ರಾರಂಭದೊಂದಿಗೆ ನಮ್ಮ ದೇಶದ ಅಧಃಪತನವೂ ಪ್ರಾರಂಭವಾಯಿತೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆಂದು ಇತ್ತೀಚೆಗೆ ಬೊಗಳೆ ಹೊಡೆದಿದ್ದ. ಬುದ್ಧನು ತನ್ನ ಕಾಲದಲ್ಲಿ ಆಚರಣೆಯಲ್ಲಿದ್ದ ವೈದಿಕ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನೂ ಗೊಡ್ಡು ಸಂಪ್ರದಾಯಗಳನ್ನೂ ಸ್ವರ್ಗನರಕಗಳ ಪರಿಕಲ್ಪನೆಯನ್ನೂ ಖಂಡಿಸಿ ಎಲ್ಲ ಮನುಷ್ಯರಿಗೂ ಸಮಾನಸ್ಥಾನ ನೀಡಿದ. ಈ ಮಹಾನ್ ಆದರ್ಶವನ್ನು ಅವನ ಅನುಯಾಯಿಗಳು ದಿಕ್ಕುದಿಕ್ಕಿಗೂ ಕೊಂಡೊಯ್ದರು. ಬುದ್ಧನನ್ನು ಪ್ರಗತಿಪರ ಭಾರತದ ನವ್ಯ ಪ್ರವರ್ತಕ ಎಂದು ಭಾವಿಸಿದ್ದ ವಿವೇಕಾನಂದರು ಆತನನ್ನು ಭಗವಾನ್ ಬುದ್ಧ ಎನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮನುಧರ್ಮವು ಬುದ್ಧನ ಆದರ್ಶ ತತ್ವಗಳನ್ನೆಲ್ಲ ಗಾಳಿಗೆ ತೂರಿ ತನ್ನ ಬೇರುಬಿಟ್ಟಿತು. ಇದನ್ನು ಕುರಿತೇ ವಿವೇಕಾನಂದರು ಒಮ್ಮೆ ತಮ್ಮ ಭಾಷಣದಲ್ಲಿ ".... ನಿಮ್ಮ ಪೂರ್ವೀಕರ ಮಾತಿನಲ್ಲಿ ನಿಮಗೆ ನಂಬಿಕೆ ಇನ್ನೂ ಇದ್ದರೆ, ಈ ಕ್ಷಣವೇ ಹಿಂದೆ ಕುಮಾರಿಲ ಭಟ್ಟ ತನ್ನ ಬಗ್ಗೆ ಸುಳ್ಳು ಹೇಳಿಕೊಂಡು ಒಬ್ಬ ಬೌದ್ಧ ಗುರುವಿನಲ್ಲಿ ಕಲಿತದ್ದರ ಆಧಾರದ ಮೇಲೆ, ಆ ಗುರುವನ್ನೇ ವಾದದಲ್ಲಿ ಸೋಲಿಸಿ; ಆನಂತರ ಸುಳ್ಳು ಹೇಳಿ ಗೈದ ಗುರು ದ್ರೋಹದ ಪ್ರಾಯಶ್ಚಿತ್ತಕ್ಕಾಗಿ ತುಷಾನಲದಲ್ಲಿ ಬಿದ್ದಂತೆ ನೀವೂ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇದನ್ನು ಮಾಡುವುದಕ್ಕೆ ನಿಮಗೆ ಧೈರ್ಯವಿಲ್ಲದೇ ಇದ್ದಲ್ಲಿ, ನಿಮ್ಮ ತಪ್ಪನ್ನು ಒಪ್ಪಿಕೊಂಡು ಎಲ್ಲರಿಗೂ ಸಹಾಯ ಮಾಡಿ. ಜ್ಞಾನಾಗಾರದ ಬಾಗಿಲನ್ನು ಎಲ್ಲರಿಗೂ ತೆರೆದು ಸಹಾಯ ಮಾಡಿ. ದುರ್ಬಲ ಜನಸಾಮಾನ್ಯರಿಗೆ ಮತ್ತೊಮ್ಮೆ ಅವರಿಗೆ ನ್ಯಾಯವಾಗಿ ಸಲ್ಲುವ ಹಕ್ಕು ಬಾಧ್ಯತೆಗಳನ್ನು ಕೊಡಿ.'' ವಿವೇಕಾನಂದರ ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡದೆ ತಮ್ಮ ಭೋಜನ - ಬೈಠಕ್ಕುಗಳಲ್ಲೇ ಕಾಲ ಕಳೆದ ಬುದ್ಧ ನಿಂದಕರು, ತಾವು ಮಾಡದ ಕೆಲಸವನ್ನು ಕ್ರಿಶ್ಚಿಯನ್ ಮಿಷನರಿಗಳು ಮಾಡತೊಡಗಿದಾಗ, ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವ ಆತಂಕದಲ್ಲಿ ಈಗ ದೇಶಪ್ರೇಮ ಹಾಗೂ ಧರ್ಮಪ್ರೇಮದ ಬೊಬ್ಬೆ ಹೊಡೆಯತೊಡಗಿದ್ದಾರೆ. (ವಿಕ್ರಾಂತ ಕರ್ನಾಟಕದಲ್ಲಿ ಮಾನ್ಯ ಡಿ ಎಸ್ ನಾಗಭೂಷಣರು ಬರೆದ ಲೇಖನದಿಂದ). ಈ ಪ್ರತಾಪಸಿಂಹನೂ ಅದೇ ಸಂಘಪರಿವಾರದ ಮರಿಯಾಗಿರುವುದು ಸ್ಪಷ್ಟವಾಗಿರುವುದರಿಂದ ಆತನಿಂದ ಖಾಲಿ ಬಿಂದಿಗೆಯ ಶಬ್ದದ ಹೊರತು ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?
ಅದೇ ಪತ್ರಿಕೆಯ ಓದುಗರ ಪತ್ರಗಳ ಅಂಕಣದಲ್ಲಿಯೂ ಅಪ್ಪಿತಪ್ಪಿ ಕೂಡಾ ಕ್ರೈಸ್ತಸಮುದಾಯದ ಪರವಾದ ಪತ್ರಗಳು ಪ್ರಕಟವಾಗುತ್ತಿಲ್ಲ. ನಾಡಿನಲ್ಲಿ ಅನೇಕ ಸಮಸ್ಯೆಗಳಿದ್ದರೂ ಜನರೆಲ್ಲರೂ ಕ್ರೈಸ್ತಸಮುದಾಯದ ವಿರುದ್ಧವೇ ಚಿಂತಿಸುತ್ತಾರೆ ಎಂಬಂತೆ ಆ ಅಂಕಣದ ತುಂಬೆಲ್ಲ ಬರೀ ಅದೇ ವಿಷಯಗಳ ಪತ್ರಗಳನ್ನು ಪ್ರಕಟಿಸಲಾಗುತ್ತಿದೆ.
ಇದೀಗ ಕನ್ನಡದ ಪ್ರಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಕ್ರಿಸ್ತೀಕರಣದ ಕುರಿತಂತೆ ಬರೆದ ಲೇಖನಕ್ಕೆ ಒಂದೂವರೆ ಪುಟಗಳನ್ನು ಮೀಸಲಿಟ್ಟ ಈ ಪತ್ರಿಕೆ ಆ ಲೇಖನದ ಕುರಿತ ಚರ್ಚೆಗೆ ತಾನು ವೇದಿಕೆಯಾಗುವುದಾಗಿ ಪ್ರಕಟಿಸಿತು. ಅದರ ಮರುದಿನವೇ ಜಾನ್ ಸಿಕ್ವೆರಾ ಸಮಜಾಯಿಷಿ ಪ್ರಕಟವಾಯಿತು. ಮತ್ತು ಆ ಪ್ರತಿಕ್ರಿಯೆ ಜಾಳಾದ ಹಂದರ ಹೊಂದಿತ್ತು ಮಾತ್ರವಲ್ಲ ಚರ್ಚೆಯನ್ನು ದಾರಿತಪ್ಪಿಸುವ ಆಶಯ ಹೊಂದಿತ್ತು. ಹೀಗೇ ಮತ್ತೂ ಹಲವು ನಮ್ಮ ಸಮುದಾಯದ ವಿರುದ್ಧವಾದ ಪ್ರತಿಕ್ರಿಯೆಗಳು ಬಂದವು. ವಿಜಯಕರ್ನಾಟಕ ಪತ್ರಿಕೆ ಏಕಾಏಕಿ ತನ್ನ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಒಂದು ಗದ್ದಲವನ್ನು ಹುಟ್ಟುಹಾಕಿತೇನೋ, ಆದರೆ ಸಂಪಾದಕ ವಿಶ್ವೇಶ್ವರಭಟ್ಟನಿಗೆ ಪೇಜಾವರ ಸ್ವಾಮಿಗಳ, ಯಡಿಯೂರಪ್ಪನವರ ಮತ್ತು ಸಂಘಪರಿವಾರದವರ ವಿಶೇಷ ಆಶೀರ್ವಾದಗಳು ಸಿಕ್ಕಿತೆನ್ನಬಹುದು.
ಪ್ರತಾಪಸಿಂಹ ಎಂಬ ಒಬ್ಬ ಅಂಕಣಕಾರನಂತೂ ತಾನೊಬ್ಬ ಮಹಾನ್ ಪಂಡಿತ ಎಂದಂದುಕೊಂಡು ಮಹಾನ್ ವ್ಯಕ್ತಿಗಳ ಹೇಳಿಕೆಗಳನ್ನುತನಗೆ ಬೇಕಾದಂತೆ ತಿರುಚಿ ಸುಳ್ಳುಗಳ ಕಂತೆಯನ್ನೇ ಹೊಸೆಯುತ್ತಾನೆ. ಆತ ಬೌದ್ಧ ಧರ್ಮದ ಪ್ರಾರಂಭದೊಂದಿಗೆ ನಮ್ಮ ದೇಶದ ಅಧಃಪತನವೂ ಪ್ರಾರಂಭವಾಯಿತೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆಂದು ಇತ್ತೀಚೆಗೆ ಬೊಗಳೆ ಹೊಡೆದಿದ್ದ. ಬುದ್ಧನು ತನ್ನ ಕಾಲದಲ್ಲಿ ಆಚರಣೆಯಲ್ಲಿದ್ದ ವೈದಿಕ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನೂ ಗೊಡ್ಡು ಸಂಪ್ರದಾಯಗಳನ್ನೂ ಸ್ವರ್ಗನರಕಗಳ ಪರಿಕಲ್ಪನೆಯನ್ನೂ ಖಂಡಿಸಿ ಎಲ್ಲ ಮನುಷ್ಯರಿಗೂ ಸಮಾನಸ್ಥಾನ ನೀಡಿದ. ಈ ಮಹಾನ್ ಆದರ್ಶವನ್ನು ಅವನ ಅನುಯಾಯಿಗಳು ದಿಕ್ಕುದಿಕ್ಕಿಗೂ ಕೊಂಡೊಯ್ದರು. ಬುದ್ಧನನ್ನು ಪ್ರಗತಿಪರ ಭಾರತದ ನವ್ಯ ಪ್ರವರ್ತಕ ಎಂದು ಭಾವಿಸಿದ್ದ ವಿವೇಕಾನಂದರು ಆತನನ್ನು ಭಗವಾನ್ ಬುದ್ಧ ಎನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮನುಧರ್ಮವು ಬುದ್ಧನ ಆದರ್ಶ ತತ್ವಗಳನ್ನೆಲ್ಲ ಗಾಳಿಗೆ ತೂರಿ ತನ್ನ ಬೇರುಬಿಟ್ಟಿತು. ಇದನ್ನು ಕುರಿತೇ ವಿವೇಕಾನಂದರು ಒಮ್ಮೆ ತಮ್ಮ ಭಾಷಣದಲ್ಲಿ ".... ನಿಮ್ಮ ಪೂರ್ವೀಕರ ಮಾತಿನಲ್ಲಿ ನಿಮಗೆ ನಂಬಿಕೆ ಇನ್ನೂ ಇದ್ದರೆ, ಈ ಕ್ಷಣವೇ ಹಿಂದೆ ಕುಮಾರಿಲ ಭಟ್ಟ ತನ್ನ ಬಗ್ಗೆ ಸುಳ್ಳು ಹೇಳಿಕೊಂಡು ಒಬ್ಬ ಬೌದ್ಧ ಗುರುವಿನಲ್ಲಿ ಕಲಿತದ್ದರ ಆಧಾರದ ಮೇಲೆ, ಆ ಗುರುವನ್ನೇ ವಾದದಲ್ಲಿ ಸೋಲಿಸಿ; ಆನಂತರ ಸುಳ್ಳು ಹೇಳಿ ಗೈದ ಗುರು ದ್ರೋಹದ ಪ್ರಾಯಶ್ಚಿತ್ತಕ್ಕಾಗಿ ತುಷಾನಲದಲ್ಲಿ ಬಿದ್ದಂತೆ ನೀವೂ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇದನ್ನು ಮಾಡುವುದಕ್ಕೆ ನಿಮಗೆ ಧೈರ್ಯವಿಲ್ಲದೇ ಇದ್ದಲ್ಲಿ, ನಿಮ್ಮ ತಪ್ಪನ್ನು ಒಪ್ಪಿಕೊಂಡು ಎಲ್ಲರಿಗೂ ಸಹಾಯ ಮಾಡಿ. ಜ್ಞಾನಾಗಾರದ ಬಾಗಿಲನ್ನು ಎಲ್ಲರಿಗೂ ತೆರೆದು ಸಹಾಯ ಮಾಡಿ. ದುರ್ಬಲ ಜನಸಾಮಾನ್ಯರಿಗೆ ಮತ್ತೊಮ್ಮೆ ಅವರಿಗೆ ನ್ಯಾಯವಾಗಿ ಸಲ್ಲುವ ಹಕ್ಕು ಬಾಧ್ಯತೆಗಳನ್ನು ಕೊಡಿ.'' ವಿವೇಕಾನಂದರ ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡದೆ ತಮ್ಮ ಭೋಜನ - ಬೈಠಕ್ಕುಗಳಲ್ಲೇ ಕಾಲ ಕಳೆದ ಬುದ್ಧ ನಿಂದಕರು, ತಾವು ಮಾಡದ ಕೆಲಸವನ್ನು ಕ್ರಿಶ್ಚಿಯನ್ ಮಿಷನರಿಗಳು ಮಾಡತೊಡಗಿದಾಗ, ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವ ಆತಂಕದಲ್ಲಿ ಈಗ ದೇಶಪ್ರೇಮ ಹಾಗೂ ಧರ್ಮಪ್ರೇಮದ ಬೊಬ್ಬೆ ಹೊಡೆಯತೊಡಗಿದ್ದಾರೆ. (ವಿಕ್ರಾಂತ ಕರ್ನಾಟಕದಲ್ಲಿ ಮಾನ್ಯ ಡಿ ಎಸ್ ನಾಗಭೂಷಣರು ಬರೆದ ಲೇಖನದಿಂದ). ಈ ಪ್ರತಾಪಸಿಂಹನೂ ಅದೇ ಸಂಘಪರಿವಾರದ ಮರಿಯಾಗಿರುವುದು ಸ್ಪಷ್ಟವಾಗಿರುವುದರಿಂದ ಆತನಿಂದ ಖಾಲಿ ಬಿಂದಿಗೆಯ ಶಬ್ದದ ಹೊರತು ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?
ಅದೇ ಪತ್ರಿಕೆಯ ಓದುಗರ ಪತ್ರಗಳ ಅಂಕಣದಲ್ಲಿಯೂ ಅಪ್ಪಿತಪ್ಪಿ ಕೂಡಾ ಕ್ರೈಸ್ತಸಮುದಾಯದ ಪರವಾದ ಪತ್ರಗಳು ಪ್ರಕಟವಾಗುತ್ತಿಲ್ಲ. ನಾಡಿನಲ್ಲಿ ಅನೇಕ ಸಮಸ್ಯೆಗಳಿದ್ದರೂ ಜನರೆಲ್ಲರೂ ಕ್ರೈಸ್ತಸಮುದಾಯದ ವಿರುದ್ಧವೇ ಚಿಂತಿಸುತ್ತಾರೆ ಎಂಬಂತೆ ಆ ಅಂಕಣದ ತುಂಬೆಲ್ಲ ಬರೀ ಅದೇ ವಿಷಯಗಳ ಪತ್ರಗಳನ್ನು ಪ್ರಕಟಿಸಲಾಗುತ್ತಿದೆ.
ಇದೀಗ ಕನ್ನಡದ ಪ್ರಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಕ್ರಿಸ್ತೀಕರಣದ ಕುರಿತಂತೆ ಬರೆದ ಲೇಖನಕ್ಕೆ ಒಂದೂವರೆ ಪುಟಗಳನ್ನು ಮೀಸಲಿಟ್ಟ ಈ ಪತ್ರಿಕೆ ಆ ಲೇಖನದ ಕುರಿತ ಚರ್ಚೆಗೆ ತಾನು ವೇದಿಕೆಯಾಗುವುದಾಗಿ ಪ್ರಕಟಿಸಿತು. ಅದರ ಮರುದಿನವೇ ಜಾನ್ ಸಿಕ್ವೆರಾ ಸಮಜಾಯಿಷಿ ಪ್ರಕಟವಾಯಿತು. ಮತ್ತು ಆ ಪ್ರತಿಕ್ರಿಯೆ ಜಾಳಾದ ಹಂದರ ಹೊಂದಿತ್ತು ಮಾತ್ರವಲ್ಲ ಚರ್ಚೆಯನ್ನು ದಾರಿತಪ್ಪಿಸುವ ಆಶಯ ಹೊಂದಿತ್ತು. ಹೀಗೇ ಮತ್ತೂ ಹಲವು ನಮ್ಮ ಸಮುದಾಯದ ವಿರುದ್ಧವಾದ ಪ್ರತಿಕ್ರಿಯೆಗಳು ಬಂದವು. ವಿಜಯಕರ್ನಾಟಕ ಪತ್ರಿಕೆ ಏಕಾಏಕಿ ತನ್ನ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಒಂದು ಗದ್ದಲವನ್ನು ಹುಟ್ಟುಹಾಕಿತೇನೋ, ಆದರೆ ಸಂಪಾದಕ ವಿಶ್ವೇಶ್ವರಭಟ್ಟನಿಗೆ ಪೇಜಾವರ ಸ್ವಾಮಿಗಳ, ಯಡಿಯೂರಪ್ಪನವರ ಮತ್ತು ಸಂಘಪರಿವಾರದವರ ವಿಶೇಷ ಆಶೀರ್ವಾದಗಳು ಸಿಕ್ಕಿತೆನ್ನಬಹುದು.
ಭಾನುವಾರ, ಜನವರಿ 11, 2009
ಸಾಪ್ತಾಹಿಕ ಪುರವಣಿ ೧೧೦೧೨೦೦೯
ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಲೇಖನಗಳು ನನ್ನ ಮನಸ್ಸಿಗೆ ಬಹುವಾಗಿ ಲಗತ್ತಾದವು.
"ಸಂಕ್ರಾಂತಿಯ ಹಿಗ್ಗು ಕಾಣುವುದು ಸುಗ್ಗಿಯಲ್ಲಿ. ಮುಳುಗಡೆಯ ನಂತರ ಚಿಂದಿಯಾದ ಬದುಕು, ಉಳುವ ಭೂಮಿಯ ತೊಳೆದುಹಾಕಿದ ಯೋಜನೆಗಳ ನಡುವೆ ಮಣ್ಣಿನ ಮಕ್ಕಳೆಲ್ಲಾ ಕಂಗಾಲು. ಬದುಕನ್ನು ಮತ್ತೆ ಕಟ್ಟುವ ಅನಿವಾರ್ಯತೆಗೆ ಮುಖಾಮುಖಿಯಾಗಿರುವ ರೈತವರ್ಗ ಅಸಲಿ ಸುಗ್ಗಿಯನ್ನೂ, ಸಂಕ್ರಮಣವನ್ನೂ ಎದುರು ನೋಡುತ್ತಿದೆ. ಅವರ ಪಥ ಬದಲಾಗುವುದು ಎಂದೋ?" ಎನ್ನವು ಲೇಖನ ’ಸುಗ್ಗಿಯಲ್ಲೂ ಕುಗ್ಗಿದವರು’. ರೈತನ ಹಬ್ಬವಾದ ಸಂಕ್ರಾಂತಿಯು ಹೇಗೆ ರೈತನನ್ನು ನೇಪಥ್ಯಕ್ಕೆ ಸರಿಸುತ್ತಾ ಇತರರ ಹಬ್ಬವಾಗಿದೆ ಎಂಬುದನ್ನು ಸಾರುತ್ತದೆ.
ಹಾಗಂತ, ಸಂಕ್ರಾಂತಿಯ ಸವಿಯನ್ನು ಮೆಲುಕು ಹಾಕದಿರಲು ಸಾಧ್ಯವೇ? "ಹೊಲ ಇದ್ದವರೆಲ್ಲ ತಮ್ಮ ಆಪ್ತೇಷ್ಟರಿಗೆ ’ಸೀತನಿ ತಿನ್ನಾಕ ಹೋಗೂನು ಬರ್ರಿ’ ಎಂದು ಆತ್ಮೀಯ ವೀಳ್ಯವಿತ್ತರೆ, ಭೂರಿಭೋಜನದ ಹಬ್ಬವೇ ಆಗಿರುತ್ತದೆ. ಬುತ್ತಿಗೆ ಸಜ್ಜೆ ರೊಟ್ಟಿ, ಝಣಕದ ಒಡಿ, ಎಣ್ಣಿಗಾಯಿ, ಮೊಸರನ್ನದ ಬುತ್ತಿ, ಸೇಂಗಾ ಹಿಂಡಿ, ಗಟ್ಟ ಮೊಸರು, ಗೋಧಿ ಕುಟ್ಟಿದ ಹುಗ್ಗಿ . . . ಜೊತೆಗೆ ಹಸಿಮೆಂತ್ಯ ಸೊಪ್ಪು, ಹೊಲದ ಬದುವಿನ ಮೇಲೆ ಸಿಗುವ ಹಕ್ಕರಿಕೆ, ಎಳೆ ಕಡಲೆಗಿಡದ ಎಲೆಗಳು.. ಹೀಗೆ ಒಂದೆರಡಲ್ಲ, ಹತ್ತು ಹಲವು ಪದಾರ್ಥಗಳೊಂದಿಗೆ ಸಿಹಿ ಸೀತನಿ ಸವಿಯುವ ನೆವದಲ್ಲಿ ಒಂದು ’ಈಟ್ ಔಟ್’ . .
ಇಂದು ಕಾಲೇಜಿನಲ್ಲಿ ಗೋಕಾಕರ ಮೊದಲ ಉಪನ್ಯಾಸ, ಅವರನ್ನು ಗೇಲಿ ಮಾಡಿ ಕೆಣಕಲು ನಾವು ಪಣ ತೊಟ್ಟಿದ್ದೆವು. ಆದರೆ ತರಗತಿ ಪ್ರಾರಂಭವಾಗುತ್ತಿದ್ದಂತೆ ಅವರ ಮಾತಿನ ಓಘದ ಝರಿಗೆ ನಾವೆಲ್ಲ ಮಂತ್ರಮುಗ್ದರಾಗಿಬಿಟ್ಟೆವು. ಅದೇನು ಕವಿಯೊಬ್ಬ ಕಾವ್ಯದ ವಿಮರ್ಶೆ ಮಾಡುತ್ತಿದ್ದಾನೋ ಅಥವಾ ವಿಮರ್ಶೆಯೇ ಕಾವ್ಯವಾಗುತ್ತಿದೆಯೋ . .
ಕಿಟೆಲ್ ತಮ್ಮ ನಿಘಂಟಿನಲ್ಲಿ "ಇದ್ದಕ್ಕಿದ್ದ ಹಾಗೆ" ಎಂಬುದು ಜನರ ಮಾತಿನಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾರೆ. ಅಲ್ಲದೆ ಬರವಣಿಗೆಯಲ್ಲಿ ಮುಂಬಯಿ ಪ್ರಾಂತ್ಯದ ಶಾಲಾ ಪುಸ್ತಕಗಳಲ್ಲಿ ಬಳಕೆಯಾಗಿದೆಯೆಂದೂ ಹೇಳಿದ್ದಾರೆ. ಇದ್ದಕ್ಕಿದ್ದ ಹಾಗೆ ಎಂಬುದಕ್ಕೆ ಇರುವಂತೆಯೇ, ಯಥಾವತ್ತಾಗಿ, ತದ್ದವತ್ತಾಗೆ ಎಂಬ ತಿರುಳುಗಳನ್ನು ಕಿಟೆಲ್ ಅವರು ಗುರುತಿಸುತ್ತಾರೆ. ಈಗ ೧.ನಡುಹಗಲಲ್ಲಿ ಇದ್ದಕ್ಕಿದ್ದ ಹಾಗೆ ಮೋಡ ಕವಿದು ಮಳೆ ಸುರಿಯಿತು. ೨. ನೀನು ಇದ್ದಕ್ಕಿದ್ದ ಹಾಗೆ ಬಂದು ಕೇಳಿದರೆ ಅಷ್ಟು ಹಣ ನಾನು ಎಲ್ಲಿ ತರಲಿ? . . ಅಂದರೆ ನೂರು ವರುಷಗಳ ಅವಧಿಯಲ್ಲಿ ಇದ್ದಕ್ಕಿದ್ದ ಹಾಗೆ ಎಂಬ ರಚನೆಯ ತಿರುಳಿನಲ್ಲಿ ಎದ್ದುಕಾಣುವ ಬದಲಾವಣೆಯಾಗಿದೆ ಎಂದಾಯ್ತು.
ಸಿದ್ದರಾಮನು ಎಂಬ ಗೋವು ಬದ್ದನಾಗಿರೆ ಹಸ್ತದೊಳಗೆ ಗದ್ದುಗೆಯು ಸಿಗದಿರಲು ಆಗ ಎದ್ದು ನಡೆದನು ಕೇರ್ಳಕೆ | ಅಂಕಿ ಇದಿಗೋ ಸಂಖ್ಯೆ ಇದಿಗೋ ಸಂಕ್ರಮಣ ನಿರ್ಧಾರವಿದಿಗೋ ಬಿಂಕದಿಂದಲೆ ಆಚೆ ನಡೆವೆನು ಥಿಂಕು ಮಾಡಿರಿ ಎಂದನು
ಇವಿಷ್ಟಲ್ಲದೆ ಪ್ರಿಯಾ ತೆಂಡೂಲ್ಕರರ ಕತೆ, ಹರಿಯಬ್ಬೆ ಪ್ರೇಮಕುಮಾರರ ಸಂಸ್ಕೃತಿ ಮೆಲುಕು, ತಾರಿಣಿ ಶುಭದಾಯಿನಿಯವರ ಕಾವ್ಯದೃಷ್ಟಿ, ಲಕ್ಷ್ಮಣ ಕೊಡಸೆಯವರ ವಿಮರ್ಶೆ, ಯಲ್ಲಾಪ್ರಗಡ ಸುಬ್ಬರಾಯರ ಬಗ್ಗೆ ಬಿಂದುಸಾರ ಅವರ ಲೇಖನ, ವಿಜ್ಞಾನ-ವಿನೋದ, ಸಾಗರಕ್ಕೆ ೪೮ ಕಿಲೋಮೀಟರು ದೂರದಲ್ಲಿರುವ ಸಿಗಂದೂರಿಗೆ ನೀರಯಾತ್ರೆ, ಭುಬನೇಶ್ವರದಿಂದ ಪುರಿಗೆ ಹೋಗುವ ದಾರಿಯಲ್ಲಿರುವ ಪಿಪಿಲಿ ಎಂಬ ಪುಟ್ಟ ಗ್ರಾಮದ ಕರಕುಶಲಕಲೆ ಇವುಗಳೆಲ್ಲ ಮನಸೆಳೆಯುತ್ತವೆ.
ಒಟ್ಟಿನಲ್ಲಿ ಸಾಪ್ತಾಹಿಕ ಪುರವಣಿ ಒಂದು ಓದಲೇಬೇಕಾದ ಸರಕು.
"ಸಂಕ್ರಾಂತಿಯ ಹಿಗ್ಗು ಕಾಣುವುದು ಸುಗ್ಗಿಯಲ್ಲಿ. ಮುಳುಗಡೆಯ ನಂತರ ಚಿಂದಿಯಾದ ಬದುಕು, ಉಳುವ ಭೂಮಿಯ ತೊಳೆದುಹಾಕಿದ ಯೋಜನೆಗಳ ನಡುವೆ ಮಣ್ಣಿನ ಮಕ್ಕಳೆಲ್ಲಾ ಕಂಗಾಲು. ಬದುಕನ್ನು ಮತ್ತೆ ಕಟ್ಟುವ ಅನಿವಾರ್ಯತೆಗೆ ಮುಖಾಮುಖಿಯಾಗಿರುವ ರೈತವರ್ಗ ಅಸಲಿ ಸುಗ್ಗಿಯನ್ನೂ, ಸಂಕ್ರಮಣವನ್ನೂ ಎದುರು ನೋಡುತ್ತಿದೆ. ಅವರ ಪಥ ಬದಲಾಗುವುದು ಎಂದೋ?" ಎನ್ನವು ಲೇಖನ ’ಸುಗ್ಗಿಯಲ್ಲೂ ಕುಗ್ಗಿದವರು’. ರೈತನ ಹಬ್ಬವಾದ ಸಂಕ್ರಾಂತಿಯು ಹೇಗೆ ರೈತನನ್ನು ನೇಪಥ್ಯಕ್ಕೆ ಸರಿಸುತ್ತಾ ಇತರರ ಹಬ್ಬವಾಗಿದೆ ಎಂಬುದನ್ನು ಸಾರುತ್ತದೆ.
ಹಾಗಂತ, ಸಂಕ್ರಾಂತಿಯ ಸವಿಯನ್ನು ಮೆಲುಕು ಹಾಕದಿರಲು ಸಾಧ್ಯವೇ? "ಹೊಲ ಇದ್ದವರೆಲ್ಲ ತಮ್ಮ ಆಪ್ತೇಷ್ಟರಿಗೆ ’ಸೀತನಿ ತಿನ್ನಾಕ ಹೋಗೂನು ಬರ್ರಿ’ ಎಂದು ಆತ್ಮೀಯ ವೀಳ್ಯವಿತ್ತರೆ, ಭೂರಿಭೋಜನದ ಹಬ್ಬವೇ ಆಗಿರುತ್ತದೆ. ಬುತ್ತಿಗೆ ಸಜ್ಜೆ ರೊಟ್ಟಿ, ಝಣಕದ ಒಡಿ, ಎಣ್ಣಿಗಾಯಿ, ಮೊಸರನ್ನದ ಬುತ್ತಿ, ಸೇಂಗಾ ಹಿಂಡಿ, ಗಟ್ಟ ಮೊಸರು, ಗೋಧಿ ಕುಟ್ಟಿದ ಹುಗ್ಗಿ . . . ಜೊತೆಗೆ ಹಸಿಮೆಂತ್ಯ ಸೊಪ್ಪು, ಹೊಲದ ಬದುವಿನ ಮೇಲೆ ಸಿಗುವ ಹಕ್ಕರಿಕೆ, ಎಳೆ ಕಡಲೆಗಿಡದ ಎಲೆಗಳು.. ಹೀಗೆ ಒಂದೆರಡಲ್ಲ, ಹತ್ತು ಹಲವು ಪದಾರ್ಥಗಳೊಂದಿಗೆ ಸಿಹಿ ಸೀತನಿ ಸವಿಯುವ ನೆವದಲ್ಲಿ ಒಂದು ’ಈಟ್ ಔಟ್’ . .
ಇಂದು ಕಾಲೇಜಿನಲ್ಲಿ ಗೋಕಾಕರ ಮೊದಲ ಉಪನ್ಯಾಸ, ಅವರನ್ನು ಗೇಲಿ ಮಾಡಿ ಕೆಣಕಲು ನಾವು ಪಣ ತೊಟ್ಟಿದ್ದೆವು. ಆದರೆ ತರಗತಿ ಪ್ರಾರಂಭವಾಗುತ್ತಿದ್ದಂತೆ ಅವರ ಮಾತಿನ ಓಘದ ಝರಿಗೆ ನಾವೆಲ್ಲ ಮಂತ್ರಮುಗ್ದರಾಗಿಬಿಟ್ಟೆವು. ಅದೇನು ಕವಿಯೊಬ್ಬ ಕಾವ್ಯದ ವಿಮರ್ಶೆ ಮಾಡುತ್ತಿದ್ದಾನೋ ಅಥವಾ ವಿಮರ್ಶೆಯೇ ಕಾವ್ಯವಾಗುತ್ತಿದೆಯೋ . .
ಕಿಟೆಲ್ ತಮ್ಮ ನಿಘಂಟಿನಲ್ಲಿ "ಇದ್ದಕ್ಕಿದ್ದ ಹಾಗೆ" ಎಂಬುದು ಜನರ ಮಾತಿನಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾರೆ. ಅಲ್ಲದೆ ಬರವಣಿಗೆಯಲ್ಲಿ ಮುಂಬಯಿ ಪ್ರಾಂತ್ಯದ ಶಾಲಾ ಪುಸ್ತಕಗಳಲ್ಲಿ ಬಳಕೆಯಾಗಿದೆಯೆಂದೂ ಹೇಳಿದ್ದಾರೆ. ಇದ್ದಕ್ಕಿದ್ದ ಹಾಗೆ ಎಂಬುದಕ್ಕೆ ಇರುವಂತೆಯೇ, ಯಥಾವತ್ತಾಗಿ, ತದ್ದವತ್ತಾಗೆ ಎಂಬ ತಿರುಳುಗಳನ್ನು ಕಿಟೆಲ್ ಅವರು ಗುರುತಿಸುತ್ತಾರೆ. ಈಗ ೧.ನಡುಹಗಲಲ್ಲಿ ಇದ್ದಕ್ಕಿದ್ದ ಹಾಗೆ ಮೋಡ ಕವಿದು ಮಳೆ ಸುರಿಯಿತು. ೨. ನೀನು ಇದ್ದಕ್ಕಿದ್ದ ಹಾಗೆ ಬಂದು ಕೇಳಿದರೆ ಅಷ್ಟು ಹಣ ನಾನು ಎಲ್ಲಿ ತರಲಿ? . . ಅಂದರೆ ನೂರು ವರುಷಗಳ ಅವಧಿಯಲ್ಲಿ ಇದ್ದಕ್ಕಿದ್ದ ಹಾಗೆ ಎಂಬ ರಚನೆಯ ತಿರುಳಿನಲ್ಲಿ ಎದ್ದುಕಾಣುವ ಬದಲಾವಣೆಯಾಗಿದೆ ಎಂದಾಯ್ತು.
ಸಿದ್ದರಾಮನು ಎಂಬ ಗೋವು ಬದ್ದನಾಗಿರೆ ಹಸ್ತದೊಳಗೆ ಗದ್ದುಗೆಯು ಸಿಗದಿರಲು ಆಗ ಎದ್ದು ನಡೆದನು ಕೇರ್ಳಕೆ | ಅಂಕಿ ಇದಿಗೋ ಸಂಖ್ಯೆ ಇದಿಗೋ ಸಂಕ್ರಮಣ ನಿರ್ಧಾರವಿದಿಗೋ ಬಿಂಕದಿಂದಲೆ ಆಚೆ ನಡೆವೆನು ಥಿಂಕು ಮಾಡಿರಿ ಎಂದನು
ಇವಿಷ್ಟಲ್ಲದೆ ಪ್ರಿಯಾ ತೆಂಡೂಲ್ಕರರ ಕತೆ, ಹರಿಯಬ್ಬೆ ಪ್ರೇಮಕುಮಾರರ ಸಂಸ್ಕೃತಿ ಮೆಲುಕು, ತಾರಿಣಿ ಶುಭದಾಯಿನಿಯವರ ಕಾವ್ಯದೃಷ್ಟಿ, ಲಕ್ಷ್ಮಣ ಕೊಡಸೆಯವರ ವಿಮರ್ಶೆ, ಯಲ್ಲಾಪ್ರಗಡ ಸುಬ್ಬರಾಯರ ಬಗ್ಗೆ ಬಿಂದುಸಾರ ಅವರ ಲೇಖನ, ವಿಜ್ಞಾನ-ವಿನೋದ, ಸಾಗರಕ್ಕೆ ೪೮ ಕಿಲೋಮೀಟರು ದೂರದಲ್ಲಿರುವ ಸಿಗಂದೂರಿಗೆ ನೀರಯಾತ್ರೆ, ಭುಬನೇಶ್ವರದಿಂದ ಪುರಿಗೆ ಹೋಗುವ ದಾರಿಯಲ್ಲಿರುವ ಪಿಪಿಲಿ ಎಂಬ ಪುಟ್ಟ ಗ್ರಾಮದ ಕರಕುಶಲಕಲೆ ಇವುಗಳೆಲ್ಲ ಮನಸೆಳೆಯುತ್ತವೆ.
ಒಟ್ಟಿನಲ್ಲಿ ಸಾಪ್ತಾಹಿಕ ಪುರವಣಿ ಒಂದು ಓದಲೇಬೇಕಾದ ಸರಕು.
ಭಾನುವಾರ, ಡಿಸೆಂಬರ್ 28, 2008
ಕ್ರಿಸ್ತಜಯಂತಿಯ ಮೆಲುಕು
"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅನ್ನೋ ಪದ ಮನಸ್ಸಿಗೆ ಲಗತ್ತಾಗಿ ಓ ಅದು ಕ್ರಿಸ್ಮಸ್ ಅಲ್ಲವೇ ಎಂಬುದು ಹೊಳೆದು ಮನ ಪ್ರಫುಲ್ಲವಾಗುತ್ತದೆ. ಈ ಕ್ರಿಸ್ಮಸ್ ಅನ್ನೋ ಪದವೇ ವಿಶ್ವದೆಲ್ಲೆಡೆ ಎಲ್ಲರ ಮನಸಿನಲ್ಲೂ ಸಂತಸದ ಭಾವ ಮೂಡಿಸುತ್ತದೆ.
ಕ್ರಿಸ್ಮಸ್ಸು ಅಂತ ನಾವು ಹೇಳೋ ಪದ ತಾತನ ಬಾಯಲ್ಲಿ ಕಿಸ್ಮಿಸ್ಸು ಆಗುವಾಗ ಮರೆಯಲ್ಲೇ ಕಿಸಕ್ಕನೆ ನಕ್ಕು ರಾತ್ರಿ ಅಮ್ಮನೊಟ್ಟಿಗೆ ಈ ಮಾತು ಹೇಳುತ್ತಾ ನಗುತ್ತಿದ್ದುದು ಕನಸೆಂಬಂತೆ ಕ್ರಿಸ್ಮಸ್ ಬಂದ ಕೂಡಲೇ ಮನಸಿನಲ್ಲಿ ಹಾಯ್ದುಹೋಗುತ್ತದೆ.
ಅದು ಸರಿ ಕ್ರಿಸ್ಮಸ್ಸಿಗೆ ಅಮ್ಮ ಅದೇನೆಲ್ಲ ತಿಂಡಿಗಳನ್ನು ಮಾಡುತ್ತಿದ್ದರಲ್ಲ. ಶಾಲೆ ಕಳೆದು ಮನೆಗೆ ಬರುವಷ್ಟರಲ್ಲಿ ನಾನಾ ತರದ ತಿಂಡಿಗಳನ್ನು ಮಾಡಿ ಡಬ್ಬಿಗಳಿಗೆ ತುಂಬಿ ಅಟ್ಟಕ್ಕೇರಿಸಿ, ಏನೂ ನಡೆದಿಲ್ಲವೆಂಬಂತೆ ಮನೆಯನ್ನು ಒಪ್ಪ ಓರಣವಾಗಿಟ್ಟಿರುತ್ತಿದ್ದರಲ್ಲ. ಹಬ್ಬದ ದಿನವಷ್ಟೇ ಅಷ್ಟೂ ತಿಂಡಿಗಳು ಹೊರಬರುತ್ತಿದ್ದವು. ಕಜ್ಜಾಯ, ಕರ್ಚಿಕಾಯಿ, ಚಕ್ಕುಲಿ, ಕಲ್ಕಲ್, ರೋಸ್ ಕುಕ್ಕೀಸ್, ಶಕ್ಕರ್ ಪೊಳೆಯಂಥ ಬಿಸ್ಕತ್ತು, ರವೆಉಂಡೆ, ನಿಪ್ಪಟ್ಟು, ಕೋಡುಬಳೆ, ಕಾರಸೇವೆ ಇನ್ನೂ ಏನೇನೋ? ನೆರೆಹೊರೆಯವರಿಗೆಲ್ಲ ಅವನ್ನು ಹಂಚಿದಾಗ ಅಪರೂಪದ ತಿಂಡಿಗಳನ್ನು ಕಂಡ ಅವರ ಮುಖಗಳು ಅರಳುವುದನ್ನು ನೋಡುವುದೇ ಒಂದು ಚೆಂದವಾಗಿತ್ತು.
ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯ (ಚರ್ಚ್) ದ ಹಿಂದುಗಡೆಯೇ ತಾತ ನೆಲೆಸಿದ್ದು ಅವರು ನಿತ್ಯ ಬೆಳಕು ಹರಿಯುವ ಮುನ್ನವೇ ಅಂದಿನ ಶಾಂತ ಪ್ರಶಾಂತ ವಾತಾವರಣದ ಆ ಗುಡಿಯಲ್ಲಿನ ಬೃಹತ್ ಗಂಟೆ ಬಾರಿಸಿದಾಗ ಢಣ್ ಎಂಬ ಆ ನಿನಾದ ಬಹುದೂರದವರೆಗೆ ಬಹುಹೊತ್ತಿನವರೆಗೆ ಅನುರಣಿಸುತ್ತ ಅನೂಹ್ಯ ಭಾವದೀಪ್ತಿಯನ್ನು ಬೆಳಗುತ್ತಿತ್ತು. ನವೆಂಬರ್ ಕೊನೆಯ ಭಾನುವಾರದಂದು ಆ ದೇವಾಲಯದಲ್ಲಿ ಕ್ರಿಸ್ತರಾಜರ ಹಬ್ಬವನ್ನು ವೈಭವದಿಂದ ಆಚರಿಸುವುದರೊಂದಿಗೆ ಕ್ರೈಸ್ತರ ಧಾರ್ಮಿಕ ವರ್ಷಕ್ಕೆ ಅಂತ್ಯ ಹಾಡಿ ಅದರ ಮರುದಿನದಿಂದಲೇ ಕ್ರಿಸ್ತನ ಹುಟ್ಟನ್ನು ಎದುರು ನೋಡುವ ಸಂಭ್ರಮ ತಾತನ ಮಾತುಗಳಲ್ಲಿ ಮೂಡಿಬಂದ ರೀತಿಯೂ ಅತ್ಯಂತ ಆಪ್ತವಾಗಿತ್ತು.
ಅಲ್ಲ, ಈ ಕ್ರಿಸ್ಮಸ್ ಸೀಸನ್ ಒಂಥರಾ ಮನಸಿಗೆ ಮುದ ನೀಡೋ ಸೀಸನ್ನು. ಒಂದು ತಿಂಗಳ ಆ ಸೀಸನ್ನು ಹೇಗೆ ಕಳೆಯುತ್ತಿತ್ತೆಂಬುದೇ ತಿಳಿಯುತ್ತಿರಲಿಲ್ಲ. ಗಾನವೃಂದದವರಂತೂ ಆ ಒಂದು ತಿಂಗಳೆಲ್ಲ ಮನೆಮನೆಗಳಿಗೆ ಭೇಟಿ ನೀಡಿ ಕ್ರಿಸ್ಮಸ್ ಗೀತೆಗಳನ್ನು ಹಾಡಿ ಊರೆಲ್ಲ ನಲಿವು ತುಂಬುತ್ತಾರೆ. ದೇವಾಲಯವು ಮೊದಲೇ ವಾರ್ಷಿಕ ಹಬ್ಬಕ್ಕೆಂದು ಸುಣ್ಣಬಣ್ಣ ಕಂಡಿರುತ್ತಿತ್ತಲ್ಲ. ಇನ್ನು ಕ್ರಿಸ್ಮಸ್ಸಿಗಾಗಿ ಬರೀ ಬಣ್ಣದ ತೋರಣಗಳ ಸಿಂಗಾರವಾಗುತ್ತಿತ್ತು ಅಷ್ಟೇ.
ಅಷ್ಟೇ ಅನ್ನೋದು ಬರೀ ಉಡಾಫೆಯ ಮಾತಾದೀತು. ಹಗಲೆಲ್ಲ ಕೆಲಸಕ್ಕೆ ತೆರಳುವ ಜನ ಸಂಜೆಯಾಗುತ್ತಲೇ ದೇವಾಲಯಕ್ಕೆ ಬಂದು ಈ ಸಿಂಗಾರದ ಕೆಲಸಕ್ಕೆ ತೊಡಗುತ್ತಿದ್ದರು. ಕೆಲವರು ಹಸಿ ಬಿದಿರಿನಿಂದ ದೊಡ್ಡದಾದ ನಕ್ಷತ್ರ ಕಟ್ಟುತ್ತಿದ್ದರು. ಕೆಲವರು ಬಹು ದೂರದವರೆಗೆ ಬಟ್ಟೆಯ ತೋರಣಗಳನ್ನು ಕಟ್ಟುತ್ತಿದ್ದರು. ಕೆಲವರು ಬಣ್ಣಬಣ್ಣದ ಜಗಮಗಿಸುವ ವಿದ್ಯುದ್ದೀಪಗಳನ್ನು ಕಟ್ಟುತ್ತಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಯೇಸು ಜನನಕ್ಕೆ ಆಸರೆಯಾದ ದನದ ಕೊಟ್ಟಿಗೆಯನ್ನು ಕಟ್ಟುವುದು ಇದೆಯಲ್ಲ ಅದಂತೂ ಬಲು ನಾಜೂಕಿನ ಕೆಲಸ. ಅದೇನು ಸುಮ್ಮನೇ ಆದೀತೇ? ಬಿದಿರ ಗಳಗಳನ್ನು ಸಿಗಿದು ಅಡ್ಡಕ್ಕೆ ಉದ್ದಕ್ಕೆ ಬಿಗಿದು, ಅದಕ್ಕೆ ಎತ್ತರೆತ್ತರಕ್ಕೆ ಬೆಳೆದಿದ್ದ ಕಾಸೆ ಹುಲ್ಲನ್ನು ಕಟ್ಟಿ ಗೋಡೆ ರಚಿಸಬೇಕು. ಅಗಲವಾದ ಕಾಗದಗಳಿಗೆ ಕಂದು ಬಣ್ಣ ಬಳಿದು ಮುದ್ದೆ ಮಾಡಿ ಬಂಡೆಗಳ ಆಕೃತಿ ಮಾಡಿಟ್ಟು ಸೂರು ರೂಪಿಸಬೇಕು. ಗಿಡಗಳನ್ನೂ ಸಸಿಗಳನ್ನೂ ಕಲಾತ್ಮಕವಾಗಿ ಜೋಡಿಸಿ ಪುಟ್ಟ ಸಸ್ಯೋದ್ಯಾನ ರೂಪಿಸಿ ಅವುಗಳ ನಡುವೆ ನಿರ್ಭರವಾಗಿ ಹರಿವ ನೀರಿನ ಸಣ್ಣ ಒರತೆಗಳನ್ನು ಮಾಡಬೇಕು.
ಇಷ್ಟೆಲ್ಲ ಆದ ಮೇಲೆ ಆ ಗೋಶಾಲೆಯಲ್ಲಿ ಹಸುಕರುಗಳು ಇಲ್ಲದಿದ್ದರೆ ಹೇಗೆ? ಬಣ್ಣಬಣ್ಣದ ಮಣ್ಣಿನ ದನಗಳು, ಕರುಗಳು, ಕುರಿ ಮಂದೆಯೊಂದಿಗೆ ಕುರುಬರು, ಮೂರು ಜ್ಞಾನಿಗಳು ಮತ್ತು ಅವರ ಒಂಟೆಗಳು, ಮತ್ತು ಮುಖ್ಯವಾಗಿ ಎಲ್ಲ ಆಕರ್ಷಣೆಗಳ ಕೇಂದ್ರಬಿಂದುವಾಗಿ ಮರಿಯಾಮಾತೆ ಮತ್ತು ಜೋಸೆಫರ ನಡುವೆ ಪುಟ್ಟ ಗೋದಲಿಯಲ್ಲಿ ಮಲಗಿದ ಯೇಸುಕಂದನ ಆ ಸುಂದರ ನಗು. ಜೊತೆಯಲ್ಲಿ ನಾವೂ ಇದ್ದೇವೆ ಎಂಬಂತೆ ಹಸಿಹುಲ್ಲಿನ ಸ್ನಿಗ್ದ ಕಂಪು, ಮೊಂಬತ್ತಿಗಳಲ್ಲಿ ಕುಣಿಯುವ ಬೆಳಕು.
ಡಿಸೆಂಬರ್ ಇಪ್ಪತ್ನಾಲ್ಕರ ರಾತ್ರಿ ಹನ್ನೊಂದಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಜನ ಬರತೊಡಗಿ ದೇವಾಲಯದ ತುಂಬೆಲ್ಲ ಹೊಸಬಟ್ಟೆಯ ಗಮಲಿನೊಂದಿಗೆ ಸುಗಂಧದ ಪರಿಮಳ ಹರಡಿರುತ್ತಿತ್ತು. ಅಷ್ಟು ಜನರಿದ್ದರೂ ಅಲ್ಲಿ ದಿವ್ಯ ಮೌನ. ಹನ್ನೆರಡಕ್ಕೆ ಇನ್ನೂ ಐದು ನಿಮಿಷ ಇರುವಂತೆಯೇ ಒಂದು ಭಜನೆಯೊಂದಿಗೆ ಪೂಜಾವಿಧಿ ಪ್ರಾರಂಭವಾಗಿ ಸರಿಯಾಗಿ ಹನ್ನೆರಡು ಗಂಟೆಗೆ ಚರ್ಚಿನ ಗಂಟೆಯ ಢಣ್ ಢಣ್ ನಾದದೊಂದಿಗೆ ಎಲ್ಲರೂ ಭಕ್ತಿಯೊಂದಿಗೆ "ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ" ಎಂದು ಎದೆತುಂಬಿ ಹಾಡುವ ಆ ಶುಭಗಳಿಗೆ "ಕ್ರಿಸ್ತಜಯಂತಿಯ ಶುಭಾಶಯಗಳು" ಎಂಬ ಘೋಷಣೆಗೆ ನಾಂದಿಯಾಗುತ್ತಿತ್ತು.
ಇದೇ ಸಂದರ್ಭದಲ್ಲಿ ಹೊರಗೆ ನಕ್ಷತ್ರಗಳು ನಗುತ್ತಿದ್ದವು. ಅವುಗಳೊಂದಿಗೆ ವಿದ್ಯುದ್ದೀಪಗಳು ಪೈಪೋಟಿ ನಡೆಸುತ್ತಿದ್ದವು. ಕ್ರಿಸ್ಮಸ್ ಮರದಲ್ಲಿ ತೂಗುಬಿಟ್ಟ ದೀಪಗಳು ಕಣ್ಣು ಮಿಟುಕಿಸುತ್ತಿದ್ದವು. ಚಿತ್ತಾರವುಳ್ಳ ಬಣ್ಣದ ಬೆಲೂನುಗಳು ತೇಲಾಡುತ್ತಿದ್ದವು.
ಜನರೆಲ್ಲ ಹಳೆಯ ವಿರಸಗಳೆಲ್ಲವನ್ನೂ ಮರೆತು ಗಂಡು ಹೆಣ್ಣು, ಮಕ್ಕಳು ವೃದ್ಧರೆಂಬ ಭೇದವಿಲ್ಲದೆ ಕೈ ಕುಲುಕುತ್ತಾ ಸಂಭ್ರಮ ಸಡಗರಗಳಿಂದ ಕ್ರಿಸ್ತಜಯಂತಿಯ ಶುಭಾಶಯಗಳನ್ನು ಹಂಚಿಕೊಳ್ಳುವ ಈ ಕ್ರಿಸ್ಮಸ್ ಮತ್ತೆ ಮತ್ತೆ ಬರುತ್ತಿರಲಿ, ಸಂಭ್ರಮ ಸಡಗರಗಳ ಜೊತೆಜೊತೆಗೇ, ಜಾತಿ ಮತಗಳ ಭೇದವ ಕಿತ್ತೊಗೆದು ಶಾಂತಿ ಸೌಹಾರ್ದ ಮೂಡಿಸಲಿ.
ಕ್ರಿಸ್ಮಸ್ಸು ಅಂತ ನಾವು ಹೇಳೋ ಪದ ತಾತನ ಬಾಯಲ್ಲಿ ಕಿಸ್ಮಿಸ್ಸು ಆಗುವಾಗ ಮರೆಯಲ್ಲೇ ಕಿಸಕ್ಕನೆ ನಕ್ಕು ರಾತ್ರಿ ಅಮ್ಮನೊಟ್ಟಿಗೆ ಈ ಮಾತು ಹೇಳುತ್ತಾ ನಗುತ್ತಿದ್ದುದು ಕನಸೆಂಬಂತೆ ಕ್ರಿಸ್ಮಸ್ ಬಂದ ಕೂಡಲೇ ಮನಸಿನಲ್ಲಿ ಹಾಯ್ದುಹೋಗುತ್ತದೆ.
ಅದು ಸರಿ ಕ್ರಿಸ್ಮಸ್ಸಿಗೆ ಅಮ್ಮ ಅದೇನೆಲ್ಲ ತಿಂಡಿಗಳನ್ನು ಮಾಡುತ್ತಿದ್ದರಲ್ಲ. ಶಾಲೆ ಕಳೆದು ಮನೆಗೆ ಬರುವಷ್ಟರಲ್ಲಿ ನಾನಾ ತರದ ತಿಂಡಿಗಳನ್ನು ಮಾಡಿ ಡಬ್ಬಿಗಳಿಗೆ ತುಂಬಿ ಅಟ್ಟಕ್ಕೇರಿಸಿ, ಏನೂ ನಡೆದಿಲ್ಲವೆಂಬಂತೆ ಮನೆಯನ್ನು ಒಪ್ಪ ಓರಣವಾಗಿಟ್ಟಿರುತ್ತಿದ್ದರಲ್ಲ. ಹಬ್ಬದ ದಿನವಷ್ಟೇ ಅಷ್ಟೂ ತಿಂಡಿಗಳು ಹೊರಬರುತ್ತಿದ್ದವು. ಕಜ್ಜಾಯ, ಕರ್ಚಿಕಾಯಿ, ಚಕ್ಕುಲಿ, ಕಲ್ಕಲ್, ರೋಸ್ ಕುಕ್ಕೀಸ್, ಶಕ್ಕರ್ ಪೊಳೆಯಂಥ ಬಿಸ್ಕತ್ತು, ರವೆಉಂಡೆ, ನಿಪ್ಪಟ್ಟು, ಕೋಡುಬಳೆ, ಕಾರಸೇವೆ ಇನ್ನೂ ಏನೇನೋ? ನೆರೆಹೊರೆಯವರಿಗೆಲ್ಲ ಅವನ್ನು ಹಂಚಿದಾಗ ಅಪರೂಪದ ತಿಂಡಿಗಳನ್ನು ಕಂಡ ಅವರ ಮುಖಗಳು ಅರಳುವುದನ್ನು ನೋಡುವುದೇ ಒಂದು ಚೆಂದವಾಗಿತ್ತು.
ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯ (ಚರ್ಚ್) ದ ಹಿಂದುಗಡೆಯೇ ತಾತ ನೆಲೆಸಿದ್ದು ಅವರು ನಿತ್ಯ ಬೆಳಕು ಹರಿಯುವ ಮುನ್ನವೇ ಅಂದಿನ ಶಾಂತ ಪ್ರಶಾಂತ ವಾತಾವರಣದ ಆ ಗುಡಿಯಲ್ಲಿನ ಬೃಹತ್ ಗಂಟೆ ಬಾರಿಸಿದಾಗ ಢಣ್ ಎಂಬ ಆ ನಿನಾದ ಬಹುದೂರದವರೆಗೆ ಬಹುಹೊತ್ತಿನವರೆಗೆ ಅನುರಣಿಸುತ್ತ ಅನೂಹ್ಯ ಭಾವದೀಪ್ತಿಯನ್ನು ಬೆಳಗುತ್ತಿತ್ತು. ನವೆಂಬರ್ ಕೊನೆಯ ಭಾನುವಾರದಂದು ಆ ದೇವಾಲಯದಲ್ಲಿ ಕ್ರಿಸ್ತರಾಜರ ಹಬ್ಬವನ್ನು ವೈಭವದಿಂದ ಆಚರಿಸುವುದರೊಂದಿಗೆ ಕ್ರೈಸ್ತರ ಧಾರ್ಮಿಕ ವರ್ಷಕ್ಕೆ ಅಂತ್ಯ ಹಾಡಿ ಅದರ ಮರುದಿನದಿಂದಲೇ ಕ್ರಿಸ್ತನ ಹುಟ್ಟನ್ನು ಎದುರು ನೋಡುವ ಸಂಭ್ರಮ ತಾತನ ಮಾತುಗಳಲ್ಲಿ ಮೂಡಿಬಂದ ರೀತಿಯೂ ಅತ್ಯಂತ ಆಪ್ತವಾಗಿತ್ತು.
ಅಲ್ಲ, ಈ ಕ್ರಿಸ್ಮಸ್ ಸೀಸನ್ ಒಂಥರಾ ಮನಸಿಗೆ ಮುದ ನೀಡೋ ಸೀಸನ್ನು. ಒಂದು ತಿಂಗಳ ಆ ಸೀಸನ್ನು ಹೇಗೆ ಕಳೆಯುತ್ತಿತ್ತೆಂಬುದೇ ತಿಳಿಯುತ್ತಿರಲಿಲ್ಲ. ಗಾನವೃಂದದವರಂತೂ ಆ ಒಂದು ತಿಂಗಳೆಲ್ಲ ಮನೆಮನೆಗಳಿಗೆ ಭೇಟಿ ನೀಡಿ ಕ್ರಿಸ್ಮಸ್ ಗೀತೆಗಳನ್ನು ಹಾಡಿ ಊರೆಲ್ಲ ನಲಿವು ತುಂಬುತ್ತಾರೆ. ದೇವಾಲಯವು ಮೊದಲೇ ವಾರ್ಷಿಕ ಹಬ್ಬಕ್ಕೆಂದು ಸುಣ್ಣಬಣ್ಣ ಕಂಡಿರುತ್ತಿತ್ತಲ್ಲ. ಇನ್ನು ಕ್ರಿಸ್ಮಸ್ಸಿಗಾಗಿ ಬರೀ ಬಣ್ಣದ ತೋರಣಗಳ ಸಿಂಗಾರವಾಗುತ್ತಿತ್ತು ಅಷ್ಟೇ.
ಅಷ್ಟೇ ಅನ್ನೋದು ಬರೀ ಉಡಾಫೆಯ ಮಾತಾದೀತು. ಹಗಲೆಲ್ಲ ಕೆಲಸಕ್ಕೆ ತೆರಳುವ ಜನ ಸಂಜೆಯಾಗುತ್ತಲೇ ದೇವಾಲಯಕ್ಕೆ ಬಂದು ಈ ಸಿಂಗಾರದ ಕೆಲಸಕ್ಕೆ ತೊಡಗುತ್ತಿದ್ದರು. ಕೆಲವರು ಹಸಿ ಬಿದಿರಿನಿಂದ ದೊಡ್ಡದಾದ ನಕ್ಷತ್ರ ಕಟ್ಟುತ್ತಿದ್ದರು. ಕೆಲವರು ಬಹು ದೂರದವರೆಗೆ ಬಟ್ಟೆಯ ತೋರಣಗಳನ್ನು ಕಟ್ಟುತ್ತಿದ್ದರು. ಕೆಲವರು ಬಣ್ಣಬಣ್ಣದ ಜಗಮಗಿಸುವ ವಿದ್ಯುದ್ದೀಪಗಳನ್ನು ಕಟ್ಟುತ್ತಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ಯೇಸು ಜನನಕ್ಕೆ ಆಸರೆಯಾದ ದನದ ಕೊಟ್ಟಿಗೆಯನ್ನು ಕಟ್ಟುವುದು ಇದೆಯಲ್ಲ ಅದಂತೂ ಬಲು ನಾಜೂಕಿನ ಕೆಲಸ. ಅದೇನು ಸುಮ್ಮನೇ ಆದೀತೇ? ಬಿದಿರ ಗಳಗಳನ್ನು ಸಿಗಿದು ಅಡ್ಡಕ್ಕೆ ಉದ್ದಕ್ಕೆ ಬಿಗಿದು, ಅದಕ್ಕೆ ಎತ್ತರೆತ್ತರಕ್ಕೆ ಬೆಳೆದಿದ್ದ ಕಾಸೆ ಹುಲ್ಲನ್ನು ಕಟ್ಟಿ ಗೋಡೆ ರಚಿಸಬೇಕು. ಅಗಲವಾದ ಕಾಗದಗಳಿಗೆ ಕಂದು ಬಣ್ಣ ಬಳಿದು ಮುದ್ದೆ ಮಾಡಿ ಬಂಡೆಗಳ ಆಕೃತಿ ಮಾಡಿಟ್ಟು ಸೂರು ರೂಪಿಸಬೇಕು. ಗಿಡಗಳನ್ನೂ ಸಸಿಗಳನ್ನೂ ಕಲಾತ್ಮಕವಾಗಿ ಜೋಡಿಸಿ ಪುಟ್ಟ ಸಸ್ಯೋದ್ಯಾನ ರೂಪಿಸಿ ಅವುಗಳ ನಡುವೆ ನಿರ್ಭರವಾಗಿ ಹರಿವ ನೀರಿನ ಸಣ್ಣ ಒರತೆಗಳನ್ನು ಮಾಡಬೇಕು.
ಇಷ್ಟೆಲ್ಲ ಆದ ಮೇಲೆ ಆ ಗೋಶಾಲೆಯಲ್ಲಿ ಹಸುಕರುಗಳು ಇಲ್ಲದಿದ್ದರೆ ಹೇಗೆ? ಬಣ್ಣಬಣ್ಣದ ಮಣ್ಣಿನ ದನಗಳು, ಕರುಗಳು, ಕುರಿ ಮಂದೆಯೊಂದಿಗೆ ಕುರುಬರು, ಮೂರು ಜ್ಞಾನಿಗಳು ಮತ್ತು ಅವರ ಒಂಟೆಗಳು, ಮತ್ತು ಮುಖ್ಯವಾಗಿ ಎಲ್ಲ ಆಕರ್ಷಣೆಗಳ ಕೇಂದ್ರಬಿಂದುವಾಗಿ ಮರಿಯಾಮಾತೆ ಮತ್ತು ಜೋಸೆಫರ ನಡುವೆ ಪುಟ್ಟ ಗೋದಲಿಯಲ್ಲಿ ಮಲಗಿದ ಯೇಸುಕಂದನ ಆ ಸುಂದರ ನಗು. ಜೊತೆಯಲ್ಲಿ ನಾವೂ ಇದ್ದೇವೆ ಎಂಬಂತೆ ಹಸಿಹುಲ್ಲಿನ ಸ್ನಿಗ್ದ ಕಂಪು, ಮೊಂಬತ್ತಿಗಳಲ್ಲಿ ಕುಣಿಯುವ ಬೆಳಕು.
ಡಿಸೆಂಬರ್ ಇಪ್ಪತ್ನಾಲ್ಕರ ರಾತ್ರಿ ಹನ್ನೊಂದಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಜನ ಬರತೊಡಗಿ ದೇವಾಲಯದ ತುಂಬೆಲ್ಲ ಹೊಸಬಟ್ಟೆಯ ಗಮಲಿನೊಂದಿಗೆ ಸುಗಂಧದ ಪರಿಮಳ ಹರಡಿರುತ್ತಿತ್ತು. ಅಷ್ಟು ಜನರಿದ್ದರೂ ಅಲ್ಲಿ ದಿವ್ಯ ಮೌನ. ಹನ್ನೆರಡಕ್ಕೆ ಇನ್ನೂ ಐದು ನಿಮಿಷ ಇರುವಂತೆಯೇ ಒಂದು ಭಜನೆಯೊಂದಿಗೆ ಪೂಜಾವಿಧಿ ಪ್ರಾರಂಭವಾಗಿ ಸರಿಯಾಗಿ ಹನ್ನೆರಡು ಗಂಟೆಗೆ ಚರ್ಚಿನ ಗಂಟೆಯ ಢಣ್ ಢಣ್ ನಾದದೊಂದಿಗೆ ಎಲ್ಲರೂ ಭಕ್ತಿಯೊಂದಿಗೆ "ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ" ಎಂದು ಎದೆತುಂಬಿ ಹಾಡುವ ಆ ಶುಭಗಳಿಗೆ "ಕ್ರಿಸ್ತಜಯಂತಿಯ ಶುಭಾಶಯಗಳು" ಎಂಬ ಘೋಷಣೆಗೆ ನಾಂದಿಯಾಗುತ್ತಿತ್ತು.
ಇದೇ ಸಂದರ್ಭದಲ್ಲಿ ಹೊರಗೆ ನಕ್ಷತ್ರಗಳು ನಗುತ್ತಿದ್ದವು. ಅವುಗಳೊಂದಿಗೆ ವಿದ್ಯುದ್ದೀಪಗಳು ಪೈಪೋಟಿ ನಡೆಸುತ್ತಿದ್ದವು. ಕ್ರಿಸ್ಮಸ್ ಮರದಲ್ಲಿ ತೂಗುಬಿಟ್ಟ ದೀಪಗಳು ಕಣ್ಣು ಮಿಟುಕಿಸುತ್ತಿದ್ದವು. ಚಿತ್ತಾರವುಳ್ಳ ಬಣ್ಣದ ಬೆಲೂನುಗಳು ತೇಲಾಡುತ್ತಿದ್ದವು.
ಜನರೆಲ್ಲ ಹಳೆಯ ವಿರಸಗಳೆಲ್ಲವನ್ನೂ ಮರೆತು ಗಂಡು ಹೆಣ್ಣು, ಮಕ್ಕಳು ವೃದ್ಧರೆಂಬ ಭೇದವಿಲ್ಲದೆ ಕೈ ಕುಲುಕುತ್ತಾ ಸಂಭ್ರಮ ಸಡಗರಗಳಿಂದ ಕ್ರಿಸ್ತಜಯಂತಿಯ ಶುಭಾಶಯಗಳನ್ನು ಹಂಚಿಕೊಳ್ಳುವ ಈ ಕ್ರಿಸ್ಮಸ್ ಮತ್ತೆ ಮತ್ತೆ ಬರುತ್ತಿರಲಿ, ಸಂಭ್ರಮ ಸಡಗರಗಳ ಜೊತೆಜೊತೆಗೇ, ಜಾತಿ ಮತಗಳ ಭೇದವ ಕಿತ್ತೊಗೆದು ಶಾಂತಿ ಸೌಹಾರ್ದ ಮೂಡಿಸಲಿ.
ಮಂಗಳವಾರ, ಡಿಸೆಂಬರ್ 9, 2008
ಒಂದು ಪವಿತ್ರಕಾರ್ಯ
ಮುಂಬೈಯಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ನಡೆದು ಹಿಂಸೆ ತಾಂಡವವಾಡಿತು. ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಇಂಡಿಯಾ ದೇಶದ ಒಳ ಭಯೋತ್ಪಾದಕರಿಂದ ಒರಿಸ್ಸಾ ಮತ್ತು ಕರ್ನಾಟಕಗಳು ಹಿಂಸೆಯಿಂದ ಜರ್ಜರಿತಗೊಂಡವು. ಮುಂಬೈ ಭಯೋತ್ಪಾದಕರು ಧರ್ಮವನ್ನು ನೋಡದೆ ಹಿಂಸಿಸಿದರೆ ಈ ಒಳಗಿನ ಭಯೋತ್ಪಾದಕರು ಕ್ರೈಸ್ತರನ್ನೇ ಗುರಿಯಾಗಿಸಿಕೊಂಡು ಹಿಂಸಿಸಿದರು. ಇವರ ದೌರ್ಜನ್ಯಕ್ಕೆ ಅಮಾಯಕರು ಬಲಿಯಾಗಿ, ಹೆಂಗಸರು ಅಪಮಾನಿತರಾಗಿ, ಮಕ್ಕಳು ಅನಾಥರಾಗಿದ್ದಾರೆ. ಈ ಸಂತ್ರಸ್ತರಿಗಾಗಿ ನಮ್ಮ ಹೃದಯಗಳು ಮರುಗಿವೆಯಾದರೂ ನಾವು ಇವರಿಗಾಗಿ ಮಾಡಿದ್ದೇನು ಎಂದು ಚಿಂತಿಸಬೇಕಿದೆ. ನಮ್ಮ ಅನುಕಂಪ, ನಮ್ಮ ಪ್ರಾರ್ಥನೆ, ಆಕ್ರೋಶ, ವಿಚಾರವಿನಿಮಯ, ಜಾಗೃತಿಗಳ ಹೊರತಾಗಿ ನಾವು ಮಾಡಬೇಕಾದುದು ಇನ್ನೇನೋ ಇದೆ.
ಇಂದು ನಾವೆಲ್ಲ ಕ್ರಿಸ್ತನ ಆಗಮನ ಕಾಲದಲ್ಲಿದ್ದೇವೆ. ಇದು ಸ್ವಚ್ಛತೆಯ, ಸಿದ್ಧತೆಯ, ಬದಲಾವಣೆಯ, ನವೀಕರಣದ ದಿನಗಳು. ನಮ್ಮ ಮನೆಗಳಲ್ಲಿ ಮನಗಳಲ್ಲಿ ಯೇಸುಕ್ರಿಸ್ತನ ಜನನವನ್ನು ಸ್ವಾಗತಿಸಲು ನಾವೆಲ್ಲ ಸಿದ್ಧರಾಗುತ್ತಿದ್ದೇವೆ. ಆದರೆ ಒರಿಸ್ಸಾದಲ್ಲಿನ ಕ್ರೈಸ್ತ ಜನತೆ ಇನ್ನೂ ಭಯದ ಆತಂಕ ವಾತಾವರಣದಲ್ಲಿದ್ದಾರೆ. ಇಂದು ಆ ಜನ ನೀರು ನೆರಳಿಲ್ಲದವರಾಗಿದ್ದಾರೆ. ಈ ಸಂದರ್ಭದಲ್ಲಿ "ನನ್ನ ಅತಿ ಕಡೆಯ ಸೋದರನಿಗೆ ನೀನು ಏನು ಮಾಡುವಿಯೋ ಅದನ್ನು ನನಗೇ ಮಾಡಿದಂತೆ" ಎಂದ ಯೇಸುಕ್ರಿಸ್ತನ ನುಡಿಗಳು ನಮ್ಮ ಮನಸ್ಸಿನಲ್ಲಿ ಧ್ವನಿಸಲಿ. ಆದ್ದರಿಂದ ದೌರ್ಜನ್ಯಕ್ಕೊಳಗಾದ ಒರಿಸ್ಸಾದ ಕ್ರೈಸ್ತ ಜನತೆಗೋಸ್ಕರ ಏನನ್ನಾದರೂ ಮಾಡೋಣ. ಏಕೆಂದರೆ ಆ ಜನ ಧರ್ಮದ ಕಾರಣವಾಗಿ ತಮ್ಮ ಮನೆಮಠ ಆಸ್ತಿಪಾಸ್ತಿಗಳನ್ನು ಮಾತ್ರವಲ್ಲತಮ್ಮ ಆಪ್ತೇಷ್ಟರನ್ನೂ ಕಳೆದುಕೊಂಡಿದ್ದಾರೆ. ಅಸಂಖ್ಯ ಚರ್ಚುಗಳು, ಅನಾಥಾಶ್ರಮಗಳು ಸುಟ್ಟು ಬೂದಿಯಾಗಿವೆ. ಅವುಗಳನ್ನೆಲ್ಲ ಮರು ನಿರ್ಮಾಣ ಮಾಡಿ ಕುಟುಂಬಗಳಿಗೆ ಆಶ್ರಯ ಕಲ್ಪಿಸಬೇಕಾಗಿದೆ. ನಾವು ಆ ನತದೃಷ್ಟರ ಸಹೋದರರಾಗಿ ಕಿಂಚಿತ್ತಾದರೂ ಸಹಾಯ ಮಾಡೋಣ. ಅನಾಥರಿಗೆ ದೀನದರಿದ್ರರಿಗೆ ಸಹಾಯ ಮಾಡುವುದು ನಮಗೊಂದು ಪವಿತ್ರಕಾರ್ಯ.
ನಮ್ಮ ಕ್ರಿಸ್ಮಸ್ ಆಚರಣೆಯ ವೆಚ್ಚವನ್ನು ತಗ್ಗಿಸಿ ಆ ಹಣವನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸೋಣ: The Cuttack Roman Catholic Diocesan Corporation, SB A/C No.855 (RTGS CODE FDRL 0001232), The Federal Bank Ltd., (First Floor), #14D, Bapuji nagar, Janapath, Bhubaneshwar 751009, ORISSA
ಫೆಡೆರಲ್ ಬ್ಯಾಂಕಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲದವರು ಮೇಲೆ ತಿಳಿಸಿದ ಖಾತೆಗೆ ಚೆಕ್ಕು ಬರೆದು ಅದನ್ನು ಈ ವಿಳಾಸಕ್ಕೆ ಕಳುಹಿಸಿರಿ. Most Rev. Raphael Cheenath, SVD., Archbishop's house, # 9/16, Satyanagar, Bhubaneshwar, Orissa. Phone: 0674 257525 email: crcdc@satyam.net.in
ಪರಿಹಾರ ಸಾಮಗ್ರಿಗಳನ್ನು ಕಳಿಸಲಿಚ್ಛಿಸುವವರು ದಯಮಾಡಿ ವಿಳಾಸಕ್ಕೆ ಕಳಿಸಬಹುದು. Sister Suma, Missionaries of Charity, Satyanagar, Bhubaneshwar 751007, Orissa
ನಿಮ್ಮ ಕೊಡುಗೆಗಳಿಂದ ಒರಿಸ್ಸಾದ ಸಂತ್ರಸ್ತ ಜನತೆಯು ಒಳ್ಳೆಯ ದಿನಗಳನ್ನು ಕಾಣುವಂತಾಗಲಿ.
ದೇವರು ನಿಮಗೂ ಒಳ್ಳೆಯದು ಮಾಡಲಿ. ಕ್ರಿಸ್ತನು ನಿಮಗೆ ತನ್ನ ಪ್ರೀತಿಶಾಂತಿಗಳನ್ನು ಧಾರೆಯೆರೆಯಲಿ. ನೆಮ್ಮದಿ ನಿರಾತಂಕ ನಿರುಮ್ಮಳತೆ ನಿಮ್ಮದಾಗಲಿ. ಮೈಮನಸ್ಸುಗಳ ಆರೋಗ್ಯ ವರ್ಧಿಸಲಿ. ಸಂತೃಪ್ತಿ, ಸಮೃದ್ಧಿಗಳು ತುಂಬಿ ತುಳುಕಾಡಲಿ. ಕ್ರಿಸ್ತನೇ ನಿಮ್ಮ ದಾರಿದೀವಿಗೆಯಾಗಿ ಕೈ ಹಿಡಿದು ಮುನ್ನಡೆಸಲಿ. ಕ್ರಿಸ್ತಜಯಂತಿಯ ಹಾರ್ದಿಕ ಶುಭಾಶಯಗಳು.
ಇಂದು ನಾವೆಲ್ಲ ಕ್ರಿಸ್ತನ ಆಗಮನ ಕಾಲದಲ್ಲಿದ್ದೇವೆ. ಇದು ಸ್ವಚ್ಛತೆಯ, ಸಿದ್ಧತೆಯ, ಬದಲಾವಣೆಯ, ನವೀಕರಣದ ದಿನಗಳು. ನಮ್ಮ ಮನೆಗಳಲ್ಲಿ ಮನಗಳಲ್ಲಿ ಯೇಸುಕ್ರಿಸ್ತನ ಜನನವನ್ನು ಸ್ವಾಗತಿಸಲು ನಾವೆಲ್ಲ ಸಿದ್ಧರಾಗುತ್ತಿದ್ದೇವೆ. ಆದರೆ ಒರಿಸ್ಸಾದಲ್ಲಿನ ಕ್ರೈಸ್ತ ಜನತೆ ಇನ್ನೂ ಭಯದ ಆತಂಕ ವಾತಾವರಣದಲ್ಲಿದ್ದಾರೆ. ಇಂದು ಆ ಜನ ನೀರು ನೆರಳಿಲ್ಲದವರಾಗಿದ್ದಾರೆ. ಈ ಸಂದರ್ಭದಲ್ಲಿ "ನನ್ನ ಅತಿ ಕಡೆಯ ಸೋದರನಿಗೆ ನೀನು ಏನು ಮಾಡುವಿಯೋ ಅದನ್ನು ನನಗೇ ಮಾಡಿದಂತೆ" ಎಂದ ಯೇಸುಕ್ರಿಸ್ತನ ನುಡಿಗಳು ನಮ್ಮ ಮನಸ್ಸಿನಲ್ಲಿ ಧ್ವನಿಸಲಿ. ಆದ್ದರಿಂದ ದೌರ್ಜನ್ಯಕ್ಕೊಳಗಾದ ಒರಿಸ್ಸಾದ ಕ್ರೈಸ್ತ ಜನತೆಗೋಸ್ಕರ ಏನನ್ನಾದರೂ ಮಾಡೋಣ. ಏಕೆಂದರೆ ಆ ಜನ ಧರ್ಮದ ಕಾರಣವಾಗಿ ತಮ್ಮ ಮನೆಮಠ ಆಸ್ತಿಪಾಸ್ತಿಗಳನ್ನು ಮಾತ್ರವಲ್ಲತಮ್ಮ ಆಪ್ತೇಷ್ಟರನ್ನೂ ಕಳೆದುಕೊಂಡಿದ್ದಾರೆ. ಅಸಂಖ್ಯ ಚರ್ಚುಗಳು, ಅನಾಥಾಶ್ರಮಗಳು ಸುಟ್ಟು ಬೂದಿಯಾಗಿವೆ. ಅವುಗಳನ್ನೆಲ್ಲ ಮರು ನಿರ್ಮಾಣ ಮಾಡಿ ಕುಟುಂಬಗಳಿಗೆ ಆಶ್ರಯ ಕಲ್ಪಿಸಬೇಕಾಗಿದೆ. ನಾವು ಆ ನತದೃಷ್ಟರ ಸಹೋದರರಾಗಿ ಕಿಂಚಿತ್ತಾದರೂ ಸಹಾಯ ಮಾಡೋಣ. ಅನಾಥರಿಗೆ ದೀನದರಿದ್ರರಿಗೆ ಸಹಾಯ ಮಾಡುವುದು ನಮಗೊಂದು ಪವಿತ್ರಕಾರ್ಯ.
ನಮ್ಮ ಕ್ರಿಸ್ಮಸ್ ಆಚರಣೆಯ ವೆಚ್ಚವನ್ನು ತಗ್ಗಿಸಿ ಆ ಹಣವನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸೋಣ: The Cuttack Roman Catholic Diocesan Corporation, SB A/C No.855 (RTGS CODE FDRL 0001232), The Federal Bank Ltd., (First Floor), #14D, Bapuji nagar, Janapath, Bhubaneshwar 751009, ORISSA
ಫೆಡೆರಲ್ ಬ್ಯಾಂಕಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲದವರು ಮೇಲೆ ತಿಳಿಸಿದ ಖಾತೆಗೆ ಚೆಕ್ಕು ಬರೆದು ಅದನ್ನು ಈ ವಿಳಾಸಕ್ಕೆ ಕಳುಹಿಸಿರಿ. Most Rev. Raphael Cheenath, SVD., Archbishop's house, # 9/16, Satyanagar, Bhubaneshwar, Orissa. Phone: 0674 257525 email: crcdc@satyam.net.in
ಪರಿಹಾರ ಸಾಮಗ್ರಿಗಳನ್ನು ಕಳಿಸಲಿಚ್ಛಿಸುವವರು ದಯಮಾಡಿ ವಿಳಾಸಕ್ಕೆ ಕಳಿಸಬಹುದು. Sister Suma, Missionaries of Charity, Satyanagar, Bhubaneshwar 751007, Orissa
ನಿಮ್ಮ ಕೊಡುಗೆಗಳಿಂದ ಒರಿಸ್ಸಾದ ಸಂತ್ರಸ್ತ ಜನತೆಯು ಒಳ್ಳೆಯ ದಿನಗಳನ್ನು ಕಾಣುವಂತಾಗಲಿ.
ದೇವರು ನಿಮಗೂ ಒಳ್ಳೆಯದು ಮಾಡಲಿ. ಕ್ರಿಸ್ತನು ನಿಮಗೆ ತನ್ನ ಪ್ರೀತಿಶಾಂತಿಗಳನ್ನು ಧಾರೆಯೆರೆಯಲಿ. ನೆಮ್ಮದಿ ನಿರಾತಂಕ ನಿರುಮ್ಮಳತೆ ನಿಮ್ಮದಾಗಲಿ. ಮೈಮನಸ್ಸುಗಳ ಆರೋಗ್ಯ ವರ್ಧಿಸಲಿ. ಸಂತೃಪ್ತಿ, ಸಮೃದ್ಧಿಗಳು ತುಂಬಿ ತುಳುಕಾಡಲಿ. ಕ್ರಿಸ್ತನೇ ನಿಮ್ಮ ದಾರಿದೀವಿಗೆಯಾಗಿ ಕೈ ಹಿಡಿದು ಮುನ್ನಡೆಸಲಿ. ಕ್ರಿಸ್ತಜಯಂತಿಯ ಹಾರ್ದಿಕ ಶುಭಾಶಯಗಳು.
ಶನಿವಾರ, ನವೆಂಬರ್ 1, 2008
ಒರಿಸ್ಸಾ ಮತ್ತು ಮತಾಂತರ
ಒರಿಸ್ಸಾದ ಆದಿವಾಸಿ ಜನ ಹಿಂದೂಗಳೂ ಅಲ್ಲ ಕ್ರೈಸ್ತರೂ ಅಲ್ಲ. ಅವರೆಲ್ಲ ಪ್ರಕೃತಿಪೂಜಕರು. ರಾಮನಾಗಲೀ ಕ್ರಿಸ್ತನಾಗಲೀ ಯಾರೆಂದು ಅವರಿಗೆ ತಿಳಿಯದು. ಬೆಟ್ಟಗುಡ್ಡಗಳೇ ಅವರ ಮನೆ. ಅರಣ್ಯವೇ ಅವರ ದೇವರು. ಅರಣ್ಯದಲ್ಲಿ ಸಿಗುವ ಯಾವುದೋ ಮರದ ಬೇರು, ಅದರಿಂದೊಸರುವ ನೀರು, ಗೆಡ್ಡೆಗೆಣಸುಗಳು, ಯಾವುದೋ ಮರದ ಎಲೆ, ಅಪರೂಪಕ್ಕೆ ಸಿಗುವ ಮೊಲ ಮುಂಗುಸಿ ಮುಂತಾದ ಪ್ರಾಣಿಗಳು, ಕಾಡ ಹಕ್ಕಿಗಳು ಕೋಳಿಗಳು ಇವೇ ಅವರ ಆಹಾರ. ಆರು ತಿಂಗಳು ಒಂದೇ ಸಮನೆ ಮಳೆ ಸುರಿದರೂ ಎಲ್ಲ ಇಂಗಿಹೋಗುವ ಹಾಗೂ ಮತ್ತಾರು ತಿಂಗಳ ಬಿಸಿಲ ಬೇಗೆಗೆ ಎಲ್ಲ ಒಣಗಿ ಮರುಭೂಮಿಯಂತಾಗುವ ನೆಲ, ಇಲ್ಲಿ ಜೀವನ ನಡೆಸುವುದೇ ಪ್ರತಿನಿತ್ಯದ ಗೋಳಾಗಿರುವಾಗ ದೇವರುದಿಂಡರಿಗೆ ಎಲ್ಲಿ ಸಮಯ? ಎಲ್ಲೋ ಕೆಲವರು ಕಣಿವೆಗಳ ಕೆಸರು ಭೂಮಿಯಲ್ಲಿ ಭತ್ತ ಬೆಳೆದುಕೊಳ್ಳುತ್ತಾರೆ. ಅಲ್ಲಲ್ಲಿ ವಾರಕ್ಕೊಮ್ಮೆ ನಡೆವ ಸಂತೆಗಳಲ್ಲಿ ಈ ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳಿಗಾಗಿ ವಿನಿಮಯಿಸಿಕೊಳ್ಳುತ್ತಾರೆ.
ಸಂತಾಲಿ ಎಂಬ ಸಂಪರ್ಕ ಭಾಷೆಯೊಂದನ್ನು ಹೊರತುಪಡಿಸಿದರೆ ಅವರ ಭಾಷೆಗಳೂ ವೇಷಭೂಷಣಗಳೂ ವೈವಿಧ್ಯಮಯ. ಹೆಚ್ಚಿನವರು ಲಂಗೋಟಿ ಬಿಟ್ಟರೆ ಬೇರೇನೂ ಧರಿಸುವುದಿಲ್ಲ. ಹೆಂಗಸರು ಮಾತ್ರ ಸೀರೆಯನ್ನು ಅದರ ಮಾಮೂಲಿ ಶೈಲಿಯಲ್ಲಿ ಉಡದೆ ಒಂದು ಸುತ್ತು ತಂದು ಭುಜದ ಹತ್ತಿರ ಗಂಟು ಹಾಕ್ಕೊಂಡಿರುತ್ತಾರೆ. ರವಿಕೆ ಇರೋದಿಲ್ಲ ಆದರೆ ಲಂಗೋಟಿ ಇರುತ್ತೆ. ಕೂದಲನ್ನು ಕೊಂಡೆ ಸುತ್ತಿ ಪಕ್ಕಕ್ಕೆ ವಾಲಿಬಿಟ್ಟಿರುತ್ತಾರೆ. ಮೂವತ್ತು ವರ್ಷಗಳ ಹಿಂದೆ ಸಿನಿಮಾ ಮೂಲಕ ಈ ಹೇರ್ ಸ್ಟೈಲ್ ಎಲ್ಲೆಡೆ ಹಬ್ಬಿತ್ತು. ಒರಿಸ್ಸಾ, ಮಹಾರಾಷ್ಟ್ರ, ಆಂಧ್ರ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳಲ್ಲಿ ಹರಡಿರುವ ಇವರಿಗೆ ಯಾವುದೇ ಗಡಿಗಳಿಲ್ಲ.ಹಸಿವು ನೀಗಿಕೊಳ್ಳಲು ಎಲ್ಲೆಂದರಲ್ಲಿಗೆ ಸ್ಥಳ ಬದಲಾಯಿಸುತ್ತಾರೆ, ಏನೂ ಸಿಕ್ಕದಾದಾಗ ತಮ್ಮದೇ ಹಸುಗಳನ್ನು ಕೊಂದು ತಿನ್ನುತ್ತಾರೆ. ಹೀಗಿದ್ದರೂ ಹಸಿವಿನಿಂದ ಸಾಯುವವರೇನೂ ಕಮ್ಮಿಯಿಲ್ಲ.
ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು ಎನ್ನುವ ಧ್ಯೇಯವುಳ್ಳ ಕ್ರೈಸ್ತ ಸಂಸ್ಥೆಗಳು ಇವರಿಗೆ ಬದುಕುವ ರೀತಿಯನ್ನು ಕಲಿಸುತ್ತಿವೆ, ಆರೋಗ್ಯ ನೀಡುತ್ತಿವೆ, ಅಕ್ಷರ ಕಲಿಸುತ್ತಿವೆ, ಹೆಣ್ಣುಮಕ್ಕಳು ಕಿರಿಯವಯಸ್ಸಿನಲ್ಲಿ ತಾಯಿಯರಾಗದಂತೆ ನೋಡುತ್ತಿವೆ. ಎಲ್ಲಕ್ಕೂ ಮೊದಲು ಬಟ್ಟೆ ತೊಡುವುದನ್ನು ಹೇಳಿಕೊಟ್ಟಿವೆ. ಆದರೆ ಉದ್ಯೋಗ ನಿಮಿತ್ತ ಇಲ್ಲಿ ನೆಲೆನಿಂತ ಒರಿಸ್ಸಾದ ಪೂರ್ವಭಾಗದ ನಾಗರಿಕ ಜನ ಈ ಆದಿವಾಸಿಗಳನ್ನು ನಿಕೃಷ್ಟವಾಗಿ ಕಾಣುತ್ತಾರೆ. ಸೌದೆ ಹುಣಿಸೇಹಣ್ಣು ಜೇನು ಪುನುಗು ಇತ್ಯಾದಿಗಳನ್ನು ಕೊಟ್ಟು ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುವ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಒಂಥರಾ ಇರುಸುಮುರುಸಾಗುತ್ತದೆ. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿಗಳ ಕಗ್ಗೊಲೆಯಾಯಿತು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು, ಆದರೆ ನೋಡಿ ಎಲ್ಲೂ ಈ ಕ್ರೈಸ್ತರು ತಮ್ಮ ಬಿಲ್ಲುಬಾಣ ಭರ್ಜಿಗಳನ್ನು ಕೈಗೆ ತೆಗೆದುಕೊಳ್ಳಲಿಲ್ಲ.
ಸಂತಾಲಿ ಎಂಬ ಸಂಪರ್ಕ ಭಾಷೆಯೊಂದನ್ನು ಹೊರತುಪಡಿಸಿದರೆ ಅವರ ಭಾಷೆಗಳೂ ವೇಷಭೂಷಣಗಳೂ ವೈವಿಧ್ಯಮಯ. ಹೆಚ್ಚಿನವರು ಲಂಗೋಟಿ ಬಿಟ್ಟರೆ ಬೇರೇನೂ ಧರಿಸುವುದಿಲ್ಲ. ಹೆಂಗಸರು ಮಾತ್ರ ಸೀರೆಯನ್ನು ಅದರ ಮಾಮೂಲಿ ಶೈಲಿಯಲ್ಲಿ ಉಡದೆ ಒಂದು ಸುತ್ತು ತಂದು ಭುಜದ ಹತ್ತಿರ ಗಂಟು ಹಾಕ್ಕೊಂಡಿರುತ್ತಾರೆ. ರವಿಕೆ ಇರೋದಿಲ್ಲ ಆದರೆ ಲಂಗೋಟಿ ಇರುತ್ತೆ. ಕೂದಲನ್ನು ಕೊಂಡೆ ಸುತ್ತಿ ಪಕ್ಕಕ್ಕೆ ವಾಲಿಬಿಟ್ಟಿರುತ್ತಾರೆ. ಮೂವತ್ತು ವರ್ಷಗಳ ಹಿಂದೆ ಸಿನಿಮಾ ಮೂಲಕ ಈ ಹೇರ್ ಸ್ಟೈಲ್ ಎಲ್ಲೆಡೆ ಹಬ್ಬಿತ್ತು. ಒರಿಸ್ಸಾ, ಮಹಾರಾಷ್ಟ್ರ, ಆಂಧ್ರ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳಲ್ಲಿ ಹರಡಿರುವ ಇವರಿಗೆ ಯಾವುದೇ ಗಡಿಗಳಿಲ್ಲ.ಹಸಿವು ನೀಗಿಕೊಳ್ಳಲು ಎಲ್ಲೆಂದರಲ್ಲಿಗೆ ಸ್ಥಳ ಬದಲಾಯಿಸುತ್ತಾರೆ, ಏನೂ ಸಿಕ್ಕದಾದಾಗ ತಮ್ಮದೇ ಹಸುಗಳನ್ನು ಕೊಂದು ತಿನ್ನುತ್ತಾರೆ. ಹೀಗಿದ್ದರೂ ಹಸಿವಿನಿಂದ ಸಾಯುವವರೇನೂ ಕಮ್ಮಿಯಿಲ್ಲ.
ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು ಎನ್ನುವ ಧ್ಯೇಯವುಳ್ಳ ಕ್ರೈಸ್ತ ಸಂಸ್ಥೆಗಳು ಇವರಿಗೆ ಬದುಕುವ ರೀತಿಯನ್ನು ಕಲಿಸುತ್ತಿವೆ, ಆರೋಗ್ಯ ನೀಡುತ್ತಿವೆ, ಅಕ್ಷರ ಕಲಿಸುತ್ತಿವೆ, ಹೆಣ್ಣುಮಕ್ಕಳು ಕಿರಿಯವಯಸ್ಸಿನಲ್ಲಿ ತಾಯಿಯರಾಗದಂತೆ ನೋಡುತ್ತಿವೆ. ಎಲ್ಲಕ್ಕೂ ಮೊದಲು ಬಟ್ಟೆ ತೊಡುವುದನ್ನು ಹೇಳಿಕೊಟ್ಟಿವೆ. ಆದರೆ ಉದ್ಯೋಗ ನಿಮಿತ್ತ ಇಲ್ಲಿ ನೆಲೆನಿಂತ ಒರಿಸ್ಸಾದ ಪೂರ್ವಭಾಗದ ನಾಗರಿಕ ಜನ ಈ ಆದಿವಾಸಿಗಳನ್ನು ನಿಕೃಷ್ಟವಾಗಿ ಕಾಣುತ್ತಾರೆ. ಸೌದೆ ಹುಣಿಸೇಹಣ್ಣು ಜೇನು ಪುನುಗು ಇತ್ಯಾದಿಗಳನ್ನು ಕೊಟ್ಟು ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುವ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಒಂಥರಾ ಇರುಸುಮುರುಸಾಗುತ್ತದೆ. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿಗಳ ಕಗ್ಗೊಲೆಯಾಯಿತು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು, ಆದರೆ ನೋಡಿ ಎಲ್ಲೂ ಈ ಕ್ರೈಸ್ತರು ತಮ್ಮ ಬಿಲ್ಲುಬಾಣ ಭರ್ಜಿಗಳನ್ನು ಕೈಗೆ ತೆಗೆದುಕೊಳ್ಳಲಿಲ್ಲ.
ಮೈಲಾರಲಿಂಗ
ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನು ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ ಮೇರುಸ್ಥಾನವನ್ನೇ ನೀಡಿದ್ದೇವೆ. ಪ್ರಕೃತಿಯ ಆರಾಧಕನಾದ ಮಾನವ ಪ್ರಕೃತಿಯಲ್ಲಿ ಸೌಂದರ್ಯವನ್ನು ಅಂದರೆ ಶಿವನನ್ನು ಕಂಡಿದ್ದಾನೆ. ಕಲ್ಲಬಂಡೆಗಳ ಲಿಂಗರೂಪವೆಲ್ಲ ಶಿವನೇ. ಲಿಂಗರೂಪದ ಬೆಟ್ಟಗಳೆಲ್ಲ ಶಿವನ ತಾಣಗಳು. ಆತ ಮಲೆಯವಾಸಿ. ಕನ್ನಡದ ಮಲೆ+ಅಯ್ಯ> ಮಲೆಯಯ್ಯ> ಮಲ್ಲಯ್ಯನಾಗಿ ವಿಜೃಂಭಿಸಿದ್ದಾನೆ. ಜನಪದರು ಅವನನ್ನು ಮಲೆಮಾದಯ್ಯ, ಪರ್ವತಪ್ಪ, ಗುಡ್ಡಯ್ಯ, ಗಿರಿಯಪ್ಪ, ಗಿರಿಗೌಡ ಇತ್ಯಾದಿಯಾಗಿ ಕರೆದಿದ್ದಾರೆ. ಆದರೆ ಎಲ್ಲೂ ಶಿವನನ್ನು ಮಲ್ಲಾರಿ, ಮೈಲಾರಿ, ಮಲ್ಲಣ್ಣ, ಮಲ್ಲಯ್ಯ ಎಂದು ಕರೆದ ಉದಾಹರಣೆಯಿಲ್ಲ. ಈ ನಿಟ್ಟಿನಲ್ಲಿ ನಾವು ಸ್ವಲ್ಪ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳ ಹಿನ್ನೆಲೆ ಮುನ್ನೆಲೆಗಳನ್ನು ಮನನ ಮಾಡಬೇಕಾಗುತ್ತದೆ.
ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.
ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.
ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.
ಬೀದರಿಗೆ ಹೋಗಿದ್ದಾಗ ಹಲಬರ್ಗಾ ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿಗೊಂಡೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲಾರ ಅನ್ನೋ ಊರು ಇರಾಂಗಿಲ್ರೀ, ಅಲ್ಲಿಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.
ಸಣ್ಣಗೆ ಹರಿದಿದ್ದ ಹೊಳೆಯ ಮೇಲಿನ ಕಿರುಸೇತುವೆ ದಾಟಿ, ಒಂದು ತಿರುವು ತಿರುಗುತ್ತಿದ್ದಂತೆ ಧುತ್ತೆಂದು ಗೋಚರವಾಯಿತು ಆ ಗುಡಿ. ಗುಡಿಯ ಮುಂದಿನ ಕೊಳದಲ್ಲಿ ಹೆಂಗಸರು ಗಂಡಸರೆನ್ನದೆ ಎಲ್ಲರೂ ಮೈ ತೊಳೆದುಕೊಳ್ಳುತ್ತಿದ್ದರು. ಗುಡಿಯ ಪ್ರಾಂಗಣದ ಒಳಹೊಕ್ಕಂತೆ ಅಲ್ಲೊಂದು ದೊಡ್ಡ ಜನಜಂಗುಳಿ ತುಂಬಿತ್ತು. ನೋಡುವುದಕ್ಕೆ ಧರ್ಮಛತ್ರದಂತೆ ತೋರುತ್ತಿತ್ತು. ತೋರುವುದೇನು ಅದು ಧರ್ಮಶಾಲೇನೇ. ಅಲ್ಲಲ್ಲೇ ಉರುಳಿಕೊಂಡಿದ್ದೋರು, ಸೀರೆ ಪಂಚೆ ಒಣಗಿಹಾಕ್ತಿದ್ದೋರು, ಬೇಳೆ ರುಬ್ಬಿ ಒಬ್ಬಟ್ಟು ಸುಡುತಿದ್ದೋರು, ತಲೆ ಬಾಚುತಿದ್ದೋರು, ಬಳೆ ತೊಡಿಸುತಿದ್ದೋರು, ಇವರೆಲ್ಲರ ಗೌಜು ಗದ್ದಲ, ಅರಿಸಿನದ ನೀರಿನ ಓಕುಳಿ, ಬಿಸಿಲ ಮೇಲಾಟ, ಒಲೆಗಳ ಹಸಿಸೌದೆಯ ಹೊಗೆಯ ಮೇಲಾಟ, ಇವೆಲ್ಲವನ್ನೂ ದಾಟಿ ಮುಂದಿನ ಪ್ರಾಂಗಣಕ್ಕೆ ಹೋದಾಗ ಅಲ್ಲೊಂದು ಬೇರೆಯೇ ಲೋಕ ತೆರೆದುಕೊಂಡಿತ್ತು.
ದೊಡ್ಡ ಅಂಗಳದಲ್ಲಿ ಗಾರೆ ಗಚ್ಚಿನ ಗುಡಿಯೊಂದು ಮೈದಳೆದಿತ್ತು. ಸುಮಾರು ೧೫ ಅಡಿ ಅಗಲ ೩೦ ಅಡಿ ಉದ್ದದ ಕಟ್ಟಡವದು. ಮುಂದಿನ ಅಂಕಣದಲ್ಲಿ ಮಗುವಿಗೆ ಚೌಲ ತೆಗೆಯುವ ಕಾರ್ಯ ನಡೆದಿತ್ತು. ಅವರನ್ನು ದಾಟಿಕೊಂಡು ಗುಡಿಯ ಒಳಹೊಕ್ಕರೆ ಅಲ್ಲಿ ಯಾವುದೆ ನಿರ್ಬಂಧವಿಲ್ಲದೆ ದೇವರ ಮೂರ್ತಿಯ ಮುಂದೆಯೇ ಹಲವರು ನಿಂತಿದ್ದರು. ಅದೊಂದು ಎರಡಡಿ ಎತ್ತರದ ನಿಂತ ನಿಲುವಿನ ಬಣ್ಣ ಹಚ್ಚಿದ ಮಣ್ಣಿನ ಮೂರ್ತಿ. ಅದರ ಎರಡೂ ಬದಿಯಲ್ಲಿ ಹೆಣ್ಣು ಮೂರ್ತಿಗಳು. ಅವುಗಳ ಆಚೆ ಈಚೆ ಕುಳಿತ ಪೂಜಾರಿಗಳೆನಿಸಿಕೊಂಡ ವ್ಯಕ್ತಿಗಳು ಭಕ್ತರು ನೀಡುತ್ತಿದ್ದ ಅಂಗವಸ್ತ್ರವನ್ನು ದೇವರ ಹೆಗಲ ಮೇಲೆ ಹಾಕುತ್ತಿದ್ದರು. ಭಕ್ತರಿಗೆ ಕುಂಕುಮ ನೀಡುತ್ತಿದ್ದರು. ಭಕ್ತರಲ್ಲಿ ಹೆಚ್ಚಿನವರು ಹೆಂಗಸರೇ. ಭಕ್ತಜನರು ಕಡಿಮೆಯಾದ ಮೇಲೆ ನಾನು ಆ ಪೂಜಾರಿಗಳನ್ನು ಕೇಳಿದೆ, ಇದಾವ ದೇವರು ಶಿವನೇ? ಅನ್ತ. ಅಲ್ಲವೆಂದರು. ಮಲ್ಲಣ್ಣಾ ದೇವರು ಅಂದರು. ಪಕ್ಕದಲ್ಲಿರುವವರು ಅವನ ಹೆಂಡತಿಯರೇ ಎಂದೆ. ಅವನು ಶಿವ ಹಾಗೂ ಅವನ ಬದಿಯಲ್ಲಿರುವವರು ಗಿರಿಜೆ ಮತ್ತು ಗಂಗೆ ಎಂಬ ವಾದ ನನ್ನ ಮನದಲ್ಲಿತ್ತು. ಆದರೆ ಅವರು ನೀಡಿದ ಉತ್ತರ ನನ್ನನ್ನು ತಬ್ಬಿಬ್ಬಾಗಿಸಿತು. ಅವರು ಅವನ ತಂಗಿಯರೆಂದರು. ಬಂದವರೆಲ್ಲರೂ ಆ ತಂಗಿಯರಿಗೆ ನಮಿಸದೆ ಕೇವಲ ಮುಖ್ಯಮೂರ್ತಿಗಷ್ಟೇ ನಮಿಸುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಹಣತೆಗೆ ತಾವು ತಂದಿದ್ದ ಗಟ್ಟಿ ತುಪ್ಪವನ್ನು ಬಳಿಯುತ್ತಿದ್ದರು. ನಿಧಾನಕ್ಕೆ ತುಪ್ಪ ಕರಗಿ ಕೆಳಗಡೆಯೇ ಇದ್ದ ಡಬ್ಬದಲ್ಲಿ ಶೇಖರವಾಗುತ್ತಿತ್ತು.. ಆದರೆ ನನ್ನ ಮನದ ಸಂಶಯ ಕರಗದೆ ಇನ್ನೂ ಗಟ್ಟಿಯಾಗುತ್ತಿತ್ತು.
ಬ್ರಾಹ್ಮಣರಲ್ಲದ ಆ ಪೂಜಾರಿಗಳು ಬಹು ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಲಾರ ಹಿಂದೆ ಕುರುಬರ ತಾಣವಾಗಿತ್ತು. ಆ ಊರಿನ ಹೆಣ್ಣುಮಗಳೊಬ್ಬಳು ಹೊಲೆಯನೊಬ್ಬನನ್ನು ಪ್ರೇಮಿಸಿದ್ದಳು. ಅವನದೂ ಅಷ್ಟೆ ಉತ್ಕಟ ಪ್ರೇಮ. ಊರವರಿಗೆ ಆತ ಆ ಹೆಣ್ಣುಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ವಿನಂತಿಸಿದ. ಆದರೆ ಅವರು ಒಪ್ಪಲಿಲ್ಲ. ಅವರ ವಿರೋಧವನ್ನು ಲೆಕ್ಕಿಸದೆ ಆತ ಈ ಹೆಣ್ಣುಮಗಳನ್ನು ಹೊತ್ತೊಯ್ಯುವುದಾಗಿ ಹಟ ತೊಟ್ಟ. ಅಂತೆಯೇ ಆ ಪ್ರೇಮಿಗಳಿಬ್ಬರೂ ಒಂದು ದಿನ ಓಡಿಯೂ ಹೋದರು. ಎಲ್ಲಿಂದಲೋ ಕುದುರೆಯ ಮೇಲೆ ಧಾವಿಸಿ ಬಂದ ಆ ಹೆಣ್ಣಿನ ಅಣ್ಣ ಆ ಹೊಲೆಯ ಹುಡುಗನಿಗೆ ಯಮನಾದ. ಸಿಕ್ಕಲ್ಲೇ ಅವನನ್ನು ತುಂಡರಿಸಿ ತಂಗಿಯನ್ನು ಊರಿಗೆ ಮರಳಿ ತಂದ. ಇತ್ತ ಹುಡುಗನ ಕಡೆಯವರು ಬಂದರು. ಊರನ್ನು ಸೂರೆಗೈದರು. ಹುಡುಗನ ತಾಯಿಯ ಗೋಳಂತೂ ಹೇಳತೀರದು. ಭಾವಾವೇಶದಿಂದ ಆಕೆ ಶಪಿಸಿದಳು "ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನಕ್ ಗೂಗಿ ಇರಂಗಿಲ್ಲ, ಊರೆಲ್ಲ ನಾಶವಾಗ್ಲಿ" ಅನ್ತ. ಈಗ ಅಲ್ಲಿ ಊರಿಗೆ ಊರೂ ಇಲ್ಲ, ಒಂದು ಕಾಗೆ ಗೂಗೆನೂ ಇಲ್ಲ.
ಪೂಜಾರಿಗಳು ಒಂದು ಹಿತ್ತಾಳೆಯ ಗೊಂಬೆಯೊಂದನ್ನು ಕೈಲಿ ಹಿಡಿದು ತೋರಿದರು. ಕುಂಕುಮ ಬಳಿದಿದ್ದರೂ ಮಂದ ಬೆಳಕಿನಲ್ಲಿ ಮಿನುಗುತ್ತಿದ್ದ ಅದನ್ನು ಹಾಗೇ ಹತ್ತಿರ ಹಿಡಿದು ನೋಡಿದೆ. ಕುದುರೆಯ ಮೇಲೆ ಕುಳಿತವನೊಬ್ಬ ಖಡ್ಗ ಹಿಡಿದು ನೆಲದ ಮೇಲೆ ನಿಂತವನ ಮೇಲೆ ಪ್ರಯೋಗಿಸುತ್ತಿದ್ದಾನೆ. ಅವನ ಬದಿಯಲ್ಲಿ ಹೆಣ್ಣೊಬ್ಬಳಿದ್ದಾಳೆ.
ಮೌನವಾಗಿ ಹೊರಬಂದೆ. ಗುಡಿಯ ಗೋಡೆಯ ಮೇಲೆ ಅದೇ ದೃಶ್ಯದ ಬಣ್ಣದ ಚಿತ್ತಾರ ಮೂಡಿಸಿದ್ದರು. ಗುಡಿಗೊಂದು ಸುತ್ತು ಬಂದೆ. ಒಂದು ಗೋಡೆಯ ಮೇಲೆ ಕನಕದಾಸರ ಚಿತ್ರವಿತ್ತು. ಇನ್ನೊಂದರ ಮೇಲೆ ಕಾಳಿದಾಸನ ಚಿತ್ರ. ಯಾವುದೋ ಧ್ವನಿವರ್ಧಕದಿಂದ ಮಲ್ಲಣ್ಣ ಬೇರೆಯಲ್ಲ ಮಾರ್ಕಂಡೇಯ ಬೇರೆಯಲ್ಲ ಅನ್ತ ಒಂದು ಹಾಡು ತೇಲಿ ಬರುತ್ತಿತ್ತು.
ನನ್ನ ಸ್ನೇಹಿತರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಇಲ್ಲಿ ಧಾಖಲಿಸುತ್ತೇನೆ. ”ಬಳ್ಳಾರಿ ಜಿಲ್ಲಾ ಸನೇಕಿನ ಆಂಧ್ರಪ್ರದೇಶದ ಗಡಿಯೊಳಗಿನ ಒಂದ ಹಳ್ಯಾನ ಮಂದಿ ಮಗ್ಗಲಕಿನ ಹಳ್ಯಾನ ಮಂದಿ ಜೋಡಿ ಬಡಗಿ ತಗೊಂಡ ಬಡದಾಡ್ತಾರ. ಒಂದ ಹಳ್ಯಾನ ದೈವ ಗುಡ್ಡದ ಮಲ್ಲಯ್ಯ ಅದ . . ಮೈಲಾರಲಿಂಗ. ಇನ್ನೊಂದ ಹಳ್ಯಾನ ಮಂದಿ ಅದನ್ನು ತಮ್ಮ ಹಳ್ಳಿಗೆ ತಗೊಂಡ ಹೋಗಾಕ ಬರ್ತಾರ. ದೈವ ಇರೂ ಹಳ್ಯಾನ ಮಂದಿ ಜಗಳಕ್ಕ ನಿಲ್ತಾರ. ದರ ವರ್ಸಾ ದಸರಾಕ್ಕ ಇದೂ ನಡಿಯೂದ. ತಲಿ ಒಡಕೋತಾರ. ಪಟ್ಟಿ ಕಟಗೊಂಡ ಮತ್ತ ಬರ್ತಾರ ಬೆಳತನ್ಕ ಜಗಳಕ್ಕ ನಿಲ್ತಾರ, ದೇವರ ಹೊಳ್ಳಿ ಬಂದ ಕೂಡ್ಲೆ ಬಡದಾಟ ಮುಗೀತದ. ಎರಡೂ ಹಳ್ಳಿ ಮಂದಿ ಸೇರಿ ಹಬ್ಬಾ ಮಾಡ್ತಾರ.”
ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.
ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.
ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.
ಬೀದರಿಗೆ ಹೋಗಿದ್ದಾಗ ಹಲಬರ್ಗಾ ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿಗೊಂಡೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲಾರ ಅನ್ನೋ ಊರು ಇರಾಂಗಿಲ್ರೀ, ಅಲ್ಲಿಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.
ಸಣ್ಣಗೆ ಹರಿದಿದ್ದ ಹೊಳೆಯ ಮೇಲಿನ ಕಿರುಸೇತುವೆ ದಾಟಿ, ಒಂದು ತಿರುವು ತಿರುಗುತ್ತಿದ್ದಂತೆ ಧುತ್ತೆಂದು ಗೋಚರವಾಯಿತು ಆ ಗುಡಿ. ಗುಡಿಯ ಮುಂದಿನ ಕೊಳದಲ್ಲಿ ಹೆಂಗಸರು ಗಂಡಸರೆನ್ನದೆ ಎಲ್ಲರೂ ಮೈ ತೊಳೆದುಕೊಳ್ಳುತ್ತಿದ್ದರು. ಗುಡಿಯ ಪ್ರಾಂಗಣದ ಒಳಹೊಕ್ಕಂತೆ ಅಲ್ಲೊಂದು ದೊಡ್ಡ ಜನಜಂಗುಳಿ ತುಂಬಿತ್ತು. ನೋಡುವುದಕ್ಕೆ ಧರ್ಮಛತ್ರದಂತೆ ತೋರುತ್ತಿತ್ತು. ತೋರುವುದೇನು ಅದು ಧರ್ಮಶಾಲೇನೇ. ಅಲ್ಲಲ್ಲೇ ಉರುಳಿಕೊಂಡಿದ್ದೋರು, ಸೀರೆ ಪಂಚೆ ಒಣಗಿಹಾಕ್ತಿದ್ದೋರು, ಬೇಳೆ ರುಬ್ಬಿ ಒಬ್ಬಟ್ಟು ಸುಡುತಿದ್ದೋರು, ತಲೆ ಬಾಚುತಿದ್ದೋರು, ಬಳೆ ತೊಡಿಸುತಿದ್ದೋರು, ಇವರೆಲ್ಲರ ಗೌಜು ಗದ್ದಲ, ಅರಿಸಿನದ ನೀರಿನ ಓಕುಳಿ, ಬಿಸಿಲ ಮೇಲಾಟ, ಒಲೆಗಳ ಹಸಿಸೌದೆಯ ಹೊಗೆಯ ಮೇಲಾಟ, ಇವೆಲ್ಲವನ್ನೂ ದಾಟಿ ಮುಂದಿನ ಪ್ರಾಂಗಣಕ್ಕೆ ಹೋದಾಗ ಅಲ್ಲೊಂದು ಬೇರೆಯೇ ಲೋಕ ತೆರೆದುಕೊಂಡಿತ್ತು.
ದೊಡ್ಡ ಅಂಗಳದಲ್ಲಿ ಗಾರೆ ಗಚ್ಚಿನ ಗುಡಿಯೊಂದು ಮೈದಳೆದಿತ್ತು. ಸುಮಾರು ೧೫ ಅಡಿ ಅಗಲ ೩೦ ಅಡಿ ಉದ್ದದ ಕಟ್ಟಡವದು. ಮುಂದಿನ ಅಂಕಣದಲ್ಲಿ ಮಗುವಿಗೆ ಚೌಲ ತೆಗೆಯುವ ಕಾರ್ಯ ನಡೆದಿತ್ತು. ಅವರನ್ನು ದಾಟಿಕೊಂಡು ಗುಡಿಯ ಒಳಹೊಕ್ಕರೆ ಅಲ್ಲಿ ಯಾವುದೆ ನಿರ್ಬಂಧವಿಲ್ಲದೆ ದೇವರ ಮೂರ್ತಿಯ ಮುಂದೆಯೇ ಹಲವರು ನಿಂತಿದ್ದರು. ಅದೊಂದು ಎರಡಡಿ ಎತ್ತರದ ನಿಂತ ನಿಲುವಿನ ಬಣ್ಣ ಹಚ್ಚಿದ ಮಣ್ಣಿನ ಮೂರ್ತಿ. ಅದರ ಎರಡೂ ಬದಿಯಲ್ಲಿ ಹೆಣ್ಣು ಮೂರ್ತಿಗಳು. ಅವುಗಳ ಆಚೆ ಈಚೆ ಕುಳಿತ ಪೂಜಾರಿಗಳೆನಿಸಿಕೊಂಡ ವ್ಯಕ್ತಿಗಳು ಭಕ್ತರು ನೀಡುತ್ತಿದ್ದ ಅಂಗವಸ್ತ್ರವನ್ನು ದೇವರ ಹೆಗಲ ಮೇಲೆ ಹಾಕುತ್ತಿದ್ದರು. ಭಕ್ತರಿಗೆ ಕುಂಕುಮ ನೀಡುತ್ತಿದ್ದರು. ಭಕ್ತರಲ್ಲಿ ಹೆಚ್ಚಿನವರು ಹೆಂಗಸರೇ. ಭಕ್ತಜನರು ಕಡಿಮೆಯಾದ ಮೇಲೆ ನಾನು ಆ ಪೂಜಾರಿಗಳನ್ನು ಕೇಳಿದೆ, ಇದಾವ ದೇವರು ಶಿವನೇ? ಅನ್ತ. ಅಲ್ಲವೆಂದರು. ಮಲ್ಲಣ್ಣಾ ದೇವರು ಅಂದರು. ಪಕ್ಕದಲ್ಲಿರುವವರು ಅವನ ಹೆಂಡತಿಯರೇ ಎಂದೆ. ಅವನು ಶಿವ ಹಾಗೂ ಅವನ ಬದಿಯಲ್ಲಿರುವವರು ಗಿರಿಜೆ ಮತ್ತು ಗಂಗೆ ಎಂಬ ವಾದ ನನ್ನ ಮನದಲ್ಲಿತ್ತು. ಆದರೆ ಅವರು ನೀಡಿದ ಉತ್ತರ ನನ್ನನ್ನು ತಬ್ಬಿಬ್ಬಾಗಿಸಿತು. ಅವರು ಅವನ ತಂಗಿಯರೆಂದರು. ಬಂದವರೆಲ್ಲರೂ ಆ ತಂಗಿಯರಿಗೆ ನಮಿಸದೆ ಕೇವಲ ಮುಖ್ಯಮೂರ್ತಿಗಷ್ಟೇ ನಮಿಸುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಹಣತೆಗೆ ತಾವು ತಂದಿದ್ದ ಗಟ್ಟಿ ತುಪ್ಪವನ್ನು ಬಳಿಯುತ್ತಿದ್ದರು. ನಿಧಾನಕ್ಕೆ ತುಪ್ಪ ಕರಗಿ ಕೆಳಗಡೆಯೇ ಇದ್ದ ಡಬ್ಬದಲ್ಲಿ ಶೇಖರವಾಗುತ್ತಿತ್ತು.. ಆದರೆ ನನ್ನ ಮನದ ಸಂಶಯ ಕರಗದೆ ಇನ್ನೂ ಗಟ್ಟಿಯಾಗುತ್ತಿತ್ತು.
ಬ್ರಾಹ್ಮಣರಲ್ಲದ ಆ ಪೂಜಾರಿಗಳು ಬಹು ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಲಾರ ಹಿಂದೆ ಕುರುಬರ ತಾಣವಾಗಿತ್ತು. ಆ ಊರಿನ ಹೆಣ್ಣುಮಗಳೊಬ್ಬಳು ಹೊಲೆಯನೊಬ್ಬನನ್ನು ಪ್ರೇಮಿಸಿದ್ದಳು. ಅವನದೂ ಅಷ್ಟೆ ಉತ್ಕಟ ಪ್ರೇಮ. ಊರವರಿಗೆ ಆತ ಆ ಹೆಣ್ಣುಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ವಿನಂತಿಸಿದ. ಆದರೆ ಅವರು ಒಪ್ಪಲಿಲ್ಲ. ಅವರ ವಿರೋಧವನ್ನು ಲೆಕ್ಕಿಸದೆ ಆತ ಈ ಹೆಣ್ಣುಮಗಳನ್ನು ಹೊತ್ತೊಯ್ಯುವುದಾಗಿ ಹಟ ತೊಟ್ಟ. ಅಂತೆಯೇ ಆ ಪ್ರೇಮಿಗಳಿಬ್ಬರೂ ಒಂದು ದಿನ ಓಡಿಯೂ ಹೋದರು. ಎಲ್ಲಿಂದಲೋ ಕುದುರೆಯ ಮೇಲೆ ಧಾವಿಸಿ ಬಂದ ಆ ಹೆಣ್ಣಿನ ಅಣ್ಣ ಆ ಹೊಲೆಯ ಹುಡುಗನಿಗೆ ಯಮನಾದ. ಸಿಕ್ಕಲ್ಲೇ ಅವನನ್ನು ತುಂಡರಿಸಿ ತಂಗಿಯನ್ನು ಊರಿಗೆ ಮರಳಿ ತಂದ. ಇತ್ತ ಹುಡುಗನ ಕಡೆಯವರು ಬಂದರು. ಊರನ್ನು ಸೂರೆಗೈದರು. ಹುಡುಗನ ತಾಯಿಯ ಗೋಳಂತೂ ಹೇಳತೀರದು. ಭಾವಾವೇಶದಿಂದ ಆಕೆ ಶಪಿಸಿದಳು "ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನಕ್ ಗೂಗಿ ಇರಂಗಿಲ್ಲ, ಊರೆಲ್ಲ ನಾಶವಾಗ್ಲಿ" ಅನ್ತ. ಈಗ ಅಲ್ಲಿ ಊರಿಗೆ ಊರೂ ಇಲ್ಲ, ಒಂದು ಕಾಗೆ ಗೂಗೆನೂ ಇಲ್ಲ.
ಪೂಜಾರಿಗಳು ಒಂದು ಹಿತ್ತಾಳೆಯ ಗೊಂಬೆಯೊಂದನ್ನು ಕೈಲಿ ಹಿಡಿದು ತೋರಿದರು. ಕುಂಕುಮ ಬಳಿದಿದ್ದರೂ ಮಂದ ಬೆಳಕಿನಲ್ಲಿ ಮಿನುಗುತ್ತಿದ್ದ ಅದನ್ನು ಹಾಗೇ ಹತ್ತಿರ ಹಿಡಿದು ನೋಡಿದೆ. ಕುದುರೆಯ ಮೇಲೆ ಕುಳಿತವನೊಬ್ಬ ಖಡ್ಗ ಹಿಡಿದು ನೆಲದ ಮೇಲೆ ನಿಂತವನ ಮೇಲೆ ಪ್ರಯೋಗಿಸುತ್ತಿದ್ದಾನೆ. ಅವನ ಬದಿಯಲ್ಲಿ ಹೆಣ್ಣೊಬ್ಬಳಿದ್ದಾಳೆ.
ಮೌನವಾಗಿ ಹೊರಬಂದೆ. ಗುಡಿಯ ಗೋಡೆಯ ಮೇಲೆ ಅದೇ ದೃಶ್ಯದ ಬಣ್ಣದ ಚಿತ್ತಾರ ಮೂಡಿಸಿದ್ದರು. ಗುಡಿಗೊಂದು ಸುತ್ತು ಬಂದೆ. ಒಂದು ಗೋಡೆಯ ಮೇಲೆ ಕನಕದಾಸರ ಚಿತ್ರವಿತ್ತು. ಇನ್ನೊಂದರ ಮೇಲೆ ಕಾಳಿದಾಸನ ಚಿತ್ರ. ಯಾವುದೋ ಧ್ವನಿವರ್ಧಕದಿಂದ ಮಲ್ಲಣ್ಣ ಬೇರೆಯಲ್ಲ ಮಾರ್ಕಂಡೇಯ ಬೇರೆಯಲ್ಲ ಅನ್ತ ಒಂದು ಹಾಡು ತೇಲಿ ಬರುತ್ತಿತ್ತು.
ನನ್ನ ಸ್ನೇಹಿತರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಇಲ್ಲಿ ಧಾಖಲಿಸುತ್ತೇನೆ. ”ಬಳ್ಳಾರಿ ಜಿಲ್ಲಾ ಸನೇಕಿನ ಆಂಧ್ರಪ್ರದೇಶದ ಗಡಿಯೊಳಗಿನ ಒಂದ ಹಳ್ಯಾನ ಮಂದಿ ಮಗ್ಗಲಕಿನ ಹಳ್ಯಾನ ಮಂದಿ ಜೋಡಿ ಬಡಗಿ ತಗೊಂಡ ಬಡದಾಡ್ತಾರ. ಒಂದ ಹಳ್ಯಾನ ದೈವ ಗುಡ್ಡದ ಮಲ್ಲಯ್ಯ ಅದ . . ಮೈಲಾರಲಿಂಗ. ಇನ್ನೊಂದ ಹಳ್ಯಾನ ಮಂದಿ ಅದನ್ನು ತಮ್ಮ ಹಳ್ಳಿಗೆ ತಗೊಂಡ ಹೋಗಾಕ ಬರ್ತಾರ. ದೈವ ಇರೂ ಹಳ್ಯಾನ ಮಂದಿ ಜಗಳಕ್ಕ ನಿಲ್ತಾರ. ದರ ವರ್ಸಾ ದಸರಾಕ್ಕ ಇದೂ ನಡಿಯೂದ. ತಲಿ ಒಡಕೋತಾರ. ಪಟ್ಟಿ ಕಟಗೊಂಡ ಮತ್ತ ಬರ್ತಾರ ಬೆಳತನ್ಕ ಜಗಳಕ್ಕ ನಿಲ್ತಾರ, ದೇವರ ಹೊಳ್ಳಿ ಬಂದ ಕೂಡ್ಲೆ ಬಡದಾಟ ಮುಗೀತದ. ಎರಡೂ ಹಳ್ಳಿ ಮಂದಿ ಸೇರಿ ಹಬ್ಬಾ ಮಾಡ್ತಾರ.”
ಅಂಗುಲಹುಳು
ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.
ಪಶ್ಚಿಮದ ದೇಶದಲ್ಲಿ ’ಅಂಗುಲದಹುಳು" ಎಂಬ ಕೀಟವಿದೆಯಂತೆ. ಉದ್ದನೆಯ ಕಾಲುಗಳಲ್ಲಿ ಅದು ನಡೆದಾಡುವಾಗ ಅದರ ಪ್ರತಿಯೊಂದು ಹೆಜ್ಜೆಯ ಅಂತರ ಒಂದು ಅಂಗುಲ ಇರುತ್ತದೆಯಂತೆ. ಕರಾರುವಾಕ್ಕಾದ ಆ ಅಳತೆಯನ್ನೇ ಮುಂದೆ ಅಳತೆ ಪಟ್ಟಿ ಮಾಡುವಾಗ ಮಾನಕವಾಗಿ ತೆಗೆದುಕೊಂಡರಂತೆ. ಅಲ್ಲದೆ ತಾವು ಹೋದಲ್ಲೆಲ್ಲ ತಮ್ಮ ಅಳತೆಯೇ ಶ್ರೇಷ್ಠ ಹಾಗೂ ಸರ್ವಮಾನ್ಯ ಎಂದು ವಾದಿಸತೊಡಗಿದರಂತೆ.
ಆಫ್ರಿಕಾದ ಆನೆಗಳು ಆ ಹುಳುವನ್ನು ರಾಜಮರ್ಯಾದೆಯೊಂದಿಗೆ ಕರೆಸಿಕೊಂಡು ತಮ್ಮ ದಂತಗಳ ಉದ್ದವನ್ನು ಅಳತೆ ಮಾಡಿಸಿಕೊಂಡವು. ಅಮೆರಿಕದ ಮೊಸಳೆಗಳು ಬಾಯ್ದೆರೆದು ತಮ್ಮ ಹಲ್ಲುಗಳ ಮೊನಚನ್ನು ಜಗತ್ತಿಗೆ ಸಾರಿಕೊಂಡವು. ಯೂರೋಪಿನ ಹುಂಜಗಳು ತಮ್ಮ ರೆಕ್ಕೆಗರಿಯ ಥಳುಕನ್ನು ಲೆಕ್ಕ ಮಾಡಿಸಿಕೊಂಡು ಹೆಮ್ಮೆಯಿಂದ ಬೀಗಿದವು. ನಮ್ಮ ದೇಶಕ್ಕೂ ಆ ಹುಳ ಬಂದು ಹಿಮಾಲಯವನ್ನು ಹತ್ತಿಳಿದು ಉನ್ನತ ಶಿಖರದ ಎತ್ತರ ಇಂತಿಷ್ಟೇ ಎಂದು ತಿಳಿಹೇಳಿತು.
ಕೆಲವರು ತಮ್ಮ ಬಾಯಗಲವನ್ನು ಕೆಲವರು ತಮ್ಮ ನೋಟಶಕ್ತಿಯನ್ನು ಅಳತೆ ಮಾಡಿಸಿಕೊಂಡರು. ಕನ್ನಡದಲ್ಲೇನಿದೆ ಅನ್ತ ಯಾರೋ ಕೇಳ್ತಿದ್ರಲ್ಲ, ಆ ಹುಳು ಇತ್ತ ತಿರುಗಿತು. ಅಷ್ಟರಲ್ಲಾಗಲೇ ಮಲ್ಲಿಗೆಯ ಸುವಾಸನೆಗೆ ಅದರ ತಲೆ ತಿರುಗತೊಡಗಿತ್ತು. ಮಾವಿನ ಮರದಲ್ಲಿ ಕೋಗಿಲೆಯ ಇಂಚರ "ಕುಹೂ" ಎಂದಿತು. “ಕೋಗಿಲೆಯ ಸ್ವರವನ್ನೇ ಮೊದಲು ಅಳೆಯೋಣ, ಆ ನಂತರ ಮಿಕ್ಕಿದ್ದು" ಎಂದ ಆ ಹುಳು ಅದನ್ನು ಅಳೆಯತೊಡಗಿತು. ರಾಗಗಾನಮಾಧುರ್ಯದ ಆ ಪಂಚಮಸ್ವರವಲ್ಲರಿಯನ್ನು ಆ ಹುಳು ಇನ್ನೂ ಅಳೆಯುತ್ತಲೇ ಇದೆ, ಆದರೆ ಆ ಸುಮಧುರ ಕಂಠದ ಉದ್ದಗಲಗಳ ನಿಲುವನ್ನು ಅದು ಮುಟ್ಟಲಾಗಿಲ್ಲ.. ಇನ್ನು ಕನ್ನಡ ವಾಗ್ದೇವಿಯ ಭಂಡಾರದ ಸಿರಿ, ಪ್ರಾಕೃತಿಕ ಸಂಪತ್ತು, ಜನಮಾನಸದ ಔನ್ನತ್ಯ ಇವೆಲ್ಲ ಇನ್ನೂ ನಿಲುಕಲಾರದವು ಅಲ್ಲವೇ?
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.
ಪಶ್ಚಿಮದ ದೇಶದಲ್ಲಿ ’ಅಂಗುಲದಹುಳು" ಎಂಬ ಕೀಟವಿದೆಯಂತೆ. ಉದ್ದನೆಯ ಕಾಲುಗಳಲ್ಲಿ ಅದು ನಡೆದಾಡುವಾಗ ಅದರ ಪ್ರತಿಯೊಂದು ಹೆಜ್ಜೆಯ ಅಂತರ ಒಂದು ಅಂಗುಲ ಇರುತ್ತದೆಯಂತೆ. ಕರಾರುವಾಕ್ಕಾದ ಆ ಅಳತೆಯನ್ನೇ ಮುಂದೆ ಅಳತೆ ಪಟ್ಟಿ ಮಾಡುವಾಗ ಮಾನಕವಾಗಿ ತೆಗೆದುಕೊಂಡರಂತೆ. ಅಲ್ಲದೆ ತಾವು ಹೋದಲ್ಲೆಲ್ಲ ತಮ್ಮ ಅಳತೆಯೇ ಶ್ರೇಷ್ಠ ಹಾಗೂ ಸರ್ವಮಾನ್ಯ ಎಂದು ವಾದಿಸತೊಡಗಿದರಂತೆ.
ಆಫ್ರಿಕಾದ ಆನೆಗಳು ಆ ಹುಳುವನ್ನು ರಾಜಮರ್ಯಾದೆಯೊಂದಿಗೆ ಕರೆಸಿಕೊಂಡು ತಮ್ಮ ದಂತಗಳ ಉದ್ದವನ್ನು ಅಳತೆ ಮಾಡಿಸಿಕೊಂಡವು. ಅಮೆರಿಕದ ಮೊಸಳೆಗಳು ಬಾಯ್ದೆರೆದು ತಮ್ಮ ಹಲ್ಲುಗಳ ಮೊನಚನ್ನು ಜಗತ್ತಿಗೆ ಸಾರಿಕೊಂಡವು. ಯೂರೋಪಿನ ಹುಂಜಗಳು ತಮ್ಮ ರೆಕ್ಕೆಗರಿಯ ಥಳುಕನ್ನು ಲೆಕ್ಕ ಮಾಡಿಸಿಕೊಂಡು ಹೆಮ್ಮೆಯಿಂದ ಬೀಗಿದವು. ನಮ್ಮ ದೇಶಕ್ಕೂ ಆ ಹುಳ ಬಂದು ಹಿಮಾಲಯವನ್ನು ಹತ್ತಿಳಿದು ಉನ್ನತ ಶಿಖರದ ಎತ್ತರ ಇಂತಿಷ್ಟೇ ಎಂದು ತಿಳಿಹೇಳಿತು.
ಕೆಲವರು ತಮ್ಮ ಬಾಯಗಲವನ್ನು ಕೆಲವರು ತಮ್ಮ ನೋಟಶಕ್ತಿಯನ್ನು ಅಳತೆ ಮಾಡಿಸಿಕೊಂಡರು. ಕನ್ನಡದಲ್ಲೇನಿದೆ ಅನ್ತ ಯಾರೋ ಕೇಳ್ತಿದ್ರಲ್ಲ, ಆ ಹುಳು ಇತ್ತ ತಿರುಗಿತು. ಅಷ್ಟರಲ್ಲಾಗಲೇ ಮಲ್ಲಿಗೆಯ ಸುವಾಸನೆಗೆ ಅದರ ತಲೆ ತಿರುಗತೊಡಗಿತ್ತು. ಮಾವಿನ ಮರದಲ್ಲಿ ಕೋಗಿಲೆಯ ಇಂಚರ "ಕುಹೂ" ಎಂದಿತು. “ಕೋಗಿಲೆಯ ಸ್ವರವನ್ನೇ ಮೊದಲು ಅಳೆಯೋಣ, ಆ ನಂತರ ಮಿಕ್ಕಿದ್ದು" ಎಂದ ಆ ಹುಳು ಅದನ್ನು ಅಳೆಯತೊಡಗಿತು. ರಾಗಗಾನಮಾಧುರ್ಯದ ಆ ಪಂಚಮಸ್ವರವಲ್ಲರಿಯನ್ನು ಆ ಹುಳು ಇನ್ನೂ ಅಳೆಯುತ್ತಲೇ ಇದೆ, ಆದರೆ ಆ ಸುಮಧುರ ಕಂಠದ ಉದ್ದಗಲಗಳ ನಿಲುವನ್ನು ಅದು ಮುಟ್ಟಲಾಗಿಲ್ಲ.. ಇನ್ನು ಕನ್ನಡ ವಾಗ್ದೇವಿಯ ಭಂಡಾರದ ಸಿರಿ, ಪ್ರಾಕೃತಿಕ ಸಂಪತ್ತು, ಜನಮಾನಸದ ಔನ್ನತ್ಯ ಇವೆಲ್ಲ ಇನ್ನೂ ನಿಲುಕಲಾರದವು ಅಲ್ಲವೇ?
ಶನಿವಾರ, ಮೇ 3, 2008
ನನ್ನ ಓದು
ನಮ್ಮಪ್ಪ ನಮ್ಮನೆಗೆ ಚಂದಮಾಮ ತರಿಸ್ತಿದ್ರು. ನಾವ್ ಮಕ್ಕಳು ಓದಲಿ ಅಂತ. ನಮ್ಮ ಚಿಕ್ಕಪ್ಪ ಬಾಲಮಿತ್ರ ತರಿಸೋರು. ಚಂದಮಾಮನೇ ಚೆಂದ ಅಂತ ನಾವ್ಗೋಳು, ಬಾಲಮಿತ್ರ ಚಂದ ಅಂತ ನಮ್ಮ ಚಿಕ್ಕಪ್ಪನ ಮಕ್ಕಳು ಮಾತಾಡ್ಕೋತಿದ್ದು ಈಗ್ಲೂ ನೆಪ್ಪೈತೆ. ಎಂಟಿವಿ ಆಚಾರ್ಯರ ಭೀಮನಿಗೂ ರಮಾನಂದ ಸಾಗರರ ಭೀಮನಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುವುದು ಈ “ಅಜಗಜಾಂತರ”ಕ್ಕೆ ಕೊಡಬಹುದಾದ ಒಂದು ಒಳ್ಳೆಯ ಉದಾಹರಣೆ. ಇನ್ನು ಬೇತಾಳನ ಕಥೆಗಳಂತೂ ಯಾವ ಕ್ವಿಜ್ ಪ್ರೋಗ್ರಾಮನ್ನೂ ಮೀರಿಸುವಂಥದು. ಅದರ ಮುಂದೆ ಡೆರಿಕ್ ಒಬ್ರೇನು ಏನೇನೂ ಅಲ್ಲ.
ಮಲ್ಲೇಶ್ವರದಲ್ಲಿ ನಾನು ಓದುತ್ತಿದ್ದ ನಿರ್ಮಲರಾಣಿ ಶಾಲೆಯಲ್ಲಿ ಅಮರ ಚಿತ್ರಕಥೆಗಳ ದೊಡ್ಡ ಸಂಗ್ರಹವಿತ್ತು. ಆಗ ಅದು ಕೊಎಡ್ ಇಸ್ಕೂಲು. ಆರನೇ ತರಗತಿಯಲ್ಲಿದ್ದಾಗ ಪಕ್ಕದ ಕಪಾಟಿನಲ್ಲಿದ್ದ ಆ ಪುಸ್ತಕಗಳನ್ನು ಸದ್ದಿಲ್ಲದೇ ತೆಗೆದುಕೊಂಡು ಪಠ್ಯಪುಸ್ತಕದ ಕೆಳಗಿಟ್ಟುಕೊಂಡು ಕದ್ದುಮುಚ್ಚಿ ಓದುತ್ತಿದ್ದ ದಿನಗಳವು. ನಳದಮಯಂತಿ, ಶಕುಂತಲಾ ಹೀಗೆ ಒಂದೆರಡಲ್ಲ ನೂರಾಎರಡು. ನಮ್ಮ ಆ ಕಳ್ಳ ಓದು ಟೀಚರಾಗಿದ್ದ ಮದರ್ ಫ್ರಾನ್ಸಿಸ್ಕ ಅವರಿಗೆ ಗೊತ್ತಾಗುತ್ತಲೇ ಇರಲಿಲ್ಲ. ಪಕ್ಕದ್ಮನೆ ಹುಡುಗಿ ರಮಾಳನ್ನು ಕೀಟಲೆ ಮಾಡಿದಾಗಲೆಲ್ಲ ಅವಳು ಈ ಕಳ್ಳ ಓದಿನ ಬಗ್ಗೆ ಮದರ್ಗೆ ಹೇಳುವುದಾಗಿ ಹೆದರಿಸುತ್ತಿದ್ದಳು. ಸುಜಾತ ಅಂತ ಇನ್ನೊಂದು ಹುಡುಗಿ ಇದ್ದಳು. ಸಂಪಿಗೆ ರಸ್ತೆಯಲ್ಲಿ ಅವರ ಜ್ಯೂಸ್ ಅಂಗಡಿ ಇದೆ. ನನ್ನನ್ನು ಹೆದರಿಸೋದರಲ್ಲಿ ಆಕೆ ರುಸ್ತುಂ. ಹುಡುಗರಲ್ಲಿ ರಮೇಶ, ನಾಗರಾಜ, ಭಾಸ್ಕರ, ದಯಾನಂದ ಮುಂತಾದ ಗೆಳೆಯರ ನೆನಪಾಗುವುದೂ ಈ ಅಮರ ಚಿತ್ರಕತೆಗಳ ನೆರಳಿನಲ್ಲೇ. ಅಮರ ಚಿತ್ರಕಥೆ (ಐಬಿಎಚ್ ಪ್ರಕಾಶನ) ಯ ರೂಪದಲ್ಲಿ ಮನೋವಿಕಾಸದ ಹಾದಿಯಲ್ಲಿ ಬೈಬಲ್ಲಿನ ಜೊತೆಗೆ ಪುರಾಣವನ್ನೂ ರಕ್ತಗತ ಮಾಡಿಸಿದ್ದಕ್ಕಾಗಿ ಕಾರಂತರನ್ನು ನಾನು ಮರೆಯಲಾಗದು.
ನಾನು ಹೈಸ್ಕೂಲು (ಕಾಡುಮಲ್ಲೇಶ್ವರನ ಗುಡಿಯ ಬಳಿಯಿದ್ದ ಶಾರದಾ ವಿದ್ಯಾನಿಕೇತನ) ಸೇರುವ ವೇಳೆಗಾಗಲೇ ಕಾರಂತರ ಕಿರಿಯರ ವಿಶ್ವಕೋಶ (ನವಕರ್ನಾಟಕ ಪಬ್ಲಿಕೇಷನ್ಸ್) ಬಂದಿತ್ತು. ಆದರೆ ಅದು ಶಾಲೆಯ ಕಪಾಟಿನಲ್ಲಿ ಬಂಧಿಯಾಗಿತ್ತು. ನಾವು ಕೆಲ ಹುಡುಗರು ಈಸ್ಟ್ ಪಾರ್ಕ್ ಮೈದಾನದಲ್ಲಿ ಆಡ್ಕಂತಾ ಇದ್ದೋರು ಒಂದು ದಿನ ಕಲ್ ಬಿಲ್ಡಿಂಗ್ ಅಂತಾರಲ್ಲ, ಅದೇ ಹದಿನೆಂಟನೇ ಕ್ರಾಸ್ ಬಸ್ಟ್ಯಾಂಡ್ ಹತ್ರ ಇರೋ ಗೋರ್ಮೆಂಟಿಸ್ಕೂಲು, ಅದರಾಗೆ ಒಂದು ಲೇಬ್ರರಿ ಇರೋದ್ನ ಕಂಡಿಡಿದೋ. ಬಾಕ್ಲು ತೆಗೆದೇ ಇತ್ತು. ಅದ ನೋಡ್ಕಳೋರು ಒಬ್ರು ಬುಟ್ರೆ ಬ್ಯಾರೆ ಯಾರೂ ಇತ್ತಿಲ್ಲ. ಒಳೀಕ್ ಬರ್ಬೋದಾ ಅಂತ ಕೇಳಿದ್ದೇಟ್ಗೆ ಅಯ್ ಬನ್ನಿ ಓದ್ಕಳಿ ಅನ್ನೋದಾ. ಆಗ ಶುರುವಾಯ್ತು ನನ್ನ ಅಧ್ಯಯನದ ಪ್ರಸ್ಥಾನ. ಬಂಗಾಳ ದೇಶದ ಜಾನಪದ ಕತೆಗಳು, ಗೋನೂಝಾನ ಕತೆಗಳು, ಭಾರತಭಾರತಿ ಪುಸ್ತಕ ಸಂಪದ, ಅರೇಬಿಯನ್ ನೈಟ್ಸ್, ಮಕ್ಕಳ ಮಂಛೌಸನ್ ಹೀಗೆ ಅವೆಲ್ಲ ಆ ಕಾಲಕ್ಕೇ ಸರಿ.
ನನ್ನ ಯೌವನಕಾಲಕ್ಕೆ ಬಹುವಾಗಿ ಕಾಡಿದ್ದು ಖಂಡೇಕರರ ’ಯಯಾತಿ’ (ಇನಾಂದಾರ್ ಅನುವಾದ). ಆಮ್ಯಾಕೆ ಕೊಂಚ ಬಲಿತ ಮ್ಯಾಗೆ ಓದಿದ್ದು ಭೈರಪ್ನೋರು ಬರೆದಿರೋ ಪರ್ವ ಅಂತ ಮಾಬಾರ್ತದ ಕತೆ, ಓ ಯಾಪಾಟಿ ಐನಾತಿನನ್ಮಗಂದೂ ಅಂತೀರಾ? ತೇಜಸ್ವಿ ಅಂಬೋರು ಬರ್ದಿರೋ ಕಿರಗೂರಿನ ಗಯ್ಯಾಳಿಗಳು ಓದಿವ್ರಾ? ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲು? ಊ.. ದೇಸ ನೋಡ್ಬೇಕು ಕೋಸ ಓದ್ಬೇಕು ಅಂತಾರಲ್ಲ ದಿಟವೇನೇಯ. ಪುಸ್ತಕ ಓದ್ಬೇಕೂ ಅನ್ನೋ ತೆವಲು ನಿಮ್ಗೂ ಇದ್ರೆ ನೀವೂನೂ ಇಂಜಿನ್ ಡಿವಿಜನ್ನಾಗಿರೋ ನಮ್ ಕನ್ನಡ ಲೇಬ್ರೇರಿಗೆ ಬರಬೇಕ್ರ.
ಮಲ್ಲೇಶ್ವರದಲ್ಲಿ ನಾನು ಓದುತ್ತಿದ್ದ ನಿರ್ಮಲರಾಣಿ ಶಾಲೆಯಲ್ಲಿ ಅಮರ ಚಿತ್ರಕಥೆಗಳ ದೊಡ್ಡ ಸಂಗ್ರಹವಿತ್ತು. ಆಗ ಅದು ಕೊಎಡ್ ಇಸ್ಕೂಲು. ಆರನೇ ತರಗತಿಯಲ್ಲಿದ್ದಾಗ ಪಕ್ಕದ ಕಪಾಟಿನಲ್ಲಿದ್ದ ಆ ಪುಸ್ತಕಗಳನ್ನು ಸದ್ದಿಲ್ಲದೇ ತೆಗೆದುಕೊಂಡು ಪಠ್ಯಪುಸ್ತಕದ ಕೆಳಗಿಟ್ಟುಕೊಂಡು ಕದ್ದುಮುಚ್ಚಿ ಓದುತ್ತಿದ್ದ ದಿನಗಳವು. ನಳದಮಯಂತಿ, ಶಕುಂತಲಾ ಹೀಗೆ ಒಂದೆರಡಲ್ಲ ನೂರಾಎರಡು. ನಮ್ಮ ಆ ಕಳ್ಳ ಓದು ಟೀಚರಾಗಿದ್ದ ಮದರ್ ಫ್ರಾನ್ಸಿಸ್ಕ ಅವರಿಗೆ ಗೊತ್ತಾಗುತ್ತಲೇ ಇರಲಿಲ್ಲ. ಪಕ್ಕದ್ಮನೆ ಹುಡುಗಿ ರಮಾಳನ್ನು ಕೀಟಲೆ ಮಾಡಿದಾಗಲೆಲ್ಲ ಅವಳು ಈ ಕಳ್ಳ ಓದಿನ ಬಗ್ಗೆ ಮದರ್ಗೆ ಹೇಳುವುದಾಗಿ ಹೆದರಿಸುತ್ತಿದ್ದಳು. ಸುಜಾತ ಅಂತ ಇನ್ನೊಂದು ಹುಡುಗಿ ಇದ್ದಳು. ಸಂಪಿಗೆ ರಸ್ತೆಯಲ್ಲಿ ಅವರ ಜ್ಯೂಸ್ ಅಂಗಡಿ ಇದೆ. ನನ್ನನ್ನು ಹೆದರಿಸೋದರಲ್ಲಿ ಆಕೆ ರುಸ್ತುಂ. ಹುಡುಗರಲ್ಲಿ ರಮೇಶ, ನಾಗರಾಜ, ಭಾಸ್ಕರ, ದಯಾನಂದ ಮುಂತಾದ ಗೆಳೆಯರ ನೆನಪಾಗುವುದೂ ಈ ಅಮರ ಚಿತ್ರಕತೆಗಳ ನೆರಳಿನಲ್ಲೇ. ಅಮರ ಚಿತ್ರಕಥೆ (ಐಬಿಎಚ್ ಪ್ರಕಾಶನ) ಯ ರೂಪದಲ್ಲಿ ಮನೋವಿಕಾಸದ ಹಾದಿಯಲ್ಲಿ ಬೈಬಲ್ಲಿನ ಜೊತೆಗೆ ಪುರಾಣವನ್ನೂ ರಕ್ತಗತ ಮಾಡಿಸಿದ್ದಕ್ಕಾಗಿ ಕಾರಂತರನ್ನು ನಾನು ಮರೆಯಲಾಗದು.
ನಾನು ಹೈಸ್ಕೂಲು (ಕಾಡುಮಲ್ಲೇಶ್ವರನ ಗುಡಿಯ ಬಳಿಯಿದ್ದ ಶಾರದಾ ವಿದ್ಯಾನಿಕೇತನ) ಸೇರುವ ವೇಳೆಗಾಗಲೇ ಕಾರಂತರ ಕಿರಿಯರ ವಿಶ್ವಕೋಶ (ನವಕರ್ನಾಟಕ ಪಬ್ಲಿಕೇಷನ್ಸ್) ಬಂದಿತ್ತು. ಆದರೆ ಅದು ಶಾಲೆಯ ಕಪಾಟಿನಲ್ಲಿ ಬಂಧಿಯಾಗಿತ್ತು. ನಾವು ಕೆಲ ಹುಡುಗರು ಈಸ್ಟ್ ಪಾರ್ಕ್ ಮೈದಾನದಲ್ಲಿ ಆಡ್ಕಂತಾ ಇದ್ದೋರು ಒಂದು ದಿನ ಕಲ್ ಬಿಲ್ಡಿಂಗ್ ಅಂತಾರಲ್ಲ, ಅದೇ ಹದಿನೆಂಟನೇ ಕ್ರಾಸ್ ಬಸ್ಟ್ಯಾಂಡ್ ಹತ್ರ ಇರೋ ಗೋರ್ಮೆಂಟಿಸ್ಕೂಲು, ಅದರಾಗೆ ಒಂದು ಲೇಬ್ರರಿ ಇರೋದ್ನ ಕಂಡಿಡಿದೋ. ಬಾಕ್ಲು ತೆಗೆದೇ ಇತ್ತು. ಅದ ನೋಡ್ಕಳೋರು ಒಬ್ರು ಬುಟ್ರೆ ಬ್ಯಾರೆ ಯಾರೂ ಇತ್ತಿಲ್ಲ. ಒಳೀಕ್ ಬರ್ಬೋದಾ ಅಂತ ಕೇಳಿದ್ದೇಟ್ಗೆ ಅಯ್ ಬನ್ನಿ ಓದ್ಕಳಿ ಅನ್ನೋದಾ. ಆಗ ಶುರುವಾಯ್ತು ನನ್ನ ಅಧ್ಯಯನದ ಪ್ರಸ್ಥಾನ. ಬಂಗಾಳ ದೇಶದ ಜಾನಪದ ಕತೆಗಳು, ಗೋನೂಝಾನ ಕತೆಗಳು, ಭಾರತಭಾರತಿ ಪುಸ್ತಕ ಸಂಪದ, ಅರೇಬಿಯನ್ ನೈಟ್ಸ್, ಮಕ್ಕಳ ಮಂಛೌಸನ್ ಹೀಗೆ ಅವೆಲ್ಲ ಆ ಕಾಲಕ್ಕೇ ಸರಿ.
ನನ್ನ ಯೌವನಕಾಲಕ್ಕೆ ಬಹುವಾಗಿ ಕಾಡಿದ್ದು ಖಂಡೇಕರರ ’ಯಯಾತಿ’ (ಇನಾಂದಾರ್ ಅನುವಾದ). ಆಮ್ಯಾಕೆ ಕೊಂಚ ಬಲಿತ ಮ್ಯಾಗೆ ಓದಿದ್ದು ಭೈರಪ್ನೋರು ಬರೆದಿರೋ ಪರ್ವ ಅಂತ ಮಾಬಾರ್ತದ ಕತೆ, ಓ ಯಾಪಾಟಿ ಐನಾತಿನನ್ಮಗಂದೂ ಅಂತೀರಾ? ತೇಜಸ್ವಿ ಅಂಬೋರು ಬರ್ದಿರೋ ಕಿರಗೂರಿನ ಗಯ್ಯಾಳಿಗಳು ಓದಿವ್ರಾ? ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲು? ಊ.. ದೇಸ ನೋಡ್ಬೇಕು ಕೋಸ ಓದ್ಬೇಕು ಅಂತಾರಲ್ಲ ದಿಟವೇನೇಯ. ಪುಸ್ತಕ ಓದ್ಬೇಕೂ ಅನ್ನೋ ತೆವಲು ನಿಮ್ಗೂ ಇದ್ರೆ ನೀವೂನೂ ಇಂಜಿನ್ ಡಿವಿಜನ್ನಾಗಿರೋ ನಮ್ ಕನ್ನಡ ಲೇಬ್ರೇರಿಗೆ ಬರಬೇಕ್ರ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)