ಶುಕ್ರವಾರ, ಜೂನ್ 28, 2013

ಅನುವಾದ

ಅನುವಾದಗಳಲ್ಲಿ ಹೆಚ್ಚಿನವರು ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಸಂಸ್ಕೃತ ಪದಗಳನ್ನು ಕೊಟ್ಟುಬಿಡುತ್ತಾರೆ. ಕನ್ನಡ ಪದಗಳಿಗಿಂತ ಅವು ಹೆಚ್ಚಿನ ಮರ್ಯಾದೆ ಗೌರವ ತಂದುಕೊಡುತ್ತದೆಂಬುದು ಅವರ ವಾದ. ಅದು ಹೇಗೆಂದರೆ, WIFE ಎಂಬುದನ್ನು ಅವರು ಪತ್ನಿ/ಭಾರ್ಯೆ ಎಂಬುದಾಗಿ ಅನುವಾದಿಸುತ್ತಾರೆ. ಹೆಂಡತಿ ಎಂದು ಬರೆದರೆ ಗಂಡನ ಗೌರವ ಕಡಿಮೆಯಾಗುತ್ತದೆಂಬ ಭಾವನೆಯಿರಬಹುದು, ಪತ್ನಿ ಎಂದು ಬರೆದರೆ ಗಂಡ ಹೆಂಡತಿ ಇಬ್ಬರಿಗೂ ಮರ್ಯಾದೆ ಎಂದೂ ಕೂಡಾ ಇರಬಹುದೇನೋ? ಇಂತಹ ಅನುವಾದವನ್ನು ಒಪ್ಪಿಕೊಳ್ಳಲೇಬೇಕು ಎಂಬಂತ ಅನಿವಾರ್ಯತೆ ಇಂದು ಸಾರ್ವತ್ರಿಕವಾಗಿಬಿಟ್ಟಿದೆ.
ಹೀಗೆ ನಾವು ಕನ್ನಡದ್ದೇ ಆದ ಮೂಡಣ ಪಡುವಣಗಳನ್ನು ಬಿಟ್ಟು ಪೂರ್ವ ಪಶ್ಚಿಮ ಎಂದು ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮಿಳರ ಭಾಷಾಭಿಮಾನ ಅನುಕರಣೀಯ. RADIOಗೆ ನಮ್ಮವರು ಆಕಾಶವಾಣಿ ಎಂದು ಹೆಸರಿಟ್ಟರೇನೋ ಸರಿಯೇ, ಆದರೆ ತಮಿಳರು ಅದನ್ನು ವಾನ್ (ಆಗಸ) ಉಲಿ (ವಾಣಿ) ಎಂದರೆ ವಾನುಲಿ ಎಂದು ಕರೆದರು. ಆಮೇಲೆ ನಮ್ಮ ಕೆಲ ಕೇಂದ್ರಗಳೂ ಬಾನುಲಿ ಎಂದು ಕರೆದುಕೊಂಡವು ಎಂಬುದು ಹಳೆಕತೆ. ನಮ್ಮಲ್ಲೇ TEST BED ಎಂಬುದನ್ನು ನಮ್ಮ ಸ್ನೇಹಿತರೊಬ್ಬರು ಪರೀಕ್ಷಾತಲ್ಪ ಎಂಬುದಾಗಿ ಅನುವಾದಿಸಿದ್ದರು. ಅವರು ಪರೀಕ್ಷೆ ನಡೆಸುವ ಹಾಸಿಗೆ ಎಂದು ಮಾಡಬೇಕಿತ್ತು. ಆಗ ಜನರು ಹಾಸಿಗೆಯ ಮೇಲೆ ಅದೆಂಥ ಪರೀಕ್ಷೆ ಎಂದು ಕೇಳುತ್ತಿದ್ದರು. ಅದು ಕಂಡಿತ ನಗೆಪಾಟಲಿನ ವಿಷಯ. ಅದಕ್ಕೇ ಸುಸಂಸ್ಕೃತರಾದ ಅವರು ಸಂಸ್ಕೃತದ ಮರೆಹೊಕ್ಕು ತಲ್ಪ ಎಂದದ್ದು. ಪದಶಃ ಅನುವಾದ ಮಾಡಿದರೆ ಆಗೋದೇ ಹೀಗೆ.
ಟೆಸ್ಟ್ ಬೆಡ್ ಎಂಬ ಪದವನ್ನು ನಿಘಂಟು ನೋಡಿ ಅರ್ಥ ಹುಡುಕದೆ ಅದು ಬಳಕೆಯಾಗುತ್ತಿರುವ ಜಾಗ ಎಂಥದು, ಅಲ್ಲೇನು ಕೆಲಸ ನಡೆಯುತ್ತದೆ ಎಂದು ಅರಿತರೆ ಅನುವಾದ ಸಲೀಸು. ವಿಮಾನಕ್ಕೆ ಇಂಜಿನನ್ನು ಅಳವಡಿಸುವ ಮುನ್ನ ಅದು ಹಾರಾಟಕ್ಕೆ ಯೋಗ್ಯವೇ ಎಂದು ಪರೀಕ್ಷಿಸುವುದು ಈ ಟೆಸ್ಟ್ ಬೆಡ್ಡಿನಲ್ಲಿಯೇ. ಅಂದ ಮೇಲೆ ವಿಮಾನದ ಎಲ್ಲ ಮಾನಕಗಳನ್ನೂ ನೆಲದಲ್ಲಿಯೇ ಅಳವಡಿಸಿ ಅದಕ್ಕೆ ತಕ್ಕಂತೆ ಯಂತ್ರವು ವರ್ತಿಸುತ್ತಿದೆಯೇ ಎಂದು ಒರೆಗೆ ಹಚ್ಚಿ ನೋಡುವುದು. ಆದ್ದರಿಂದ ನಾನು TEST BED ಎಂಬುದನ್ನು ’ಒರೆಪೀಠ’ ಎಂದು ಕರೆದೆ. ಜನ ಅದನ್ನು ಒಪ್ಪಿಕೊಂಡಿದ್ದಾರೆ.
ಈಗ ನಾವಿರುವುದು ಇಂಟರ್ ನೆಟ್ ಕಾಲದಲ್ಲಿ. ಇಂಟರ್ನೆಟ್ ಎಂಬ ಪದವನ್ನಾದರೂ ನಾವು ಕನ್ನಡದ ಜಾಯಮಾನಕ್ಕೆ ತಕ್ಕಂತೆ ರೂಪಿಸಬೇಕಿತ್ತು. ಆದರೆ ಅದು ಅಂತರಜಾಲ ಎಂಬುದಾಗಿ ಬಳಕೆಗೆ ಬಂದುಬಿಟ್ಟಿತು. INTERNATIONAL ಎಂಬುದನ್ನು ಅಂತರ ರಾಷ್ಟ್ರೀಯ ಎಂಬುದಾಗಿ ಬಳಸಿಕೊಂಡು ಬಂದುಬಿಟ್ಟಿದ್ದೇವೆ. ಅದೇ ನೇರದಲ್ಲಿ INTERNET ಬಳಸಿದ ಮೊದಲಿಗರು ಮೊದಲ ಪದಕ್ಕೆ ಅಂತರ ಎಂದು ಅನ್ವಯಿಸಿದರು. ಇನ್ನು ಎರಡನೇ ಪದ NET ಎಂಬುದನ್ನು ಬಲೆ ಎನ್ನಬಹುದಾಗಿತ್ತಲ್ಲವೇ? ಇಲ್ಲೂ ಮತ್ತೆ ಸಂಸ್ಕೃತಕ್ಕೆ ಜೀತಗೈಯುವುದು ಸರಿಯೇ?
ಮೊನ್ನೆಮೊನ್ನೆ ಕನ್ನಡದ ಕೋಟ್ಯಾಧಿಪತಿಯಲ್ಲಿ TRAIN ಎನ್ನಲು ಕನ್ನಡ ಪದವೇನು ಎಂದು ಕೇಳಿ ಅದಕ್ಕೆ ಉತ್ತರವನ್ನೂ ಹೇಳಿದರು. ಅದು ’ಧೂಮ್ರಶಕಟ’ಅಂತೆ. ಅಲ್ಲಪ್ಪಾ ನಾವು ಚಿಕ್ಕ ಹುಡುಗರಿದ್ದಾಗಲೇ TRAIN ಗೆ ಉಗಿಬಂಡಿ ಎಂದು ಕರೆದಿದ್ದು ಸಾಮಾನ್ಯವಾಗಿತ್ತು. ಉಗಿಯ ಅಥವಾ ಹಬೆಯ ಶಕ್ತಿಯಿಂದ ಓಡುವ ಬಂಡಿ. ಕೈಲಾಸಂ ಹೇಳುವಂತೆ ಎತ್ತು ಕುದುರೆ ಇಲ್ಲದೆ ಗಾಡಿ. ಈಗ ಹಬೆಯ ಬಂಡಿ ಇಲ್ಲ, ಏನಿದ್ದರೂ ಡೀಸೆಲ್ ಅಥವಾ ವಿದ್ಯುತ್ತಿನಿಂದ ಚಲಿಸುವ ರೈಲು. ಆದರೆ ನಮ್ಮ ಬಂಡಿಯನ್ನು ನಾವು ಶಕಟ ಎನ್ನುವ ಸಂಕಟವಾದರೂ ಏಕೆ?
CRECHE ಅನ್ನು ಶಿಶುಪಾಲನ ಕೇಂದ್ರ ಎಂದು ಬರೆದಿರುವುದನ್ನು ನೋಡಿದ್ದೇವಲ್ಲವೇ? ಅದೂ ಸಹ ಇಂತಹುದೇ ವಿಪರೀತ ಬುದ್ಧಿಯ ಅನುವಾದ ಎನ್ನಬಹುದು. ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳನ್ನು ಅಂದರೆ ಎಳೆಯ ಕೂಸುಕಂದಮ್ಮಗಳನ್ನು ಆರೈಕೆಗಾಗಿ ಬಿಟ್ಟುಹೋಗುವ ಮನೆಯನ್ನು ಚಿಕ್ಕದಾಗಿ ಕೂಸಿನಮನೆ, ಕಂದಕುಟೀರ, ಮಕ್ಕಳಾರೈಕೆ ಎನ್ನಬಹುದಲ್ಲ? ಶಿಶುಪಾಲನ ಕೇಂದ್ರ ಅನ್ತಲೇ ಯಾಕೆ, ಶಿಶುಪಾಲನಿಗಿಂತಲೂ ದುರ್ಯೋಧನ ತನ್ನ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದವನೆಂದು ರನ್ನನ ಗದಾಯುದ್ಧದಲ್ಲಿ ಓದಿದ್ದೇವೆ. ತಂದೆಗೆ ಮಗನಾದವನು ಎಳ್ಳುನೀರು ಬಿಡಬೇಕಾದುದು ಧರ್ಮ, ಆದರೆ ನನಗಿಂತ ಮೊದಲು ನನ್ನ ಮಗ ಯುದ್ಧದಲ್ಲಿ ಮಡಿದು ನಾನೇ ಅವನಿಗೆ ತರ್ಪಣ ಬಿಡುವಂತಾಯಿತೇ ಎಂದು ಹಲುಬುತ್ತಾನೆ. ಆದ್ದರಿಂದ ಶಿಶುಪಾಲನ ಕೇಂದ್ರ ಎನ್ನುವ ಬದಲು ದುರ್ಯೋಧನ ಕೇಂದ್ರ ಎಂದೇಕೆ ಕರೆಯಬಾರದು? ಹಾಗೆಯೇ ಕೆಲವು ಸ್ಥಳಗಳನ್ನು ಕೀಚಕ ಕೇಂದ್ರ ಎಂದೂ ಕರೆಯೋಣ. ಇರಲಿ, ಮತ್ತೆ ಇಂಟರ್‌ನೆಟ್ ಗೆ ಬರೋಣ. ಈಗಾಗಲೇ ಕೆಲ ಕನ್ನಡಿಗರು ಇದನ್ನು ಮಿನ್ ಬಲೆ ಎಂದು ಕರೆದಿದ್ದಾರೆ. ಮಿಂಚಿನ ವೇಗದಲ್ಲಿ ಬೇಕಾದ್ದನ್ನು ತೆರೆದು ತೋರುವ ಇಂಟರನೆಟ್ಟಿಗೆ ಮಿಂಬಲೆ ತುಂಬಾನೇ ಸರಿಹೊಂದುವ ಹೆಸರಾಗಿದೆ. ನಿಧಾನಗತಿಯ ನಮ್ಮ ಅಂಚೆ ವಿಧಾನಕ್ಕಿಂತ ಮಿಂಚಿನ ಸಂಚಾರದ ಅಂಚೆಯಾದ ಈ-ಮೇಲ್ ಅನ್ನು ಮಿನ್ನಂಚೆ ಎಂದು ಕರೆದು ಅದು ಚಲಾವಣೆಗೆ ಬರುತ್ತಲಿದೆ. ಹಾಗೆಯೇ ಮೊಬೈಲ್ ದೂರವಾಣಿಗೆ ಜಂಗಮವಾಣಿ ಎಂಬ ಪ್ರಯೋಗವೂ ಜನಪ್ರಿಯವಾಗಿದೆ.
ಅದೇ ರೀತಿ ನಮ್ಮ ದೈನಂದಿನ ಬಳಕೆಯ ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಆದಂತಹ ಪದಗಳನ್ನು ಹುಡುಕಿ ಬಳಸಿ ಜನಪ್ರಿಯಗೊಳಿಸೋಣ.

ಬುಧವಾರ, ಜೂನ್ 19, 2013

ಒಂದು ಒಡಪು

ಗಂಜಾಮಿನ ಅಮಲೋದ್ಭವಿ ತಾಯಿಯ ಗುಡಿಯ ಮುಂದೆ ಒಂದು ಪ್ರಾಚೀನ ಸ್ಮಾರಕವಿದ್ದು ಅದರಲ್ಲಿ ತೂಗಾಡುತ್ತಿರುವ ಗಂಟೆಯ ಮೇಲೆ ’ಹಿಲ್ಡಾ ಆ ಪಾರೀ’ ಅನ್ತ ಬರೆದಿದೆ. ಅಂದರೆ ಪ್ಯಾರಿಸ್ಸಿನ ಹಿಲ್ಡಾ ಎಂದರ್ಥ. ಇಂಥ ಅರ್ಥಗಳನ್ನು ಹುಡುಕುವುದು ಈಗ ಕಷ್ಟವೇನಲ್ಲ. www.translate.google.com ತೆರೆದು ಫ್ರೆಂಚ್ ಭಾಷೆಯಿಂದ ಕನ್ನಡಕ್ಕೆ ಆಯ್ದುಕೊಂಡರೆ ಸಾಕು. ಏನೆಲ್ಲವನ್ನೂ ತರ್ಜುಮೆ ಮಾಡಿಕೊಳ್ಳಬಹುದು. ಅಲ್ಲಿಯೇ ಶಿಲುಬೆ ಕಲ್ಲಿನ ಮೇಲೆ ಬರೆದಿರುವ IHS ಎಂದರೇನೆಂದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಫಾದರ್ ಮೋಹನ್ ಯೇ.ಸ. ಅವರನ್ನು ಕೇಳಿದ್ದೆ. ಅದಕ್ಕವರು ’ಇಯೇಸುಸ್ ಹೊಮಿನೆಸ್ ಸಾಲ್ವೆತೋರುಮ್’ ಎಂದು ಉತ್ತರಿಸಿದ್ದರು. ಕೀರ್ತನೆ ಪುಸ್ತಕದ ಮೇಲೆ ಅಚ್ಚಾಗಿರುವ AMDG ಎಂಬ ಒಗಟನ್ನು ಬಿಡಿಸಲು ಈಗ ಮೋಹನರ ನೆರವು ಬೇಕಿಲ್ಲ, ಗೂಗಲ್ ಸಾಕು. ಅಲ್ಲಾ ಈ ಗೂಗಲ್ ಮೂಲಕ ಏನೆಲ್ಲವನ್ನೂ ಬಿಡಿಸಬಹುದುಲ್ಲ ಎಂಬುದೇ ಆಶ್ಚರ್ಯ. ಬಹುಶಃ ಮಕ್ಕಳು ಏನಾದರೂ ತರಲೆ ಪ್ರಶ್ನೆ ಮಾಡಿದಾಗ ಹೋಗಿ ಅಮ್ಮನ ಹತ್ರ ಕೇಳು ಅನ್ನೋದು ಬದಲಾಗಿ ಹೋಗಿ ಗೂಗಲ್ ಜಾಲಾಡು ಎನ್ನುವಂತ ಕಾಲ ಬಂದೀತೇನೋ?
ಯಾಕೆ ಇಷ್ಟೆಲ್ಲ ಪೀಠಿಕೆ ಅಂದರೆ, ಮೊನ್ನೆ ಭಾನುವಾರ ಶುಭಸಂದೇಶ ಓದುವಾಗ ಒಂದು ಒಗಟಿನಂತ ಮಾತು ಬಂತು. ಅದು ’ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ ಆ ನಾರುಮಡಿಗಳೊಡನೆ ಇರದೆ ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು . . ನೋಡಿ ನಂಬಿದನು’. ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿ ನಂಬಿದನು ಎಂಬುದೇ ಆ ಒಡಪು. ಆ ಒಡಪನ್ನು ಬಿಡಿಸಲು ಮತ್ತೆ ಗೂಗಲ್ ತಡಕಿದೆ. ನಮ್ಮ ಕನ್ನಡದ ಪವಿತ್ರ ಬೈಬಲ್ಲಿನ ಇದೇ ಪಠ್ಯವನ್ನು ಕ್ಲರೇಷಿಯನ್ ಸಂಸ್ಥೆಯು ಪ್ರಕಟಿಸಿರುವ Christian Community Bible ನಲ್ಲಿ ನೋಡಿದಾಗ ಅದು ವಿಭಿನ್ನವಾಗಿತ್ತು. ಆ ಪುಸ್ತಕದ ಮುಖಪುಟದಲ್ಲಿ complete text translated from original languages ಎಂದು ಹೇಳಲಾಗಿದೆ. ಅದರ ಪ್ರಕಾರ John 20:7-9 ರಲ್ಲಿನ ಪಠ್ಯ ಹೀಗಿದೆ; ‘The napkin, which had been around his head was not lying flat like the other linen cloths, but lay rolled up in its place. Then the other disciple who had reached the tomb first also went in, he saw and believed. Scripture clearly said that he must raise form the dead, but they had not yet understood that.’
ಆದರೆ ಅದು ನ್ಯಾಪ್ಕಿನ್ ಅಥವಾ ಕರವಸ್ತ್ರ ಅಲ್ಲವೆಂದು ಹೇಳಿ ಈ ಜಾಲತಾಣದಲ್ಲಿ ನಡೆದಿರುವ ಚರ್ಚೆ ಹೀಗಿದೆ: When Peter, and then later John, entered the tomb they found something intriguing about these burial garments: something so utterly astounding that it erased their doubts and established their faith in our Lord's resurrection from the dead. They "saw the strips of linen lying there, as well as the burial cloth that had been around Jesus' head. The cloth was folded up by itself, separate from the linen" (John 20:7, NIV). Now, you and I, as we read this statement, may not find much to astound us. But, most translations have not really captured, in their English rendering of the text, what Peter and John were beholding and perceiving in that tomb. Indeed, in some translations, the wording is even misleading. For example, there are a few versions where the face/head wrap is referred to as a "napkin" (King James Version, American Standard VersionRevised Standard VersionYoung's Literal TranslationNew English Bible). These are major translations that have greatly influenced our religious language. Another unfortunate rendering of the Greek term is "handkerchief" (New King James VersionDarby Translation, the modern translation by J. B. Phillips, and even the version by Hugo McCord). Most versions, however, simply render the Greek term as "the wrapping" or "the cloth." The words "napkin" and "handkerchief" leave the wrong impression in our minds, and can lead to some strange interpretations (such as the "eRumor" making the rounds on the Internet in which a "folded napkin at the dinner table" is supposed to convey to a servant that the master is coming back -- well, there was no such Jewish custom in that day; such "dinner napkins" were not even used, and a number of Orthodox Jewish rabbis and scholars in Jerusalem, when questioned about this, stated they had never even heard of such a thing).
 ಅಂದ ಮೇಲೆ ಕನ್ನಡದ ಭಾಷಾಂತರದಲ್ಲಿ ಹೇಳಿರುವ ತಲೆಗೆ ಸುತ್ತಿದ್ದ ಬಟ್ಟೆ ಎಂಬುದು ಸರಿಯಾದ ಪದವಾಗಿದೆ. ಆದರೆ ಅದನ್ನು ಮಡಚಿ ಇಟ್ಟಿದ್ದನ್ನು ನೋಡಿ ನಂಬಿದ್ದಾದರೂ ಏನನ್ನು ಮತ್ತ ಹೇಗೆ ಎಂಬುದು ನಿಜವಾದ ಒಡಪು. ಇದನ್ನು ಬಿಡಿಸಿ ಹೇಳುವರುಂಟೇ?


ಸೋಮವಾರ, ಜೂನ್ 10, 2013

ಗಿರೀಶ್ ಕಾರ್ನಾಡ್

ಮಹಾರಾಷ್ಟ್ರದ ಮಾಥೇರಾನದಲ್ಲಿ ೧೯೩೮ ಮೇ ೧೯ರಂದು ಜನಿಸಿದ ಗಿರೀಶ ಕಾರ್ನಾಡರ ಪ್ರಗತಿಪರ ವಿಚಾರಗಳು ತಂದೆಯಿಂದ ಪಡೆದ ಬಳುವಳಿ. ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡ ತಂದೆ ರಘುನಾಥರು, ಸಮಾಜವನ್ನು ಧಿಕ್ಕರಿಸಿ ಬಾಲ್ಯವಿಧವೆ ಕೃಷ್ಣಾಬಾಯಿಯನ್ನು ಮದುವೆಯಾದರು. ಇವರ ದಾಂಪತ್ಯದ ಫಲವೇ ಗಿರೀಶ್ ಕಾರ್ನಾಡ್. ಗಿರೀಶರ ಮನೆಮಾತು ಕೊಂಕಣಿ, ಹಾಗೂ ಅವರ ಶಿಕ್ಷಣವೆಲ್ಲ ಕರ್ನಾಟಕದಲ್ಲೇ ನಡೆಯಿತು. ಆಮೇಲೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ಹೋದ ಅವರು ಅಲ್ಲಿನ ಆಕ್ಸ್ಫರ್ಡ್ ವಿವಿಯಲ್ಲಿ ಇಂಗ್ಲಿಷ್ ಅಭ್ಯಸಿಸಿದರು. ಅದರ ಚರ್ಚಾವೇದಿಕೆಯನ್ನು ಮುನ್ನಡೆಸಿದ ಮೊದಲ ಪೌರ್ವಾತ್ಯರಿವರು. ಅದರ ಪರಿಣಾಮವಾಗಿ ಇವರಿಗೆ ಇಂಗ್ಲೆಂಡಿನ ವಾಗ್ಮಿಗಳ ಕಲಾವಿದರ ಸಹವಾಸ ಲಭ್ಯವಾಯಿತು. ಅದು ಅವರ ಒಳಪ್ರತಿಭೆಯನ್ನು ಹೊರಗೆಡವಿತು. ಅಲ್ಲಿಂದ ಚಿಕಾಗೊ ವಿವಿಗೆ ಪ್ರಾಧ್ಯಾಪಕರಾಗಿ ತೆರಳಿದ ಅವರು ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿದರು. ಅಲ್ಲಿದ್ದಾಗಲೇ ಕನ್ನಡದಲ್ಲಿ ನಾಟಕಗಳನ್ನು ರಚಿಸಿದರು.
ನಮ್ಮ ನಾಡಿಗೆ ಹಿಂದಿರುಗಿದ ಮೇಲೆ ಅವರು ಪ್ರದರ್ಶಿಸಿದ ನಾಟಕಗಳು ಜನಮನ ಗೆದ್ದವು ಮಾತ್ರವಲ್ಲ ಹಿಂದೀ, ಪಂಜಾಬಿ, ಮರಾಠಿ ಮುಂತಾದ ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನಗೊಂಡವು. ಹಾಗೆ ನೋಡಿದರೆ ಅವರು ಇಂಗ್ಲಂಡಿಗೆ ತೆರಳುವ ಮೊದಲೇ ರಚಿಸಿದ್ದಯಯಾತಿನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಗಿತ್ತು. ವಿದೇಶದಿಂದ ಹಿಂದಿರುಗಿದ ಮೇಲೆ ಬರೆದತುಘಲಕ್ನಾಟಕ ಜವಾಹರಲಾಲ್ ಅವರ ವಿಡಂಬನೆಯಾಗಿತ್ತು. ನಾಟಕ ನವದೆಹಲಿಯಲ್ಲಿ ನೂರಾರು ಪ್ರದರ್ಶನ ಕಂಡು ಗಿರೀಶರಿಗೆ ಅಪಾರ ಹೆಸರು ತಂದುಕೊಟ್ಟಿತು. ಅವರುಹಯವದನ’, ‘ಅಂಜುಮಲ್ಲಿಗೆ’, ‘ನಾಗಮಂಡಲ’, ‘ತಲೆದಂಡ’, ’ಅಗ್ನಿ ಮತ್ತು ಮಳೆಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಬಿಬಿಸಿಗಾಗಿ ನಾಟಕ:’ಟಿಪ್ಪುವಿನ ಕನಸುಗಳು’. ಕನ್ನಡದಲ್ಲಿ ನಾಟಕ ರಚಿಸುತ್ತ, ಇತರ ಭಾಷೆಗಳೊಂದಿಗೆ ಸಾಂಸ್ಕೃತಿಕ ರಾಯಭಾರತ್ವ ವಹಿಸಿರುವ ಕಾರ್ನಾಡ್ ನಟರಾಗಿ, ನಿರ್ದೇಶಕರಾಗಿ ಹೆಸರಾಗಿದ್ದಾರೆ. ಆರಂಭದಲ್ಲಿ ರಂಗಭೂಮಿ ನಟರಾಗಿದ್ದವರು ಹೊಸ ವಿಚಾರಗಳತ್ತ ಗಮನ ಹರಿಸಿ ನಾಟಕ ರಚನೆಗೆ ಚಿಂತಿಸಿದರು. ಹೀಗಾಗಿ ಪುರಾಣ, ಇತಿಹಾಸಗಳ ಪಾತ್ರಗಳನ್ನು ಸಮಕಾಲೀನ ಸಂದರ್ಭದ ಆಗುಹೋಗುಗಳೊಂದಿಗೆ ಸಮೀಕರಿಸುವ ವಾಸ್ತವ ನೆಲೆಗಟ್ಟಿನಲ್ಲಿ ನೇಯ್ದರು.
ಸಿನಿಮಾರಂಗದಲ್ಲೂ ಕಾರ್ನಾಡರದು ಬಹುಮುಖ ಪ್ರತಿಭೆ. ಕನ್ನಡ ಚಿತ್ರರಂಗಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟವರೇ ಅವರು. ಅವರು ಚಿತ್ರಕತೆ ಬರೆದು ನಟಿಸಿದಸಂಸ್ಕಾರಚಲನಚಿತ್ರ ಕನ್ನಡಕ್ಕೆ ಮೊತ್ತಮೊದಲ ಸ್ವರ್ಣಕಮಲ ತಂದುಕೊಟ್ಟಿತು. ಅದು ಕನ್ನಡದ ಮೊದಲ ಕಲಾತ್ಮಕ ಚಿತ್ರವೂ ಆಗಿದೆ. ಅಲ್ಲಿಂದ ಮುಂದೆ ಅವರು ನಿರ್ದೇಶಿಸಿದ  ‘ತಬ್ಬಲಿಯು ನೀನಾದೆ ಮಗನೆ’, ‘ಕಾಡು’, ‘ಒಂದಾನೊಂದು ಕಾಲದಲ್ಲಿಚಿತ್ರಗಳು ಪ್ರಶಸ್ತಿಗಳ ಸರಮಾಲೆಯನ್ನೇ ಕಂಡವು. ಕುವೆಂಪು ಅವರಕಾನೂರು ಹೆಗ್ಗಡಿತಿಯನ್ನು ನಿರ್ದೇಶಿಸಿದ್ದು ಅವರ ಮತ್ತೊಂದು ಹೆಗ್ಗಳಿಕೆ. ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಹಿಂದೀ ಭಾಷೆಯಲ್ಲೂ ಅವರುಉತ್ಸವ’, ‘ಗೋಧೂಳಿಎಂಬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ’ ದಿನಗಳುಎಂಬ ಕನ್ನಡ ಚಲನಚಿತ್ರದಲ್ಲಿ ಅವರದು ಮನೋಜ್ಞ ಅಭಿನಯ.
ಇವಲ್ಲದೆ ಅನೇಕ ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ, ಪರಿಸರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರಸಿದ್ಧರ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್ಪಾಲ್ ಮಾರ್ಗದರ್ಶನದದಿ ಟರ್ನಿಂಗ್ ಪಾಯಿಂಟ್ಎನ್ನುವ ದೂರದರ್ಶನದ ಧಾರಾವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ಕೃತಿಗಳನ್ನು ನಮ್ಮ ದೇಶದ ಇತರ ಭಾಷೆಗಳ ಪ್ರಸಿದ್ದ ನಿರ್ದೇಶಕರಾದ ಇಬ್ರಾಹಿಂ ಅಲ್ಕಾಜಿ,ಅಲಿಖ್ ಪದಮ್ಸೀ, ಅರವಿಂದ ಗೌರ್, ಪ್ರಸನ್ನ, ವಿಜಯ ಮೆಹ್ತಾ, ಸತ್ಯದೇವ ದುಬೆ, ಶ್ಯಾಮಾನಂದ ಜಲಾನ್ ಹಾಗೂ ಅಮಲ್ ಅಲ್ಲಾನ ಮುಂತಾದವರು ತಂತಮ್ಮ ರಾಜ್ಯಭಾಷೆಗಳಲ್ಲಿ ಪ್ರಯೋಗಿಸಿದ್ದಾರೆ ಎಂಬುದು ಕಾರ್ನಾಡರಿಗೆ ಮಾತ್ರವಲ್ಲ ಕನ್ನಡಕ್ಕೆ ಹೆಮ್ಮೆ ತರುವ ವಿಷಯವಾಗಿದೆ.

ಕಾರ್ನಾಡರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆತಿದೆ. ನಾಟಕ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು. ಇಂಗ್ಲೆಂಡಿನಲ್ಲಿ ನೆಹರು ಸೆಂಟರಿನ ನಿರ್ದೇಶಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ನಾಲ್ಕು ಸಾರಿ ಫಿಲಂ ಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕನ್ನಡನಾಡಿನ ಹೊರಗಿದ್ದುಕೊಂಡೂ ಕನ್ನಡದ ಕಂಪನ್ನು ದೇಶದೆಲ್ಲೆಡೆ ಹರಡಿದ ಮಹಾನ್ ಕನ್ನಡಪ್ರೇಮಿ ನಮ್ಮ ನಿಮ್ಮೆಲ್ಲರ ಹೆಮ್ಮೆ.