ಗುರುವಾರ, ಅಕ್ಟೋಬರ್ 15, 2020

ನೆತ್ತಮನಾಡಿ..


ಯೊವಾನ್ನ ೭ನೇ ಅಧ್ಯಾಯ
ತನಗೆ ವಿರೋಧಿಗಳು ಹೆಚ್ಚಾಗಿರುವುದನ್ನು ಅರಿತ ಯೇಸು ಪರ್ಣಶಾಲೆಗಳ ಜಾತ್ರೆಗೆ ಹೋಗದೆ ಮನೆಯಲ್ಲಿಯೇ ಉಳಿದು ತನ್ನ ಸೋದರರನ್ನಷ್ಟೇ ಕಳಿಸುತ್ತಾನೆ. ಆಮೇಲೆ ಯಾರಿಗೂ ತಿಳಿಯದಂತೆ ತಾನು ಹೊರಟು ಜೆರುಸಲೇಮ್ ಗುಡಿಯಲ್ಲಿ ಕಾದಿದ್ದ ಜನರಿಗೆ ಬೋಧಿಸ ತೊಡಗುತ್ತಾನೆ. 
ಈ ಸುದ್ದಿ ಹಿರೀಕರ ಸಭೆಗೆ, ಮಹಾಗುರುವಿಗೆ, ಫರಿಸಾಯರಿಗೆ ತಿಳಿದು ಅವರು ಸಿಡಿಮಿಡಿಗೊಳ್ಳುತ್ತಾರೆ. 
ಆದರೂ ಧರ್ಮಶಾಸ್ತ್ರದ ವಿದ್ವಾಂಸರನ್ನು ಕರೆಸಿ ಯೇಸುವಿನ ಭಾಷಣದಲ್ಲಿ ಬಂಡಾಯದ ಅಥವಾ ಸಂಪ್ರದಾಯ ವಿರೋಧದ ಮಾತುಗಳಿವೆಯೇ ಎಂದು ಪರೀಕ್ಷಿಸುವಂತೆ ಹೇಳುತ್ತಾರೆ.
ಹಾಗೆ ಬಂದ ವಿದ್ವಾಂಸರಿಗೆ ಯೇಸುವಿನ ಮಾತುಗಳಲ್ಲಿ ಏನೂ ತಪ್ಪು ಕಾಣುವುದಿಲ್ಲ.
ಆ ವಿದ್ವಾಂಸರ ತಂಡದಲ್ಲಿದ್ದ ನಿಕೊದೆಮುಸ್ ಮೊದಲೊಮ್ಮೆ ಯೇಸುವನ್ನು ಗುಟ್ಟಾಗಿ ಸಂಧಿಸಿ ವಿಚಾರ ವಿನಿಮಯ ನಡೆಸಿದ್ದವನು. 
ಈ ಭೇಟಿಯಿಂದ ಅವರಿಬ್ಬರ ಗೆಳೆತನ ಗಟ್ಟಿಯಾಯಿತು.
ಮುಂದೆ ಯೇಸು ಅವಮಾನಕರವಾದ ಮರಣ ಹೊಂದಿದರೂ ಆತನನ್ನು ಗೌರವಯುತವಾಗಿ ಸಮಾಧಿ ಮಾಡಿದ್ದು ನಿಕೊದೆಮನೆಂಬ ಈ ಗೆಳೆಯನೇ.

ಕಾಮೆಂಟ್‌ಗಳಿಲ್ಲ: