ಸೋಮವಾರ, ಮೇ 21, 2012

ಪುನರುತ್ಥಾನ


ಸರಿಯಿತು ಕಲ್ಲು ತೆರೆಯಿತು ಬಾಗಿಲು
ಯೇಸು ಹೊರಹೋಗಲೆಂದಲ್ಲ
ಹೊಸ ಜೀವ ಹೊಸ ಭಾವ
ಉದಯಿಸಿರುವುದ ನಾ ಕಾಣಲೆಂದು

ಕ್ರಿಸ್ತನೆದ್ದಿರುವನು ನಿಜ
ಆದರೆ ನಾನಿನ್ನೂ ಎದ್ದಿಲ್ಲ
ನಾನಿನ್ನೂ ಎದ್ದಿಲ್ಲ ಪಾಪಕೂಪದಿಂದ

ಕ್ರಿಸ್ತ ನೀ ಬಾರಾ ಪೊರೆಯೆನ್ನ
ದುರಾಸೆಯ ಬಲೆಯಿಂದ
ಅಸೂಯೆಯ ಸೆರೆಯಿಂದ
ಧನದಾಹದ ಮದದಿಂದ

ಹೆಸರು ಮಾಡುವ ಮೋಹ
ಅಳಿದುಹೋಗಲಿ ಸ್ವಾಮಿ
ಬದುಕಗೊಡಿಸುವ ಗುಣವು
ನನ್ನಲುದಯಿಸಲಿ

ನನ್ನಾತ್ಮ ಬಲವು ನೀನು
ನನ್ನ ಜೀವದ ಬೆಳಕು
ನಿನ್ನ ಭರವಸೆಯ ದಾರಿಯಲಿ
ಎನ್ನ ಮುನ್ನಡೆಸು

ಕಾಮೆಂಟ್‌ಗಳಿಲ್ಲ: