ಸೋಮವಾರ, ಜುಲೈ 23, 2012

ಆರಕ್ಕೇರದ ಮೂರಕ್ಕಿಳಿಯದ


ಕ್ರೈಸ್ತ ಧರ್ಮವು ನಮ್ಮ ನಾಡಿಗೆ ಹೊರಗಿನಿಂದ ಬಂದ ಧರ್ಮವಾದರೂ ಅದರ ಅನುಯಾಯಿಗಳಾದ ನಾವು ಇಲ್ಲಿನ ಮಣ್ಣಿನ ಮಕ್ಕಳೇ ಆಗಿದ್ದೇವೆನಮ್ಮ ಜೀವನಶೈಲಿವೃತ್ತಿ ಮತ್ತು ಸಂಪ್ರದಾಯಗಳು ಉಳಿದ ಜನಸಮುದಾಯಗಳಿಗಿಂತ ಭಿನ್ನವಾಗೇನೂ ಇಲ್ಲಅದೇ ಕೃಷಿಜೀವನಅದೇ ವಸ್ತ್ರಾಭರಣಅದೇ ಆಚಾರ ವಿಚಾರಗಳುಅದೇ ಜಾನಪದ ಸಂಸ್ಕೃತಿಗಳುಅದೇ ನೋವು ನಲಿವುಗಳು.
ಬದಲಾಗಿದ್ದಾದರೂ ಏನು ಎಂದರೆ ಜೀವನಾದರ್ಶಗಳಿಗೆ ಧರ್ಮದ ಲೇಪ ಅಷ್ಟೇ.
ಆರಕ್ಕೇರದ ಮೂರಕ್ಕಿಳಿಯದ ಬದುಕು ನಮ್ಮದು.
ಯಾರಾದರೂ ಕೇಳಬಹುದು,
ನಿಮ್ಮದೇ ಶಾಲೆಗಳಿದ್ದೂ ನೀವು ಶಿಕ್ಷಣದಲ್ಲಿ ಹಿಂದೆ ಏಕೆಎಂದು,
ಅಲ್ಲಾ ಸ್ವಾಮಿಶಾಲೆಗಳೇನೋ ನಮ್ಮವೇವಿದ್ಯೆಯೇನೋ ಕೊಟ್ಟಿವೆಬದುಕು ರೂಪಿಸಲಿಲ್ಲವಲ್ಲ?
ನಿಜ ... ಬದುಕು ರೂಪಿಸಿಕೊಂಡವರು ಕೇರಳದ ಮಲಯಾಳಿಗರು ಹಾಗೂ ಮಂಗಳೂರಿನ ಕೊಂಕಣಿಗರುಬಯಲಸೀಮೆಗೆಲ್ಲಿ ಬರಬೇಕು ಮೇಲೇರುವ ತಂತ್ರ.
ಮತ್ತೆ ನೀವು ಕೇಳಬಹುದು,
ಯೇಸುಕ್ರಿಸ್ತನ ತತ್ವಗಳಿಂದ ನಿಮ್ಮ ಬದುಕನ್ನು ಗಟ್ಟಿಗೊಳಿಸಬಹುದಿತ್ತಲ್ಲ?
ಹೌದು ಸ್ವಾಮೀಆದರೆಯೇಸುತತ್ವಗಳಿಗಿಂತ ಜಾತಿ ಅಂತಸ್ತು ದೊಡ್ಡದು ನೋಡಿಜಾತಿ ನಮಗೆ ಬೇಡೆಂದರೂ ಅದು ನಮ್ಮನ್ನು ಬಿಡದು ಕೇಳಿಇನ್ನು ಪಾದ್ರಿಗಳನ್ನು ಬೈಯುವುದು ನಮಗೊಂದು ಚಾಳಿ.
ಹುಂ ಎಲ್ಲ ಜಾತಿಯವರೂ ತಮ್ಮನ್ನುದ್ಧರಿಸಲು ತಮಗೊಬ್ಬ ಮಠಾಧೀಶ ಬೇಕು ಅನ್ನೋವಾಗ ನಮ್ಮಲ್ಲಂತೂ ಮಠಾಧಿಪತಿಗಳು ಅನಾಯಾಸವಾಗಿ ಸಿಕ್ಕಿದರೂ ನಮ್ಮ ಏಳಿಗೆಯಾಗಲಿಲ್ಲವಲ್ಲಾ? ಅದಕ್ಕೆ ಇನ್ನೇನು ತಾನೇ ಹೇಳೋಣ.
ಎಸ್ಸೆಸ್ಸೆಲ್ಸಿ ಆಯ್ತು ಮುಂದೇನುಅದೇನೋ ನಂಗೊತ್ತಿಲ್ಲಪ್ಪಅಣ್ಣ ಬೆಂಗಳೂರಿನಾಗೆ ಇದ್ದಾನೆಹೋಗಿ ಯಾವ್ದಾದರೂ ಕೆಲಸ ಹುಡುಕಬೇಕುಅಲ್ಲೇನೂ ಕ್ರೈಸ್ತಧರ್ಮದ ಛತ್ರ ಅನ್ತ ಇಲ್ಲಚರ್ಚುಗಳಿಗೆ ದೊಡ್ಡ ಕಾಂಪೌಂಡು ಗೇಟು ಬೀಗಪಾದ್ರಿ ಮನೆಗಳಲ್ಲಿ ಸೀಳುನಾಯಿಗಳು ಅಟ್ಟಿಸಿಕೊಂಡು ಬತ್ತವೆ.
ಬೆಂಗಳೂರಲ್ಲಿ ನೆಂಟರಿಲ್ಲ ಅಂದ ಮ್ಯಾಲೆ ಊರಲ್ಲೇ ಬೀದಿ ಸುತ್ತುಎಂಥಾ ಬುದ್ಧಿವಂತ ಹುಡುಗ ಇದ್ಯಾಕಿಂಗಾದ ಅಂತ ಯಾರೂ ಕೇಳೋದಿಲ್ಲಯಾಕೆ ಅಂದರೆ ನಿನ್ನಂತೆ ಅವರೂ ಕೂಡಾ.
ಇನ್ನು ಓದಿರೋ ಮಂದೀನಾದ್ರೂ ತಮ್ಮ ಸಮುದಾಯಕ್ಕೆ ನೆರವಾಗಿದ್ದಾರಾ?
ಅಯ್ಯೋ ಬುಡ್ತು ಅನ್ನಿತಮ್ಮದು ತೊಳಕೊಳ್ಳೋಕೇ ಅವರಿಗೆ ಪುರಸೊತ್ತಿಲ್ಲಇನ್ನೊಬ್ಬರದು ಯಾಕೆ ಮೂಸಬೇಕು?
ಏನೋ ನಮ್ಮ ಕುಲ ಅನ್ತ ಒಂಚೂರು ದುಡ್ಡು ಬಿಸಾಕಿ ಸುಮ್ಮನಾಗಬೋದು.
ಇನ್ನೊಬ್ಬ ಮತ್ತೊಬ್ಬ ಅದರಲ್ಲೂ ಯಾವಯಾವುದೋ ಜಾತಿಯೋರಿಗೆ ...  ಹೋಗ್ರೀ ನಿಮ್ಮ ಕೆಲಸ ನೋಡ್ರೀ.

 ನಗ್ನಸತ್ಯಗಳ ಭೂಮಿಕೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರನ್ನು ಅವಲೋಕಿಸಿದಾಗ ಮೂಡುವ ಪ್ರಶ್ನೆಗಳು ಹಲವಾರುಅದಕ್ಕೆ ಸಿಗುವ ಉತ್ತರಗಳಂತೂ ನೂರಾರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನಮ್ಮ ದೇಶದ ರಾಜಕೀಯವು ಹಲವಾರು ತಿರುವುಗಳನ್ನು ಹಾದು ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಮೇಲಾಟಗಳಿಗಾಗಿ ಜಾತಿಧರ್ಮಗಳನ್ನು ದಾಳಗಳಾಗಿ ಬಳಸುವ ಪರಿಪಾಠ ಬೆಳೆದುಬಂದಿದೆಅನಾಯಾಸವಾಗಿ ಬಂದ ಸ್ಥಾನಮಾನಗಳನ್ನಷ್ಟೇ ನೆಚ್ಚಿಕೊಂಡು  ಸಮುದಾಯ ನಡೆದುಬಂದುದನ್ನು ನೋಡಿದ್ದೇವೆಯಾರ ಹಿಂದೆಯೂ ಹೋಗದೆ ಬಹುಶಃ ಎಲ್ಲರಿಗೂ ಬೇಕಾದವರಾಗಿದ್ದು ಕೇವಲ ದಾಕ್ಷಿಣ್ಯದ ಕಾರಣದಿಂದಲೇ ಜನಪ್ರತಿನಿಧಿಗಳಾಗಿರುವ ಸನ್ನಿವೇಶಗಳೇ ನಮಗೆ ಢಾಳಾಗಿ ಕಾಣುತ್ತವೆಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಚುನಾವಣೆಗಳನ್ನು ಎದುರಿಸಿ ಆರಿಸಿ ಬಂದಿರುವರಾದರೂ ಅವರು ಇಡೀ ಜನಸಮುದಾಯದ ಪ್ರತಿನಿಧಿಗಳಾಗಿ ವರ್ತಿಸಿದ ಮುತ್ಸದ್ದಿಗಳಾಗಿದ್ದಾರೆಯೇ ಹೊರತು ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ನ್ಯಾಯ ಒದಗಿಸಿಲ್ಲವೆನ್ನಬಹುದುನಮ್ಮ ವಿಮೋಚನೆ ನಮ್ಮಿಂದಲೇ ಆಗುತ್ತದೆಯೋ ಅಥವಾ ವಿಮೋಚಕನೊಬ್ಬನನ್ನು ಎದುರುಗೊಳ್ಳಬೇಕೋ ಎಂಬುದೇ ಇಂದಿನ ಪ್ರಶ್ನೆ.

ಗುರುವಾರ, ಜುಲೈ 12, 2012

ಸಂಸ್ಕೃತಿಯ ಉಳಿವು


ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡ ಪ್ರಾರ್ಥನೆಗೆ ಅವಕಾಶ ಕೋರಿ ಕನ್ನಡ ಭಾಷಿಕರು ಬಹುಕಾಲ ಚಳವಳಿ ನಡೆಸಿದ್ದು ಇಂದು ಹಲವರಿಗೆ ಮರೆತು ಹೋಗಿರಬಹುದು. ಸುಮಾರು ಎರಡೂವರೆ ದಶಕಗಳ ಕಾಲ ನಡೆದ ಆ ಚಳವಳಿಯು ಅಂದಿನ ದಿನಪತ್ರಿಕೆಗಳಲ್ಲಿ ಪ್ರತಿದಿನದ ಸುದ್ದಿಯಾಗಿತ್ತು. ಅಂದು ಸುದ್ದಿಯಲ್ಲಿದ್ದ ಸಾಹಿತಿ ಕಲಾವಿದರ ಬಳಗ, ಕನ್ನಡ ಗೆಳೆಯರ ಬಳಗ, ಕನ್ನಡ ಸಂಘರ್ಷ ಸಮಿತಿ, ಕನ್ನಡ ಶಕ್ತಿಕೇಂದ್ರ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಮುಂತಾದವುಗಳು ಸಹಾ ಕನ್ನಡ ಕ್ರೈಸ್ತರೊಂದಿಗೆ ಹೆಜ್ಜೆ ಹಾಕುತ್ತಾ ಗೋಕಾಕ್ ಚಳವಳಿಯೊಂದಿಗೂ ಮೇಳವಿಸಿಕೊಂಡು ಹಲವು ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದವು. ಕನ್ನಡ ಸಾಹಿತ್ಯ ಪರಿಷತ್ತು ಮೊದಲ್ಗೊಂಡು ಹಲವಾರು ಸಾಹಿತಿಗಳೂ ಚಿಂತಕರೂ ಕನ್ನಡ ಕ್ರೈಸ್ತರ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸಿ ಸರ್ಕಾರಕ್ಕೆ ಒತ್ತಡ ತಂದಿದ್ದರು.
ಅಂದಹಾಗೇ ಈ ಕನ್ನಡ ಕ್ರೈಸ್ತರ ಚಳವಳಿ ನೇಪಥ್ಯಕ್ಕೆ ಸರಿದಿದೆಯೇ, ಅವರ ಬೇಡಿಕೆಗಳು ಈಡೇರಿವೆಯೇ? ಎಂಬುದನ್ನು ಅವಲೋಕಿಸಿದಾಗ ಆ ಚಳವಳಿಯ ಬಿಸಿಯು ಬೂದಿ ಮುಚ್ಚಿದ ಕೆಂಡದಂತೆ ಕುಮುಲುತ್ತಿರುವುದು ಅರಿವಾಗುತ್ತದೆ. ಚಳವಳಿಯ ಫಲವಾಗಿ ಇಂದು ಕನ್ನಡ ಭಾಷೆಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ, ಅವರ ಚಳವಳಿಯು ಕೇವಲ ಪೂಜಾರ್ಪಣೆಯಲ್ಲಿ ಮಾತ್ರವೇ ಕನ್ನಡಕ್ಕೆ ಅವಕಾಶ ಎಂಬುದಾಗಿರಲಿಲ್ಲ. ಅದು ಚರ್ಚುಗಳಲ್ಲಿನ ಎಲ್ಲ ಸವಲತ್ತುಗಳಿಗೂ ತಾವು ಸಮಾನವಾಗಿ ಭಾಜನರಾಗಬೇಕೆನ್ನುವ ಹಂಬಲವಾಗಿತ್ತು. ಅಂದರೆ ಜೀವನದ ವಿವಿಧ ಆಯಾಮಗಳಾದ ಶೈಕ್ಷಣಿಕ ಸವಲತ್ತು, ಔದ್ಯೋಗಿಕ ಸವಲತ್ತು, ಅಧಿಕಾರದ ಹಂಚಿಕೆ, ಕನ್ನಡ ಸಂಸ್ಕೃತಿಯ ಉಳಿವು, ಕನ್ನಡಕ್ಕೆ ಪ್ರಧಾನಸ್ಥಾನ, ಹಬ್ಬದಂಥ ಸಂದರ್ಭಗಳಲ್ಲಿ ಸ್ಥಳೀಯರಿಗೆ ಮನ್ನಣೆ ಮುಂಥಾದ ವಿಸ್ತೃತ ಅಂಗಗಳನ್ನು ಒಳಗೊಂಡಿತ್ತು.
ಸ್ಥಳೀಯ ಭಾವನೆಗಳಿಗೆ ದೂರದ ರೋಮ್ ಸ್ಪಂದಿಸಿ, ಇಲ್ಲಿನ ಅಧಿಕಾರ ವರ್ಗವೂ ಸಮ್ಮತ ತೋರಿ, ಜನ ಸಮಾನ್ಯರೂ ಇದಕ್ಕೆ ಕೈ ಜೋಡಿಸಿದ್ದರಿಂದ, ಕನ್ನಡಿಗರು ಆಯಕಟ್ಟಿನ ಜಾಗಗಳನ್ನು ಪಡೆಯುವಂತಾಗಿದೆ, ಹಳ್ಳಿಗರಿಗೂ ಅವಕಾಶಗಳು ಲಭ್ಯವಾಗುತ್ತಿವೆ ಮಾತ್ರವಲ್ಲ ಧರ್ಮಪ್ರಾಂತ್ಯದ ಆಡಳಿತವೂ ಪಾರದರ್ಶಕವಾಗಿದೆ.
ಆದರೆ ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಗುರುಗಳ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಬೇಕೆನ್ನುವ ಕೂಗು ಮಾತ್ರ ಸಫಲವಾಗಿಲ್ಲ. ಏಕೆಂದರೆ ಮಲ್ಲೇಶ್ವರದಲ್ಲಿರುವ ಗುರು ತರಬೇತಿ ಸಂಸ್ಥೆಯು ಕರ್ನಾಟಕ ಮತ್ತು ತಮಿಳುನಾಡುಗಳ ಜಂಟಿ ಆಡಳಿತದಲ್ಲಿದ್ದು ಸಹಜವಾಗಿ ತಮಿಳರ ಹಿಡಿತದಲ್ಲಿದೆ. ಅಂದು ಮಹಾರಾಜರು ದಾನವಾಗಿ ನೀಡಿದ ೨೪. ಎಕರೆಗಳ ಈ ವಿಶಾಲ ಜಮೀನಿನಲ್ಲಿ ಶಾಲೆ, ಬ್ಯಾಂಕು, ಅಂಗಡಿಸಾಲು, ಪೆಟ್ರೋಲ್ ಪಂಪ್, ಅಂಚೆಕಚೇರಿಗಳಲ್ಲದೆ ಇತರ ಉಪ ಗುರುಮಠಗಳಿಗೂ ಸ್ಥಳ ಕಲ್ಪಿಸಲಾಗಿದೆ. ಆದರೆ ಕನ್ನಡಿಗರು ತಮ್ಮದೇ ನೆಲದಲ್ಲಿ ತಮಗೊಂದು ತರಬೇತಿ ಸ್ಥಳ ಬೇಕೆನ್ನುವ ಬೇಡಿಕೆಗೆ ಮಾತ್ರ ತಕ್ಕ ಸ್ಪಂದನವಿಲ್ಲವಾಗಿದೆ.
ಇತ್ತೀಚೆಗೆ ಈ ಸಂತ ರಾಯಪ್ಪರ ಗುರುಮಠದ ಆಡಳಿತಮಂಡಲಿಯ ವಾರ್ಷಿಕ ಸಭೆಯಲ್ಲಿ ಕನ್ನಡ ಕ್ರೈಸ್ತರ ಅಹವಾಲುಗಳನ್ನು ಮಂಡಿಸಲು ಆರ್ಚ್ ಬಿಷಪ್ ಬೆರ್ನಾಡ್ ಮೊರಾಸ್ ಅವರು ಅವಕಾಶ ಕಲ್ಪಿಸಿದರು. ತಮ್ಮ ಬೇಡಿಕೆ ಎಷ್ಟು ನ್ಯಾಯಯುತ ಹಾಗೂ ಎಷ್ಟು ಅತ್ಯಗತ್ಯ ಎಂಬುದರ ಕುರಿತು ಕನ್ನಡ ಕ್ರೈಸ್ತರ ಸಂಘದ ಪದಾಧಿಕಾರಿಗಳು ಎಲ್ಲ ಬಿಷಪರುಗಳ ಮುಂದೆ ಬಿನ್ನವಿಸಿಕೊಂಡರು. ಅದರ ಫಲವಾಗಿ ಇನ್ನೇನು ಸಂತ ರಾಯಪ್ಪರ ಗುರುಮಠದ ಆವರಣದಲ್ಲಿ ಪ್ರಾದೇಶಿಕ ಗುರುಮಠಕ್ಕಾಗಿ ಕಟ್ಟಡ ಮಂಜೂರಾಗುತ್ತದೆನ್ನುವಾಗ ಬೆಂಗಳೂರಿನ ಸುಮಾರು ೪೫ ತಮಿಳು ಗುರುಗಳು ಅಪಸ್ವರ ಎತ್ತಿದರು. ಇರುವ ಗುರುಮಠವೇ ಸಾಕು, ಪ್ರಾದೇಶಿಕ ಗುರುಮಠ ಬೇಡ, ಹಾಗೇನಾದರೂ ಆದಲ್ಲಿ ತಮಿಳರಿಗೆ ಅವಕಾಶಗಳು ಇಲ್ಲವಾಗುತ್ತವೆನ್ನುವ ವಾದ ಮುಂದಿಟ್ಟು ರೋಮಿನವರೆಗೆ ದೂರು ಕೊಂಡೊಯ್ದರು.
ಇದೀಗ ಈ ವ್ಯಾಜ್ಯವನ್ನು ಪರಿಶೀಲಿಸಿ ವರದಿ ನೀಡಲು ವ್ಯಾಟಿಕನ್ನಿನ ಸರ್ವೋಚ್ಛ ಪೀಠವು ಮೂರು ಬಿಷಪರುಗಳ ಒಂದು ಸಮಿತಿ ನೇಮಿಸಿದೆ. ಆ ಸಮಿತಿಯು ಇದೇ ಜುಲೈ ೧೬, ೧೭, ೧೮ರಂದು ಆಸಕ್ತರ ಅಹವಾಲುಗಳನ್ನು ಆಲಿಸಿ ವರದಿ ತಯಾರಿಸಲಿದೆ.
ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಇಷ್ಟು ವರ್ಷಗಳ ಕಾಲ ಇಲ್ಲೇ ನೆಲೆನಿಂತಿರುವ ತಮಿಳು ಜನಸಾಮಾನ್ಯರು ಮುಖ್ಯವಾಹಿನಿಯೊಂದಿಗೆ ಬೆರೆತಿರುವಾಗ ಕೆಲ ಪಟ್ಟಭದ್ರ ಗುರುಗಳ ಯಾವ ತೆವಲಿಗಾಗಿ ಈ ರೀತಿಯ ನಿಲುವು ತಳೆದಿದ್ದಾರೆ ಎಂಬುದೇ. ಹಾಗೂ ಕನ್ನಡಿಗರಿಗೆ ನ್ಯಾಯಯುತವಾಗಿ ಸಲ್ಲಬೇಕಿರುವ ಪಾಲನ್ನು ತಾವೇ ಅನುಭವಿಸಿಕೊಂಡು ಬಂದಿದ್ದಲ್ಲದೆ ಅವರಿಗೊದಗಿದ ಕಿಂಚಿತ್ ಪಾಲನ್ನೂ ಕಿತ್ತುಕೊಳ್ಳುವ ಹಾದಿ ತುಳಿದಿದ್ದಾರಲ್ಲ ಏಕೆ ಎಂಬುದಾಗಿದೆ. ಇನ್ನೆಷ್ಟು ವರ್ಷಗಳ ಕಾಲ ಅವರು ಸ್ಥಳೀಯರ ಮೇಲೆ ಸವಾರಿ ಮಾಡುತ್ತಾ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಾರೆ? ಕ್ರೈಸ್ತಧರ್ಮದ ತತ್ವವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುತ್ತದಲ್ಲವೇ? ಆದರೆ ಈ ತಮಿಳು ಸಂಕುಚಿತ ಮನೋಭಾವದ ಮಂದಿ ಕ್ರೈಸ್ತ ತತ್ವಗಳನ್ನು ಗಾಳಿಗೆ ತೂರಿ ಎಲ್ಲ ಅವಕಾಶಗಳನ್ನೂ ತಾವೇ ಬಾಚಿಕೊಳ್ಳುವ ಪರಿ ಸರಿಯೇ? ಇದರಿಂದ ಕ್ರೈಸ್ತ ಧರ್ಮಕ್ಕೇ ಅಪಚಾರವಲ್ಲವೇ?
ಕೆಲವೇ ಕೆಲವು ರೋಗಗ್ರಸ್ಥ ಮನಸ್ಸುಗಳು ಜನರ ಹಾದಿ ತಪ್ಪಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ. ವಾಸ್ತವದಲ್ಲಿ ಇಲ್ಲಿನ ತಮಿಳು ಕ್ರೈಸ್ತರೂ ಸಹಾ ಇಲ್ಲಿನ ಭಾಷೆ, ಜನ, ಸಂಸ್ಕೃತಿಯ ಜೊತೆಯಲ್ಲಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಮ್ಮ ದಿನ ನಿತ್ಯದ ಆಗು ಹೋಗುಗಳಲ್ಲಿ ಮುಖ್ಯವಾಹಿನಿಯಲ್ಲಿ ಬೆರೆತು ಹೋಗುವಂತಹ ಸಂದರ್ಭ ಬಂದಿದೆ. ಅಂತಹ ಪರಿಸ್ಥಿತಿ ಸಂದರ್ಧಕ್ಕೆ ಒಗ್ಗಿಕೊಳ್ಳುವುದೂ ಕಷ್ಟದ ಮಾತೇನಲ್ಲ ಎಂದು ಅವರುಗಳು ಈಗಾಗಲೇ ತೋರಿಸಿಕೊಟ್ಟಾಗಿದೆ. ಆದರೆ ಈ ರೀತಿಯಾಗುವುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಇಷ್ಟವಿಲ್ಲ. ಇತ್ತ ತಾವೂ ಮುಖ್ಯ ವಾಹಿನಿಯಲ್ಲಿ ಬೆರೆಯದೆ ಜನಸಾಮಾನ್ಯರನ್ನೂ ಬೆರೆಯಲು ಬಿಡದೆ ಮಾಡುತ್ತಿರುವ ಕುತಂತ್ರಗಳಿಗೆ ಪ್ರಾದೇಶಿಕ ಗುರು ತರಬೇತಿ ಮಂದಿರಕ್ಕೆ ವ್ಯಕ್ತಪಡಿಸುತ್ತಿರುವ ವಿರೋಧವೇ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಸ್ಥಳೀಯರಿಗೆ ನೆರವಾಗಲಿ, ಸ್ಥಳೀಯತೆಗೆ ಪ್ರಾಶಸ್ತ್ಯ ದೊರಕಲಿ ಎಂಬ ಕನ್ನಡ ಕ್ರೈಸ್ತರ ಬೇಡಿಕೆ ಇವರಿಗೆ ಸಂಕುಚಿತವಾಗಿ ಕಂಡರೆ,  ದಶಕಗಳ ಕಾಲ ಇವರು ತೋರಿದ ವರ್ತನೆ ಇದಕ್ಕಿಂತಲೂ ಘೋರ. ಇನ್ನಾದರೂ ಜನಸಾಮಾನ್ಯರು ಇವರುಗಳ ಸಂಕುಚಿತ ಬಣ್ಣದ ಮಾತುಗಳಿಗೆ ಸೊಪ್ಪು ಹಾಕದೆ ಇಲ್ಲಿನ ನೆಲ, ಭಾಷೆ, ಸಂಸ್ಕೃತಿಯ ಜೊತೆಗೆ ಬಾಳುವುದೇ ಸರಿಯಾದ ದಾರಿಯಾಗಿದೆ.